ಸಾಧ್ವಿ ಪ್ರಗ್ಯಾ ಠಾಕೂರ್ 
ದೇಶ

ತನಿಖಾ ತಂಡದ ಕಸ್ಟಡಿಯಲ್ಲಿದ್ದಾಗ ಅನುಭವಿಸಿದ ಕಿರುಕುಳ ನೆನೆದು 'ಕಣ್ಣೀರಿಟ್ಟ' ಸಾಧ್ವಿ ಪ್ರಗ್ಯಾ

ಮಾಲೆಂಗಾವ್ ಬಾಂಬ್ ಸ್ಫೋಟ ಪ್ರಕರಣದ ಆರೋಪ ಸಾಧ್ವಿ ಪ್ರಗ್ಯಾ ಠಾಕೂರ್ ತನಿಖಾ ತಂಡಗಳ ಕಸ್ಟಡಿಯಲ್ಲಿದ್ದಾಗ ಅನುಭವಿಸಿದ್ಧ ಕಿರುಕುಳವನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಭೂಪಾಲ್ :  ಮಾಲೆಂಗಾವ್ ಬಾಂಬ್ ಸ್ಫೋಟ ಪ್ರಕರಣದ ಆರೋಪ ಸಾಧ್ವಿ ಪ್ರಗ್ಯಾ ಠಾಕೂರ್  ತನಿಖಾ ತಂಡಗಳ ಕಸ್ಟಡಿಯಲ್ಲಿದ್ದಾಗ ಅನುಭವಿಸಿದ್ಧ ಕಿರುಕುಳವನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಮಧ್ಯಪ್ರದೇಶದ ಭೂಪಾಲ್ ನಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆದ ಸಾಧ್ವಿ ಪ್ರಗ್ಯಾ ಠಾಕೂರ್, ಅಕ್ರಮವಾಗಿ ನನನ್ನು ಕರೆದುಕೊಂಡು ಹೋಗಿ 13 ದಿನಗಳ ಕಾಲ ಬಂಧನದಲ್ಲಿಟ್ಟಿದ್ದರು.ಮೊದಲ ದಿನವೇ  ಹೊಡೆಯಲು ಆರಂಭಿಸಿದರು.ಬೆಲ್ಟ್ ನಿಂದ ಹೊಡೆಯುತ್ತಿದ್ದರಿಂದ ಇಡೀ ನರವ್ಯವಸ್ಥೆಯೇ ನಿಷ್ಕ್ರೀಯಗೊಂಡಂತಾಗಿತ್ತು. ರಾತ್ರಿ , ಹಗಲು ಎನ್ನದೇ ಯಾವಾಗಲೂ ಹೊಡೆಯಲಾಗುತಿತ್ತು ಎಂದು ತಿಳಿಸಿದರು.

ನನಗೆ ಹೊಡೆಯುತ್ತಲೇ ನಿಂದಿಸಲಾಗುತಿತ್ತು, ನೇಣು ಹಾಕುವುದಾಗಿ, ಬಟ್ಟೆ ಬಿಚ್ಚುವಂತೆ ಬೆದರಿಕೆ ಹಾಕಲಾಗಿತ್ತು. ತನಿಖಾ ತಂಡದ ಕಸ್ಟಡಿಯಲ್ಲಿದ್ದಾಗ ಅನುಭವಿಸಿದ್ದ ಕಿರುಕುಳವನ್ನು ಅಸಹನೀಯವಾಗಿತ್ತು ಎಂದು ಸಾಧ್ವಿ ಪ್ರಗ್ಯಾ ಠಾಕೂರ್ ಕಣ್ಣೀರಿಟ್ಟರು.

ನನ್ನ ನೋವನ್ನು ನಿಮ್ಮ ಮುಂದೆ ಹೇಳಿಕೊಳ್ಳುತ್ತಿಲ್ಲ ಆದರೆ, ನಾನು ಅನುಭವಿಸಿದ್ದ ನೋವನ್ನು ಯಾವುದೇ ತಂಗಿಯರು ಅನುಭವಿಸಬಾರದು ,ನಾನು ಯಾವುದೇ ಭ್ರಷ್ಟಾಚಾರ ನಡೆಸಿಲ್ಲ. ಯಾರ ಅಧಿಕಾರವನ್ನು ಕಬಳಿಸಿಲ್ಲ. ಆದರೂ ವಿನಾಕಾರಣ ತೊಂದರೆ ನೀಡಲಾಯಿತು. ರಾಷ್ಟ್ರವಾದದ, ರಾಷ್ಟ್ರದ ಬಗ್ಗೆ ಮಾತನಾಡಬಾರದು ಎಂದು ತಾಕೀತು ಮಾಡುತ್ತಿದ್ದರು ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT