ಕರ್ನಾಟಕ

ಚಾಮರಾಜನಗರ: ಹ್ಯಾಟ್ರಿಕ್ ಗೆಲುವಿನ ಮೇಲೆ ಧ್ರುವನಾರಾಯಣ ಕಣ್ಣು, ಕಾಂಗ್ರೆಸ್ ಗೆ ಪ್ರಸಾದ್ ಬಿಸಿ ತುಪ್ಪ

Nagaraja AB
ಬೆಂಗಳೂರು:  ನಂಜುಂಡಪ್ಪ ಸಮಿತಿ ವರದಿ ಅನುಸಾರ ಹೆಚ್ಚಿನ  ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಚಾಮರಾಜ ನಗರ ಜಿಲ್ಲೆ ಬದಲಾವಣೆಯ ಗಾಳಿ ಬೀಸುತ್ತಿದೆ.ಈ ಹಿಂದುಳಿದ ಪ್ರಾಂತ್ಯದಲ್ಲಿನ ಕಾಡುಗಳಲ್ಲಿ  ಎರಡು ದಶಕಗಳಿಗೂ ಹೆಚ್ಚು ಕಾಲ ಕಾಡುಗಳ್ಳ ವೀರಪ್ಪನ್ ಮೆರೆದಿದ್ದ. ಆದರೆ, ಆತನ ಸಾವಿನ ಬಳಿಕ ಇತ್ತೀಚಿನ ದಿನಗಳಲ್ಲಿ ಪ್ರಗತಿ ಕಂಡುಬರುತ್ತಿದೆ.
ಈ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಪಾಲಾಗಿರುವುದಕ್ಕೆ ಅನೇಕ ಜೆಡಿಎಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಎಸ್ಪಿ ಕಾಂಗ್ರೆಸ್ ಮತಗಳನ್ನು ತೆಗೆದುಕೊಳ್ಳಲಿದೆ ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ. 
ಬಿಎಸ್ಪಿಯಿಂದ ಶಿವಕುಮಾರ್  ಸ್ಪರ್ಧಿಸಿದ್ದಾರೆ. ಪ್ರಸಾದ್ ಜನರ ಬಳಿಗೆ ಹೇಗೆ ತಲುಪುತ್ತಾರೆ ಎಂಬುದು ಪ್ರಮುಖವಾದ ವಿಚಾರವಾಗಿದೆ. ಮೋದಿ ಕಾರ್ಡ್,  ದಲಿತ ಮತಗಳ ವಿಭಜನೆ ಹಾಗೂ ಉಪ್ಪಾರ ಸಮುದಾಯದ ಮತಗಳಿಗೆ ಅವರಿಗೆ ನೆರವು ನೀಡಬಹುದು ಎಂದು ರಾಮಪುರದ ಗೋವಿಂದ್ ಎಂಬುವರು ಹೇಳುತ್ತಾರೆ
SCROLL FOR NEXT