ಪತ್ರಕರ್ತೆಗೆ ಮುತ್ತು ನೀಡಲು ಬಂದ ದುಷ್ಕರ್ಮಿ 
ಫೀಫಾ ವಿಶ್ವ ಕಪ್ 2018

ಬೇಕಿತ್ತಾ... ಲೈವ್ ವೇಳೆ ಮುತ್ತುಕೊಡಲು ಬಂದವನ ತರಾಟಗೆ ತೆಗೆದುಕೊಂಡ ಬ್ರೆಜಿಲ್ ಪತ್ರಕರ್ತೆ!

ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದ ವೇಳೆ ಆಕೆಗೆ ಮುತ್ತು ನೀಡಿ ಅಸಭ್ಯವಾಗಿ ವರ್ತಿಸಿದ್ದ ದುಷ್ಕರ್ಮಿ ಕುರಿತ ಸುದ್ದಿ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಪ್ರಕರಣ ನಡೆದಿದ್ದು, ಈ ಬಾರಿ ಪತ್ರಕರ್ತೆಯೇ ದುಷ್ಕರ್ಮಿಯ ಮಾನ ಹರಾಜು ಹಾಕಿದ್ದಾಳೆ.

ಮಾಸ್ಕೋ: ಕೊಲಂಬಿಯ ಮೂಲದ ಪತ್ರಕರ್ತೆ ಫುಟ್ಬಾಲ್ ಪಂದ್ಯದ ಕುರಿತು ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದ ವೇಳೆ ಆಕೆಗೆ ಮುತ್ತು ನೀಡಿ ಅಸಭ್ಯವಾಗಿ ವರ್ತಿಸಿದ್ದ ದುಷ್ಕರ್ಮಿ ಕುರಿತ ಸುದ್ದಿ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಪ್ರಕರಣ ನಡೆದಿದ್ದು, ಈ ಬಾರಿ ಪತ್ರಕರ್ತೆಯೇ ದುಷ್ಕರ್ಮಿಯ ಮಾನ ಹರಾಜು ಹಾಕಿದ್ದಾಳೆ.
ಹೌದು.. ಬ್ರೆಜಿಲ್ ಮೂಲದ ಪತ್ರಕರ್ತೆ ಲೈವ್ ನೀಡುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ್ದ ವ್ಯಕ್ತಿಯೋರ್ವ ಆಕೆಗೆ ಮುತ್ತು ನೀಡಲು ಹೋಗಿ ಅಪಮಾನಕ್ಕೀಡಾಗಿದ್ದಾನೆ. ಯೆಕಟೇನ್ ಬರ್ಗ್ ನಲ್ಲಿ ಜಪಾನ್ ಮತ್ತು ಸೆನೆಗಲ್ ನಡುವೆ ನಡೆಯಬೇಕಿದ್ದ ಫೀಫಾ ವಿಶ್ವಕಪ್ ಟೂರ್ನಿಯ ಪಂದ್ಯದ ಕುರಿತು ಬ್ರೆಜಿಲ್ ಮೂಲಕ ಪತ್ರಕರ್ತೆ ಜೂಲಿಯಾ ಗಿಮಾರಾಸ್ ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದ ವೇಳೆ ಆಕೆಗೆ ದುಷ್ಕರ್ಮಿಯೋರ್ವ ಮುತ್ತು ನೀಡಲು ಪ್ರಯತ್ನಿಸಿದ್ದಾನೆ. 
ಆತ ಹತ್ತಿರ ಬರುತ್ತಿದ್ದಂತೆಯೇ ಅಪಾಯದ ಕುರಿತು ಅರಿತ ಪತ್ರಕರ್ತೆ ಕೂಡಲೇ ದೂರಸರಿದು, ಆತನ ಕೃತ್ಯಕ್ಕೆ ಲೈವ್ ನಲ್ಲೇ ಹಿಗ್ಗಾಮುಗ್ಗಾ ಜಾಡಿಸಿದ್ದಾಳೆ. ಮೊದಲು ಹೆಣ್ಣು ಮಕ್ಕಳನ್ನು ಗೌರವಿಸುವುದನ್ನು ಕಲಿಯಿರಿ, ಎಂದಿಗೂ ಯಾರಿಗೂ ಹೀಗೆ ಮಾಡಬಾರದು. ಇದಕ್ಕೆಲ್ಲಾ ನಾನು ಅನುವು ಮಾಡಿಕೊಡುವುದಿಲ್ಲ ಎಂದು ಕಿಡಿಕಾರಿದ್ದಾಳೆ. ಆತ ಕೂಡಲೇ ಕ್ಷಮೆ ಯಾಚಿಸಿರುವ ಆಡಿಯೋ ಕೂಡ ವಿಡಿಯೋದಲ್ಲಿ ದಾಖಲಾಗಿದೆ. 
ಇನ್ನು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದ್ದು, ಪತ್ರಕರ್ತೆಯ ದಿಟ್ಟತನಕ್ಕೆ ಟ್ವೀಟಿಗರು ಬೆಂಬಲ ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT