ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ಹೆಚ್ಚಳ ಕಂಡ ಮಕ್ಕಳ ಡಯಾಬಿಟಿಸ್

ಮಕ್ಕಳ ಡಯಾಬಿಟಿಸ್ ಬಗ್ಗೆ ತಿಳುವಳಿಕೆ ಹರಡಲು...

ಬೆಂಗಳೂರು: ಮಕ್ಕಳ ಡಯಾಬಿಟಿಸ್ ಬಗ್ಗೆ ತಿಳುವಳಿಕೆ ಹರಡಲು, ೫೦೦ ಕ್ಕೂ ಹೆಚ್ಚಿನ ವೈದ್ಯರು ಒಟ್ಟಿಗೆ ಬಂದು "ನೀಲಿ ವೃತ್ತ"ವನ್ನು ರಚಿಸಿದರು. ನೀಲಿವೃತ್ತ ಡಯಾಬಿಟಿಸ್ ನ ಸಾರ್ವತ್ರಿಕ ಚಿಹ್ನೆ.

ಭಾರತದಲ್ಲಿ ಡಯಾಬಿಟಿಸ್ ಅಧ್ಯಯನದ ಸಂಶೋಧನಾ ಸಂಸ್ಥೆ (ಆರ್ ಎಸ್ ಎಸ್ ಡಿ ಐ) ಆಯೋಜಿಸಿದ್ದ ಬೆಂಗಳೂರಿನ ವಾರ್ಷಿಕ ಸಮಾವೇಶದಲ್ಲಿ ಈ ವೈದ್ಯರು ಭಾಗವಹಿಸಿದ್ದರು.

ರ್ಯಾನ್ ಬಾಕ್ಸಿ ಸಂಸ್ಥೆಯ ಭಾರತ ವಿಭಾಗದ ಮುಖ್ಯಸ್ಥ ರಾಜೀವ್ ಸಿಬಲ್, "ರೋಗದ ತಿಳುವಳಿಕೆಯ ಕೊರತೆಯಿಂದಾಗಿ ಮಕ್ಕಳ ಟೈಪ್ ೧ ಡಯಾಬಿಟಿಸ್ ಅನ್ನು ಸರಿಯಾದ ಸಮಯಕ್ಕೆ ಪತ್ತೆ ಹಚ್ಚುವುದಿಲ್ಲ. ಭಾರತದಲ್ಲಿ ಸುಮಾರು ೭೦೦೦೦ ಮಕ್ಕಳಿಗೆ ಟೈಪ್ ೧ ಡಯಾಬಿಟಿಸ್ ಇದೆ. ನಾವು ನೀಲಿ ವೃತ್ತ ನಿರ್ಮಿಸಿದ ಉದ್ದೇಶವೆಂದರೆ ಸಮಾಜದಲ್ಲಿ ಹೆಚ್ಚುತ್ತಿರುವ ಡಯಾಬಿಟಿಸ್ ಅದರಲ್ಲೂ ಮಕ್ಕಳ ಡಯಾಬಿಟಿಸ್ ಬಗ್ಗೆ ತಿಳುವಳಿಕೆ ಮೂಡಿಸುವುದಕ್ಕೆ. ಡಯಾಬಿಟಿಸ್ ದೊಡ್ಡವರಿಗೆ ಮಾತ್ರ ಬರುತ್ತದೆ, ಮಕ್ಕಳಿಗಲ್ಲ ಎಂಬ ತಪ್ಪು ತಿಳುವಳಿಕೆ ಜನರ ಮಧ್ಯೆ ಇದೆ" ಎಂದಿದ್ದಾರೆ.

ಈ ಸಮಾವೇಶದಲ್ಲಿ ೬೦೦೦ ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು. ನೀಲಿ ವೃತ್ತ ನಿರ್ಮಿಸಿದ ವೈದ್ಯರ ಪರವಾಗಿ ಆರ್ ಎಸ್ ಎಸ್ ಡಿ ಐ ಮತ್ತು ರ್ಯಾನ್ ಬಾಕ್ಸಿ, ಡಯಾಬಿಟಿಸ್ ಪೀಡಿತ ಮಗುವನ್ನು ದತ್ತು ತೆಗೆದುಕೊಂಡು ಒಂದು ವರ್ಷದ ವರೆಗೆ ಅವರ ಇನ್ಸುಲಿನ್ ಅವಶ್ಯಕತೆಯನ್ನು ಪೂರೈಸಲಿವೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT