ಪೆರು ಅಭಿಮಾನಿಗಳ ಚಿತ್ರ 
ಫೀಫಾ ವಿಶ್ವ ಕಪ್ 2018

ರಂಗು ರಂಗಿನ ಚಿತ್ತಾರ, ವಿವಿಧ ರಾಷ್ಟ್ರಗಳ ಅಭಿಮಾನಿಗಳಿಂದ ಕಂಗೊಳ್ಳಿಸುತ್ತಿದೆ ಮಾಸ್ಕೋ ನಗರ

2018ರ ಫಿಫಾ ವಿಶ್ವಕಪ್ ಪುಟ್ಬಾಲ್ ನಡೆಯುತ್ತಿರುವ ರಷ್ಯಾ ರಾಜಧಾನಿ ಮಾಸ್ಕೋ ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತಿದೆ. ವಿವಿಧ ರಾಷ್ಟ್ರಗಳ ಅಭಿಮಾನಿಗಳಿಂದ ತುಂಬಿ ತುಳುಕುತ್ತಿದ್ದು, ಸಂಸ್ಕೃತಿ ಅನಾವರಣ ಮೂಲಕ ತಮ್ಮ ರಾಷ್ಟ್ರದ ಪರ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಮಾಸ್ಕೋ: 2018ರ ಫಿಫಾ ವಿಶ್ವಕಪ್ ಪುಟ್ಬಾಲ್ ನಡೆಯುತ್ತಿರುವ   ರಷ್ಯಾ ರಾಜಧಾನಿ ಮಾಸ್ಕೋ ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತಿದೆ. ವಿವಿಧ ರಾಷ್ಟ್ರಗಳ ಅಭಿಮಾನಿಗಳಿಂದ ತುಂಬಿ ತುಳುಕುತ್ತಿದ್ದು, ಸಂಸ್ಕೃತಿ ಅನಾವರಣ ಮೂಲಕ ತಮ್ಮ ರಾಷ್ಟ್ರದ ಪರ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಒಖೊಟ್ನಿ ರೈಡ್ ಮೆಟ್ರೊ ನಿಲ್ದಾಣದ ನಿರ್ಗಮನ ಸುರಂಗವು ಸಮುದ್ರದ ಬಣ್ಣದೊಳಗೆ ತೆರೆಯುತ್ತದೆ. ಎಡಭಾಗದಲ್ಲಿ, ಕೆಂಪು ಚೌಕವು ಹಳದಿ, ಹಸಿರು, ಬಿಳಿ, ನೀಲಿ ಮತ್ತು ಪ್ರತಿ ಇತರ ನೆರಳು ಕಾಲ್ಪನಿಕವಾಗಿದ್ದು, ನಿರಂತರವಾಗಿ ಹಿಮ-ಹೊದಿಕೆಯ ಶಿಖರಗಳ ಚಿತ್ರವನ್ನು ಬಿಂಬಿಸುವ ಬಿಳಿ ಚಾವಣಿಯೊಂದಿಗೆ   ಇತಿಹಾಸ ಪ್ರಸಿದ್ಧ  ಮ್ಯೂಸಿಯಂ ಕಂಡುಬರುತ್ತಿದೆ.
ಎರಡನೇ ವಿಶ್ವ ಯುದ್ಧ ಸಂದರ್ಭದಲ್ಲಿ  ಹಿಟ್ಲರನನ್ನು ಕರೆತಂದ ಸೋವಿಯತ್ ಸೈನ್ಯದ ಅಧಿಕಾರಿಯಾದ ಮಾರ್ಶಲ್ ಝುಕೋವ್ ಮತ್ತು ಅವರ ಪ್ರತಿಮೆಯು ಆ ಕಟ್ಟಡದ ಮುಂಭಾಗವನ್ನು ಅಲಂಕರಿಸಿದೆ. ಇದು ಇನ್ನು ಮುಂದೆ ಏಕಾಂಗಿಯಾಗಿಲ್ಲ. ಕೆಂಪು ಮತ್ತು ಬಿಳಿ ಬಣ್ಣದ ಪೆರುವಿಯನ್ ಅಭಿಮಾನಿಗಳ ಗುಂಪೊಂದು  ಅದರ  ಪ್ರತಿಮೆ ಸುತ್ತ ಆವರಿಸಿಕೊಂಡು ತಮ್ಮ ರಾಷ್ಟ್ರದ ಪರ ಜಯಘೋಷ ಮೊಳಗಿಸಿದರು.
ವೃತ್ತವೊಂದರಲ್ಲಿ ವಿಡಿಯೋ ಮಾಡುತ್ತಿದ್ದ ಅನೇಕ ಪತ್ರಕರ್ತರನ್ನು ಆಸ್ಟ್ರೇಲಿಯಾದ ಅಭಿಮಾನಿಗಳ ಗುಂಪೊಂದು ವೀಕ್ಷಿಸುತ್ತಿದ್ದರೆ ಅವರ ಸುತ್ತಲೂ ಆಳೆತ್ತರದ ಇರಾನ್ ಧ್ವಜಗಳು ಹಾರಾಡುತ್ತಿದ್ದವು.
ನಿಕೊಲ್ ಸ್ಕಾಯ ಟವರ್ ಬಳಿ  ಬ್ರೆಜಿಲ್ ನ ಅಭಿಮಾನಿಗಳು ತುಂಬಿದ್ದರು. ಬಿಳಿ ಮತ್ತು ನೀಲಿ ಬಣ್ಣದ ಉಡುಪು ಧರಿಸಿ,  'ಮಿಲ್ ಗೊಲ್, ಮಿಲ್ ಗೋಲ್ , ಸೊ ಪಿಲೆ, ಸೊ ಪಿಲೆ , ಮಾರಾಡೂನಾ ಚೈರಾಡೊರಾ, ಅಂತಾ ಘೋಷಣೆ ಮೊಳಗಿಸುತ್ತಿದ್ದರು. ಇದಕ್ಕೆ ಕೆಲವರು ಅರ್ಜೆಂಟೀನಾ, ಅರ್ಜೆಂಟೀನಾ ಎಂದು ಪ್ರತಿ ಸವಾಲು ಹಾಕುತ್ತಿದ್ದ ದೃಶ್ಯ ಕಂಡುಬಂದಿತ್ತು.
ಚೀನಾ ಅಭಿಮಾನಿಗಳು ಚೀನಾ, ಚೀನಾ ಎಂದು ಅಬ್ಬರಿಸುತ್ತಿದ್ದರು. ಯುರೋಪ್ ಹಾಗೂ ಸ್ವಿಡನ್ ರಾಷ್ಟ್ರಗಳ ಅಭಿಮಾನಿಗಳು ಕೂಡಾ ಮಾಸ್ಕೋಗೆ ಆಗಮಿಸಿದ್ದು, ತಮ್ಮ ರಾಷ್ಟ್ರದ ಪರ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಸಂಸ್ಕೃತಿ ಅನಾವರಣ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!