ದೇಶ

'ಪ್ರೀತಿ ಗೆಲ್ಲುತ್ತದೆ, ದ್ವೇಷ ಅಲ್ಲ': ಮತ ಚಲಾಯಿಸಿದ ರಾಹುಲ್ ಗಾಂಧಿ ಪ್ರತಿಕ್ರಿಯೆ

Sumana Upadhyaya
ನವದೆಹಲಿ: ಲೋಕಸಭೆ ಚುನಾವಣೆಯ 6ನೇ ಹಂತದ ಚುನಾವಣೆ ಭಾನುವಾರ ನಡೆಯುತ್ತಿದ್ದು ದೆಹಲಿಯಲ್ಲಿ ಮತ ಚಲಾಯಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರು ದ್ವೇಷದಿಂದ ಜನರ ಮತಗಳಿಸಲು ನೋಡುತ್ತಿದ್ದರೆ ನಾವು ಪ್ರೀತಿಸುತ್ತೇವೆ. ಇಲ್ಲಿ ಪ್ರೀತಿ ಗೆಲ್ಲುತ್ತದೆ ಎಂದರು.
ದೆಹಲಿಯ ಔರಂಗಾಜೇಬ್ ಲೇನ್ ನ ಶಾಲೆಯಲ್ಲಿ ಮತ ಚಲಾಯಿಸಿದ ಮೋದಿ, ಚುನಾವಣಾ ರ್ಯಾಲಿ ಭಾಷಣಗಳಲ್ಲಿ ಪ್ರಧಾನಿ ಮೋದಿ ದ್ವೇಷ ತುಂಬಿದರೆ ನಾವು ಪ್ರೀತಿ ತುಂಬುತ್ತೇವೆ, ಇಲ್ಲಿ ದ್ವೇಷದ ವಿರುದ್ಧ ಪ್ರೀತಿ ಗೆಲ್ಲುತ್ತದೆ ಎಂದರು.
ಈ ಬಾರಿಯ ರಾಷ್ಟ್ರ ಚುನಾವಣೆಯಲ್ಲಿ ನಾಲ್ಕು ಮುಖ್ಯ ವಿಷಯಗಳ ಮೇಲೆ ಜನರು ತೀರ್ಮಾನ ಮಾಡುತ್ತಾರೆ, ಅದು ನಿರುದ್ಯೋಗ ಸಮಸ್ಯೆ, ನೋಟುಗಳ ಅಪನಗದೀಕರಣ, ರೈತರ ಸಮಸ್ಯೆಗಳು ಮತ್ತು ರಫೆಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಆದ ಭ್ರಷ್ಟಾಚಾರ ಎಂದು ರಾಹುಲ್ ಗಾಂಧಿ ಹೇಳಿದರು.
SCROLL FOR NEXT