ಸುಮಲತಾ ಅಂಬರೀಷ್ 
ಕರ್ನಾಟಕ

ನನ್ನ ನೋವು ಯಾರಿಗೆ ತೋರಿಸಲಿ: ಸಿಎಂ ಹೇಳಿಕೆ ನೆನೆದು ಗದ್ಗದಿತರಾದ ಸುಮಲತಾ ಅಂಬರೀಷ್

ನನ್ನ ನೋವು ಯಾರಿಗೆ ತೋರಿಸಿಕೊಳ್ಳಲಿ, ಅವರು ನನ್ನ ಮುಖದಲ್ಲಿ ನೋವು ನೋಡಲು ಬಯಸುತ್ತಾರೆ, ನಾನು ನೋವಿನಲ್ಲಿರುವುದನ್ನು ನೋಡಲು ನೀವು ಇಷ್ಟ ...

ಮಂಡ್ಯ: ನನ್ನ ನೋವು ಯಾರಿಗೆ ತೋರಿಸಿಕೊಳ್ಳಲಿ, ಅವರು ನನ್ನ ಮುಖದಲ್ಲಿ ನೋವು ನೋಡಲು ಬಯಸುತ್ತಾರೆ, ನಾನು ನೋವಿನಲ್ಲಿರುವುದನ್ನು ನೋಡಲು ನೀವು ಇಷ್ಟ ಪಡುತ್ತೀರಾ ಇದು ಮಂಡ್ಯ ಪಕ್ಷೇತರ ಅಭ್ಯರ್ತಿ ಸುಮಲತಾ ಜನತೆಗೆ ಕೇಳಿದ ಪ್ರಶ್ನೆ.
ಮಂಡ್ಯ ಜಿಲ್ಲೆ ಕೀಲಾರ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಸುಮಲತಾ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ನೆನೆದು ಗದ್ಗದಿತರಾದರು, ನನ್ನ ಮುಖದಲ್ಲಿ ನೋವಿಲ್ಲ ಎಂದು ಸಿಎಂ ಹೇಳಿದ್ದಾರೆ, ಇದರ ಅರ್ಥವೇನು, ನಾನು ನೋವಿನಲ್ಲಿರುವುದು ಅವರಿಗೆ ಇಷ್ಟವೇ? ನಾನು ಯಾರ ಬಳಿ ನೋವು ತೋರಿಸಿಕೊಳ್ಳಲಿ ಎಂದು ಪ್ರಶ್ನಿಸಿದ್ದಾರೆ.
ನಾನು ಅಳುವುದಿಲ್ಲ ಎಂದು ಕಾರ್ಯಕರ್ತರಿಗೆ ಹಾಗೂ ಮಂಡ್ಯ ಜನತೆಗೆ ಮಾತುಕೊಟ್ಟಿದ್ದೇನೆ, ಹೀಗಾಗಿ ನಾನು ಅಳುವುದಿಲ್ಲ, ಸಿಎಂ ಅವರ ಮನೆಯಲ್ಲಿ ಹೆಣ್ಣು ಮಕ್ಕಳಿಲ್ಲವೇ ಎಂದು ಪ್ರಶ್ನಿಸಿದ್ದಾರೆ,.
ಇನ್ನೂ ಇದೇ ವೇಳೆ  ನಾಳೆ ಸುದ್ದಿಗೋಷ್ಠಿ ನಡೆಸಿ ತಮ್ಮ ಅಧಿಕೃತ ಚಿಹ್ನೆಯ ಬಗ್ಗೆ ಪ್ರಕಟಿಸುವುದಾಗಿ ಹೇಳಿದ್ದಾರೆ, ಜೊತೆಗೆ ಜಿಲ್ಲಾಧಿಕಾರಿ ತಮಗೆ ನೀಡಿರುವ ನೋಟಿಸ್ ಬಗ್ಗೆಯೂ ಉತ್ತರಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT