ಕರ್ನಾಟಕ

ಲೋಕಸಭಾ ಚುನಾವಣೆ; ಹಾಸನ ಜಿಲ್ಲೆಯಲ್ಲಿ ಏಳು ರೌಡಿಗಳ ಗಡಿಪಾರು

Nagaraja AB

ಹಾಸನ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಏಳು ಮಂದಿ ರೌಡಿ ಶೀಟರ್ ಗಳನ್ನು ಜಿಲ್ಲೆಯಿಂದ ಗಡಿಪಾರುಗೊಳಿಸಿ ಹಾಸನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.

ಹಾಸನದ ವಿಜಯನಗರದ ಕೆ.ಎಂ. ರವಿಕುಮಾರ್ ಅಲಿಯಾಸ್ ಚೈಲ್ಡ್ ರವಿ, ಹಾಸನ ತಾಲೊಕಿನ ಸಮುದ್ರವಳ್ಳಿಯ ಸಂತೋಷ್, ಧರ್ಮೇಶ್ ಅಲಿಯಾಸ್ ಗುರುಮೂರ್ತಿ, ಮೆಹಬೂಬ್ ಅಲಿಯಾಸ್ ಮಲ್ನಾಡ್ ಮೆಹಬೂಬ್, ಮುಫೀಝ್ ಹಾಗೂ ಸಕಲೇಶಪುರ ಪಟ್ಟಣದ ರಾಘು ಎಂಬ ರೌಡಿ ಶೀಟರ್ ಗಳನ್ನು ಜಿಲ್ಲೆಯಿಂದ ಗಡಿಪಾರುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಚೇತನ್ ಸಿಂಗ್ ರಾಥೋಡ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಶಾಂತಿ ಹಾಗೂ ನೆಮ್ಮದಿಗೆ ಭಂಗ ತರುವ ಸಾಧ್ಯತೆ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ರೌಡಿ ಶೀಟರ್ ಗಳನ್ನು ಗಡಿಪಾರುಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

SCROLL FOR NEXT