ಮಂಡ್ಯದಲ್ಲಿ ಯಶ್ ಪ್ರಚಾರದ ಒಂದು ದೃಶ್ಯ 
ಕರ್ನಾಟಕ

ಕಾಂಗ್ರೆಸ್-ಜೆಡಿಎಸ್ ಸಂಘರ್ಷ: ಸಂಧಾನಕ್ಕಿದು ಸಮಯವಲ್ಲ ಎಂದ ಮಂಡ್ಯ ಕಾಂಗ್ರೆಸಿಗರು

ಮಂಡ್ಯ ಕಾಂಗ್ರೆಸ್ ನಾಯಕರನ್ನು ಮನವೊಲಿಸುವ ಹಾಗೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಪ್ರ ಪ್ರಚಾರ ನಡೆಸಲು ಪ್ರೇರೇಪಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತತ್ರಗಾರಿಕೆಗೆ ಮಂಡ್ಯ ಕಾಂಗ್ರೆಸ್ ನಾಯಕರು ಸೊಪ್ಪು ಹಾಕುತ್ತಿಲ್ಲ.

ಮೈಸೂರು: ಮಂಡ್ಯ ಕಾಂಗ್ರೆಸ್ ನಾಯಕರನ್ನು ಮನವೊಲಿಸುವ ಹಾಗೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಪರ ಪ್ರಚಾರ ನಡೆಸಲು ಪ್ರೇರೇಪಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತಂತ್ರಗಾರಿಕೆಗೆ ಮಂಡ್ಯ ಕಾಂಗ್ರೆಸ್ ನಾಯಕರು ಸೊಪ್ಪು ಹಾಕುತ್ತಿಲ್ಲ. ಮುಂದಿನ ಎರಡು ದಿನಗಳಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ಭರಾಟೆ ಇನ್ನಷ್ಟು ದೊಡ್ಡ ತಿರುವು ತೆಗೆದುಕೊಳ್ಳಲಿದೆ ಎನ್ನಲಾಗಿದ್ದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅಥವಾ ಜೆಡಿಎಸ್ ಅಭ್ಯರ್ಥಿಯ ಪರವಾಗಿ ನಾವು ಪ್ರಚಾರ ನಡೆಸುವುದಿಲ್ಲ ಎಂದು ಇದಾಗಲೇ ಜಿಲ್ಲೆಯ ಪ್ರಮುಖ ನಾಯಕರು ಸ್ಪಷ್ಟಪಡಿಸಿದ್ದಾರೆ. 
ಸಿದ್ದರಾಮಯ್ಯ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್  ನಿಖಿಲ್ ಕುಮಾರಸ್ವಾಮಿ ಅವರ ವಿಜಯವನ್ನು ಖಾತ್ರಿಪಡಿಸಿಕೊಳ್ಲಲು ಕೆಲಸ ಮಾಡಲು  ಮನವೊಲಿಸಿದರೂ, ಎರಡು ಪಕ್ಷಗಳ ಕಾರ್ಯಕರ್ತರ ನಡುವಿನ ಸಂಬಂಧವನ್ನು ಸುಧಾರಿಸಲು ಮಾಡಿರುವ ಪ್ರಯತ್ನ ಬಹಳವೇ ತಡವಾಗಿದೆ ಎಂದು ಕಂಡುಬರುತ್ತಿದೆ.ಕಾರ್ಯಕರ್ತರಿಗೆ ಇದು ಯೋಚಿಸಲು ಸಾಧ್ಯವಾಗದ ಮಾತಾಗಿದೆ. ಜೆಡಿಎಸ್ ಪಕ್ಷವನ್ನು ದಶಕಗಳ ಕಾಲ ವಿರೋಧಿಸುತ್ತಾ ಬಂದಿದ್ದ ಕಾಂಗ್ರೆಸ್ ಇದೀಗ ಕೆಲವೇ ತಿಂಗಳಿನಲ್ಲಿ ಅವರೊಡನೆ ಸ್ನೇಹ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿದ್ದರೂ,ಜಿಲ್ಲೆಯಲ್ಲಿ ಎರಡೂ ಪಕ್ಷಗಳ ನಡುವೆ ಘರ್ಷಣೆಗಳು ಕಂಡುಬರುವುದು ನಿಂತಿಲ್ಲ.
ಜೆಡಿಎಸ್ ನಾಯಕರು, ಶಾಸಕರು ಕಾಂಗ್ರೆಸ್ ಶಾಸಕರು ಅನುಮೋದಿಸಿದ್ದ ಟೆಂಡರ್ ಗಳನ್ನು ರದ್ದು ಂಆಡಿದ್ದಾಎ.ಅನುದಾನವನ್ನು ಬಳಸದೆ ಹಿಂತಿರುಗಿಸಿದ್ದಾರೆ. ನಾಗಮಂಗಲ, ಶೀರಂಗಪಟ್ಟಣ, ಮಳವಳ್ಳಿ  ಹಾಗೂ ಇತರೆ ಕ್ಷೇತ್ರಗಳಲ್ಲಿ ಇಂತಹಾ ಘರ್ಷಣೆಗಳು ತಲೆದೋರಿದೆ. ಮಂಡ್ಯ ಜಿಲ್ಲೆಯ ಎನ್.ಚಲುವರಾಯಸ್ವಾಮಿ ಮತ್ತು ಇತರರು ಸೇರಿದಂತೆ ಪ್ರಮುಖ ನಾಯಕರು  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಪರಮೇಶ್ವರ ವರಲ್ಲಿ ಈ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ.  ಇನ್ನೊಂದೆಡೆ ಹಾಸನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಹ ಇದೇ ಸಂಘರ್ಷವಿದ್ದು ಅವರು ಸಹ ಸಿದ್ದರಾಮಯ್ಯನವರಲ್ಲಿ ದೂರಿತ್ತಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಈ ಸಮಸ್ಯೆಗ ಪರಿಹಾರ ಹುಡುಕಿಕೊಳ್ಳುವಲ್ಲಿ ಕಾಂಗ್ರೆಸ್ ಪಾಳಯ ವಿಫಲವಾಗಿದೆ.ಎರಡು ಪಕ್ಷಗಳ ಕಾರ್ಯಕರ್ತರ ನಡುವಿನ ಸಾಮರಸ್ಯವನ್ನು ಸುಧಾರಿಸುವಲ್ಲಿ ಯಶಸು ಕಾಣದೆ ಹೋಗಿದೆ.ಳೀಯ ಸಹಕಾರ ಮತ್ತು ಪಂಚಾಯತ್ ಚುನಾವಣೆಗಳಲ್ಲಿ ಈ ಹಿಂದೆ ಎರಡೂ ಪಕ್ಷಗಳು ಪರಸ್ಪರ ವಿರುದ್ಧವಾಗಿ ಹೋರಾಟ ನಡೆಸಿದೆ. ಆದರೆ ಈಗ ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ನೊಡನೆ ಸಂಧಾನ ಮಾಡಿಕೊಳ್ಳುವುದು ಆ ಪಕ್ಷದ ದುರ್ಬಲತೆಗೆ ಕಾರಣವಾಗಲಿದೆ ಎಂದು ಕಾರ್ಯಕರ್ತರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

RSS ನಿಷೇಧಕ್ಕೆ ಕರೆ: ಸಚಿವ ಪ್ರಿಯಾಂಕ್ ಖರ್ಗೆ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ, ಯತ್ನಾಳ್ ಕಿಡಿ!

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

SCROLL FOR NEXT