ಕರ್ನಾಟಕ

ನನ್ನ ಗೆಲುವನ್ನು ಸಂಭ್ರಮಿಸಲ್ಲ, ಸಂಸದ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹಾಸನವನ್ನು ದೇವೇಗೌಡರಿಗೆ ಬಿಟ್ಟುಕೊಡಲು ಸಿದ್ದ: ಪ್ರಜ್ವಲ್

Vishwanath S
ಹಾಸನ: ಮೊಮ್ಮಗ ಮೇಲಿನ ಮಮಕಾರದಿಂದಾಗಿ ತಮ್ಮ ಭದ್ರಕೋಟೆ ಹಾಸನ ಕ್ಷೇತ್ರವನ್ನು ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟ ತುಮಕೂರಿನಲ್ಲಿ ನಿಂತು ಸೋತಿದ್ದರು. ಇದೀಗ ತಾತನ ಸೋಲಿನಿಂದ ಬೇಸರಗೊಂಡಿರುವ ಪ್ರಜ್ವಲ್ ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಲು ತೀರ್ಮಾನಿಸಿದ್ದೇನೆ ಎಂದರು.
ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಜ್ವಲ್ ರೇವಣ್ಣ ಅವರು, ನನ್ನ ಗೆಲುವನ್ನು ಸಂಭ್ರಮಿಸಬೇಡಿ. ಹಾಸನದಿಂದ ಮತ್ತೆ ದೇವೇಗೌಡರನ್ನು ನಿಲ್ಲಿಸಿ, ಅವರನ್ನು ಗೆಲ್ಲಿಸಿ ಸಂಭ್ರಮಿಸೋಣ ಎಂದು ಹೇಳಿದ್ದಾರೆ.
ನಾನು ಇದನ್ನು ಪ್ರೀತಿಯಿಂದ ಹೇಳುತ್ತಿದ್ದೇನೆ. ಅವರು ಇದನ್ನು ಸ್ವೀಕರಿಸಬೇಕು. ದೇವೇಗೌಡರನ್ನು ಇಲ್ಲಿಂದ ಗೆಲ್ಲಿಸಿ ನಂತರ ವಿಜಯೋತ್ಸವ ಮಾಡ್ತೀನಿ ಎಂದು ಹೇಳುತ್ತೇನೆ. 
ಹಾಸನ ಲೋಕಸಭೆ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅವರು ಎ. ಮಂಜು ವಿರುದ್ಧ 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ. 
SCROLL FOR NEXT