ಎಚ್. ವಿಶ್ವನಾಥ್ 
ಕರ್ನಾಟಕ

ಪಕ್ಷದಲ್ಲಿ ಸಂಭ್ರಮಕ್ಕಿಂತ ಸಂಕಟಗಳೇ ಹೆಚ್ಚು: ಎಚ್ ವಿಶ್ವನಾಥ್ ಅಳಲು

ಜೆಡಿಎಸ್ ಪಕ್ಷದಲ್ಲಿ ಸಂಭ್ರಮಕ್ಕಿಂತ ಸಂಕಟಗಳೇ ಹೆಚ್ಚು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದ್ದಾರೆ. ...

ಬೆಂಗಳೂರು: ಜೆಡಿಎಸ್ ಪಕ್ಷದಲ್ಲಿ ಸಂಭ್ರಮಕ್ಕಿಂತ ಸಂಕಟಗಳೇ ಹೆಚ್ಚು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದ್ದಾರೆ. 
ಪ್ರೆಸ್ ಕ್ಲಬ್ ನಲ್ಲಿಂದು ನಡೆದ ‘ಮಾತು ಮಂಥನ’ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿ, “ಪಕ್ಷದಿಂದ ಬಿಡುಗಡೆಯನ್ನು ಬೇಡಿ ರಾಜೀನಾಮೆ ನೀಡಲು ಹೋದಾಗ ದೊಡ್ಡವರು ಬೇಡ ಎಂದರು. ಹೀಗಾಗಿ ಪಕ್ಷದಲ್ಲೇ ಮುಂದುವರಿಯಬೇಕಾಯಿತು” ಎಂದರು.
ಜಗತ್ತಿನ ದೊಡ್ಡ ಜನತಂತ್ರ ವ್ಯವಸ್ಥೆಗೆ ಲೋಕಸಭೆ ಚುನಾವಣೆ ನಡೆಯುತ್ತಿದೆ.  ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರಕಾರ ಚುನಾವಣೆ ಎನ್ನುವುದು ಜನತಂತ್ರ ವ್ಯವಸ್ಥೆಯ ಜಾತರೆ.  ಈ ಬಾರಿಯ ಚುನಾವಣೆ ಬಹುತ್ವದ ಬಗೆಗಿನ ಹೋರಾಟ ಹಾಗೂ ನಕಲಿ ರಾಯಭಾರಿಗಳ ನಡುವಿನ ಹೋರಾಟ. ನಕಲಿ ರಾಷ್ಟ್ರೀಯವಾದಿ ಮತ್ತು ಭಾರತದ ನಡುವಿನ ಸಂಘರ್ಷವೇ ಈ ಬಾರಿಯ ಚುನಾವಣೆ” ಎಂದು ಹೇಳಿದರು.
ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆ ಏನಾಯಿತು? ಎಷ್ಟರಮಟ್ಟಿಗೆ ಪಾಲನೆಯಾಯಿತು ಎಂಬುದು ದೊಡ್ಡ ಪ್ರಶ್ನೆ.  ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಈಡೇರಲಿಲ್ಲ.  ಬಿಎಸ್ಎನ್ಎಲ್ ಸಂಸ್ಥೆಯ 50 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ.  
ಉದ್ಯೋಗ ಕೊಡುವುದರ ಬದಲು ಕಸಿಯುವ ಕೆಲಸವಾಗುತ್ತಿದೆ ಎಂದು ಎನ್ ಡಿಎ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಚ್. ವಿಶ್ವನಾಥ್ ಹರಿಹಾಯ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT