ದೇಶ

ಸಾಧ್ವಿ ಪ್ರಗ್ಯಾ ಸಿಂಗ್ ಉಮೇದುವಾರಿಕೆ ಹಿಂದೂ ಭಯೋತ್ಪಾದನೆ ವಿರುದ್ಧದ ಸತ್ಯಾಗ್ರಹ: ಅಮಿತ್ ಶಾ

Srinivas Rao BV
ನವದೆಹಲಿ: ಭೋಪಾಲ್ ನಿಂದ ಸಾಧ್ವಿ ಪ್ರಗ್ಯಾ ಸಿಂಗ್ ಅವರನ್ನು ಕಣಕ್ಕಿಳಿಸಿರುವುದನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಮರ್ಥಿಸಿಕೊಂಡಿದ್ದು, ಸಾಧ್ವಿ ಅವರ ಉಮೇದುವಾರಿಕೆ ಹಿಂದೂ ಭಯೋತ್ಪಾದನೆ ವಿರುದ್ಧದ ಸತ್ಯಾಗ್ರಹ ಎಂದು ಹೇಳಿದ್ದಾರೆ. 
ಈ ಹಿಂದಿನ ಕಾಂಗ್ರೆಸ್ ಸರ್ಕಾರ ಓಟ್ ಬ್ಯಾಂಕ್ ಗಾಗಿ ರಾಷ್ಟ್ರೀಯ ಭದ್ರತೆಯ ಜೊತೆಗೆ ರಾಜಿ ಮಾಡಿಕೊಂಡಿತ್ತು. ಇದರ ವಿರುದ್ಧದ ಸತ್ಯಾಗ್ರಹ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರ ಉಮೇದುವಾರಿಕೆ ಎಂದು ಶಾ ಸಮರ್ಥನೆ ನೀಡಿದ್ದಾರೆ. 
ಇದೇ ವೇಳೆ ಗೋಡ್ಸೆ ಕುರಿತ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ. 
SCROLL FOR NEXT