- ಬಾಸುಮತಿ ಅಕ್ಕಿ- 1ಬಟ್ಟಲು
- ಈರುಳ್ಳಿ- ಕತ್ತರಿಸಿದ್ದು 1 ಬಟ್ಟಲು
- ಟೊಮೆಟೋ- ಕತ್ತರಿಸಿದ್ದು 1 ಬಟ್ಟಲು
- ಅಚ್ಚ ಖಾರದಪುಡಿ- 2 ಚಮಚ
- ಅರಿಶಣದ ಪುಡಿ- ಅರ್ಧ ಚಮಚ
- ದನಿಯಾ ಪುಡಿ- 1 ಚಮಚ
- ಮೊಸರು- ಮುಕ್ಕಾಲು ಬಟ್ಟಲು
- ಪಲಾವ್ ಎಲೆ- 3-4
- ಏಲಕ್ಕಿ- ಸ್ವಲ್ಪ
- ಚಕ್ಕೆ-ಸ್ವಲ್ಪ
- ಚಕ್ರ, ಮೊಗ್ಗು - 2
- ತುಪ್ಪ-ಸ್ವಲ್ಪ
- ಉಪ್ಪು-ರುಚಿಗೆ ತಕ್ಕಷ್ಟು
- ಕೊತ್ತಂಬರಿ ಸೊಪ್ಪು- ಸ್ವಲ್ಪ
ಮಸಾಲೆಗೆ ಬೇಕಾಗುವ ಪದಾರ್ಥಗಳು
- ಈರುಳ್ಳಿ- 1
- ಶುಂಠಿ,ಬೆಳ್ಳುಳ್ಳಿ- ಸ್ವಲ್ಪ
- ಹಸಿಮೆಣಸಿನ ಕಾಯಿ-4
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಪುದೀನಾ- ಸ್ವಲ್ಪ
- ಚಕ್ಕೆ, ಲವಂಗ, ಏಲಕ್ಕಿ -ಸ್ವಲ್ಪ
- ಮೊದಲಿಗೆ ಅಕ್ಕಿಯನ್ನು 30 ನಿಮಿಷ ನೆನೆಸಿಟ್ಟುಕೊಳ್ಳಬೇಕು.
- ನಂತರ ಒಲೆಯ ಮೇಲೆ ಬಾಣಲೆ ಇಟ್ಟು ತುಪ್ಪ ಹಾಕಿ ನಂತರ ಇದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಈರುಳ್ಲಿ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಪುದೀನಾ ಹಾಕಿ ಮಧ್ಯಮ ಉರಿಯಲ್ಲಿ ಕೆಂಪಗೆ ಹುರಿದುಕೊಳ್ಳಬೇಕು.
- ನಂತರ ಒಲೆಯ ಮೇಲೆ ಕುಕ್ಕರ್ ಇಟ್ಟು, ತುಪ್ಪ ಹಾಕಿ ಕಾಯಲು ಬಿಡಬೇಕು. ನಂತರ ಪಲಾವ್ ಎಲೆ, ಚಕ್ಕೆ, ಲವಂಗ, ಪಲಾವ್ ಎಲೆ, ಚಕ್ರ, ಮೊಗ್ಗು ಹಾಕಿ ಕೆಂಪಗೆ ಹುರಿಯಬೇಕು, ನಂತರ ಈರುಳ್ಳಿ, ಟೊಮೆಟೋ ಹಾಕಿ ಹುರಿದುಕೊಳ್ಳಬೇಕು.
- ನಂತರ ಅರಿಶಿಣದ ಪುಡಿ, ಅಚ್ಚಖಾರದ ಪುಡಿ, ದನಿಯಾ ಪುಡಿ, ಉಪ್ಪು ಹಾಕಿ ಮಿಶ್ರಣ ಮಾಡಬೇಕು.
- ನಂತರ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ 5 ನಿಮಿಷ ಬಿಟ್ಟು. ಮೊಸರನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ನೆನೆಸಿಟ್ಟ ಅಕ್ಕಿಯನ್ನು ಹಾಕಿ ಮಿಶ್ರಣ ಮಾಡಬೇಕು. 1.1/2ಬಟ್ಟಲು ನೀರು ಹಾಕಿ ಮಧ್ಯಮ ಉರಿಯಲ್ಲಿ ಎರಡು ಕೂಗು ಕೂಗಿದ ಬಳಿಕ ಕುಕ್ಕರ್ ಮುಚ್ಚಳ ತೆಗೆದು, ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಖುಷ್ಕಾ ಸವಿಯಲು ಸಿದ್ಧ.