'ರಂಗದ ಒಳ-ಹೊರಗೆ' ಕೃತಿ 
ಕಾರ್ಯಕ್ರಮಗಳು

ನಾಳೆ ಗೋಪಾಲ ವಾಜಪೇಯಿಯವರ 'ರಂಗದ ಒಳ-ಹೊರಗೆ' ಕೃತಿ ಲೋಕಾರ್ಪಣೆ

ಹಿರಿಯ ಪತ್ರಕರ್ತ, ನಾಟಕಕಾರ ಗೋಪಾಲ ವಾಜಪೇಯಿಯವರ 'ರಂಗದ ಒಳ-ಹೊರಗೆ' ಕೃತಿ ಇದೇ ಭಾನುವಾರ ದಿ. 23ರಂದು ಬಿಡುಗಡೆ.

"ಈ ಪುಸ್ತಕ ಕಟ್ಟಿಕೊಡುವ ಅನುಭವಲೋಕಕ್ಕೂ ನನಗೂ ಒಂದು ವಿಶೇಷ ನಂಟಿದೆ... ಇದು ಓದಿ, ಅನುಭವಿಸಿ, ಸುಖಿಸಬಹುದಾದ ಒಂದು ವಿಶಿಷ್ಟ ಕೃತಿ...'' ಎನ್ನುತ್ತಾರೆ ಹಿರಿಯ ಕಾದಂಬರಿಕಾರ ಶ್ರೀನಿವಾಸ ವೈದ್ಯ ಅವರು (ಕೃತಿಯ ಮುನ್ನುಡಿಯಲ್ಲಿ)...

''ನೌಕರಿ, ಉಪಜೀವನದ ಕುರಿತ ಎಂಥ ಅಭದ್ರತೆಯಲ್ಲೂ, ಮತ್ತೆ ಮತ್ತೆ, ಪಾಲಿಗೆ ಬಂದ ವಿವಿಧ ರಂಗ ಬರವಣಿಗೆಯಲ್ಲಿ ಸಂಪೂರ್ಣ ತಲ್ಲೀನರಾಗಿ ಎಲ್ಲವನ್ನೂ ಮೀರುತ್ತ ಬಂದ ಗೋಪಾಲ ಆ ಕ್ಷಣಗಳಲ್ಲಿ, ತಾಯಿಯ ಎದೆಗಂಟಿದ್ದೇ ಲೋಕವನ್ನೇ ಮರೆತು ಸುಮ್ಮನಾಗುವ ಕೂಸಿನಂತೆ ಕಾಣುತ್ತಾರೆ..." ಎಂಬುದು ಕವಿ ಜಯಂತ ಕಾಯ್ಕಿಣಿಯವರ ಅಂಬೋಣ (ಕೃತಿಯ ಬೆನ್ನುಡಿಯಲ್ಲಿ)...

ಇದೇ ಭಾನುವಾರ ದಿ. 23ರಂದು ಬಿಡುಗಡೆಯಾಗಲಿರುವ ಹಿರಿಯ ಪತ್ರಕರ್ತ, ನಾಟಕಕಾರ ಗೋಪಾಲ ವಾಜಪೇಯಿಯವರ 'ರಂಗದ ಒಳ-ಹೊರಗೆ' ಕೃತಿಯ ಎರಡು ಇಣುಕು ನೋಟಗಳಿವು.

ಬೆಂಗಳೂರಿನ ‘ಅಂಬಾ ಪ್ರಕಾಶನ’ ಪ್ರಕಟಿಸಿರುವ 'ರಂಗದ ಒಳ-ಹೊರಗೆ' ಕೃತಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಕವಿ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಅವರು ಬಿಡುಗಡೆ ಮಾಡುವರು.

ಹಿರಿಯ ಮಾಧ್ಯಮ ತಜ್ಞ ಜಿ. ಎನ್. ಮೋಹನ್ ಈ ಸಮಾರಂಭದ ಮುಖ್ಯ ಅತಿಥಿ.
ಹಿರಿಯ ರಂಗ ಕಲಾವಿದೆ ಶ್ರೀಮತಿ ಯಮುನಾ ಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸುವರು. 

ಅನನ್ಯ ರಂಗ ಕರ್ಮಿ ಧನಂಜಯ ಕುಲಕರ್ಣಿ ಕೃತಿಯ ಪರಿಚಯ ಮಾಡುವರು.

ಬೆಂಗಳೂರಿನ ಬನಶಂಕರಿ 2ನೆ ಹಂತದ ಪೋಲಿಸ್ ಸ್ಟೇಶನ್ ಸಮೀಪದ ಶ್ರೀವಿದ್ಯಾ ಸಭಾಂಗಣದಲ್ಲಿ ಬೆಳಿಗ್ಗೆ 10:30ಕ್ಕೆ ಈ ಕಾರ್ಯಕ್ರಮ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT