ಶಶಿ ತರೂರ್ 
ದೇಶ

ಅನಾರೋಗ್ಯಪೀಡಿತರಿಗೆ ಖಿಚಡಿಯೇ ಬೇಕು: ಪ್ರಧಾನಿ 'ಖಿಚಡಿ' ಹೇಳಿಕೆಗೆ ಶಶಿ ತರೂರ್ ಟಾಂಗ್

ಪ್ರಧಾನಿ ಮೋದಿ ಪ್ರತಿಪಕ್ಷಗಳ ಮಹಾಘಟಬಂಧನ್ ಸರ್ಕಾರವು "ಖಿಚಡಿ" ಸರ್ಕಾರವಾಗಲಿದೆ, ದೇಶಕ್ಕೆ ಈ ಖಿಚಡಿ ಸರ್ಕಾರ ಬೇಡ ಎಂಬ ಮಾತಿಗೆ ಕಾಂಗ್ರೆಸ್ ನಾಯಕ, ತಿರುವನಂತಪುರಂ ಕೈ ಅಭ್ಯರ್ಥಿ....

ನವದೆಹಲಿ: ಪ್ರಧಾನಿ ಮೋದಿ ಪ್ರತಿಪಕ್ಷಗಳ ಮಹಾಘಟಬಂಧನ್ ಸರ್ಕಾರವು "ಖಿಚಡಿ" ಸರ್ಕಾರವಾಗಲಿದೆ, ದೇಶಕ್ಕೆ ಈ ಖಿಚಡಿ ಸರ್ಕಾರ ಬೇಡ ಎಂಬ ಮಾತಿಗೆ ಕಾಂಗ್ರೆಸ್ ನಾಯಕ, ತಿರುವನಂತಪುರಂ ಕೈ ಅಭ್ಯರ್ಥಿ ಶಶಿ ತರೂರ್ ಪ್ರತಿದಾಳಿ ನಡೆಸಿದ್ದಾರೆ. "ಮೋದಿಜೀ, ನೀವೇನಾದರೂ ಅನಾರೋಗ್ಯಕ್ಕೆ ತುತ್ತಾದರೆ ಆಗ ನಿಮಗೆ ಖಿಚಡಿಯೇ ಬೇಕಾಗುತ್ತದೆ, ಹಾಗಾಗಿ ಮಹಾಘಟಬಂಧನ್ ಬಗೆಗೆ ಬಿಜೆಪಿ ಬೆಂಬಲಿಗರು ಮಾತನಾಡುವಾಗ ಒಮ್ಮೆ ಯೋಚಿಸಿರಿ" ಎಂದಿದ್ದಾರೆ.
ಜಾರ್ಖಂಡ್ ನಲ್ಲಿನ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿ ಮಾತನಾಡಿ "ಮಹಾಘಟಬಂಧನ್ ನಾಯಕರಿಗೆ ಕೇಂದ್ರದಲ್ಲಿ ಬಹುಮತದ ಸರ್ಕಾರ ಬರುವುದು ಬೇಡವಾಗಿದೆ, ಅವರಿಗೆ ಕಾಂಗ್ರೆಸ್ ಜತೆ ಸೇರಿ ಖಿಚಡಿ ಸರ್ಕಾರ ರಚನೆ ಮಾಡುವ ಹಂಬಲವಿದೆ" ಎಂದಿದ್ದಾರೆ.
ಈ ಕುರಿತಂತೆ ಪ್ರತಿದಾಳಿ ನಡೆಸಿದ ತರೂರ್ "ಬಿಜೆಪಿಯವರ ಬಹುಸಂಖ್ಯಾತರ ಓಲೈಕೆಯ ಹಾಗೂ ವಿಭಜಿತ ರಾಜಕೀಯದ ಕುರಿತು ಜನರು ನಿರಾಶರಾಗಿದ್ದಾರೆ. ಬಿಜೆಪಿ ಬೆಂಬಲಿಗರು ವಿರೋಧಿಗಳನ್ನು ಹಳಿಯಲು ಬೇರೆ ಬೇರೆ ಪದಪುಂಜಗಳನ್ನು ಬಳಸಿದ್ದಾರೆ. ಬಿಜೆಪಿ ದೃಷ್ಟಿಕೋನವನ್ನು ಟೀಕಿಸುವವರೆಲ್ಲಾ ರಾಷ್ಟ್ರದ್ರೋಹಿಗಳಾಗುತ್ತಾರೆ, ಅವರೆಲ್ಲಾ "ತುಕ್ಡೇ ತುಕ್ಡೇ ಗ್ಯಾಂಗ್" ನವರಾಗುತ್ತಾರೆ. ನರೇಂದ್ರ ಮೋದಿ ಮತ್ತು ಅವರ ಬೆಂಬಲಿತರು ವಿರೋಧಿಗಳನ್ನು ಸುಳ್ಲು ಹೇಳುವ ಮೂಲಕ ತಪ್ಪಾಗಿ ಬಿಂಬಿಸುವುದರಲ್ಲಿ ನಿಷ್ಣಾತರಿದ್ದಾರೆ.  ಇಂತಹಾ ಸುಳ್ಳು ನಿರೂಪಣೆಗೆ ಸಂಬಂಧಿಸಿದ ದಾಖಲೆಗಳನ್ನು ಅವರು ನೀಡಬೇಕಿದೆ" ತರೂರ್ ಪಿಟಿಐಗೆ ತಿಳಿಸಿದ್ದಾರೆ.
ಭಾರತದ ಸಶಸ್ತ್ರ ಪಡೆಗಳನ್ನು ರಾಜಕೀಯದಿಂದ ದೂರವಿಡಬೇಕಿದೆ, ಆದರೆ ಪ್ರಧಾನಿಗಳು ತಾವೇ ರಾಷ್ಟ್ರದ ರಾಷ್ಟ್ರೀಯ ಭದ್ರತೆಯ ಅಂತಿಮ ರಕ್ಷಕ  ಎಂದು ಹೇಳಿಕೊಳ್ಳುತ್ತಿದ್ದಾರೆ. ಅಲ್ಲದೆ ಬಿಜೆಪಿಯವರು 2014 ರ ಚುನಾವಣಾ ಪ್ರಚಾರದಲ್ಲಿ ಹೇಳಿದಂತೆ "ಅಚ್ಚೇ ದಿನ್" ಆಗಮನಕ್ಕಾಗಿ ದೇಶದ ಸಾಮಾನ್ಯ ಪ್ರಜೆ ಇನ್ನೂ ಕಾಯುತ್ತಲೇ ಇದ್ದಾನೆ. 
"ಮೇ 23 ರಂದು ಬಿಜೆಪಿಗೆ ಹೊರಹೋಗಲು ಬಾಗಿಲನ್ನು ತೋರಿಸಲಿದೆ, ಆ ಮೂಲಕ ದೇಶವು ಅನಾರೋಗ್ಯಕರ ರಾಜಕೀಯ ವನ್ನು ಗುಣಪಡಿಸಿಕೊಳ್ಳಲಿದೆ. ಇದರಲ್ಲಿ ನನಗೆ ಸಂದೇಹವಿಲ್ಲ" ತರೂರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT