ಸಂಗ್ರಹ ಚಿತ್ರ 
ಆರೋಗ್ಯ-ಜೀವನಶೈಲಿ

ಬೇಸಿಗೆಯಲ್ಲಿ ಕಾಡುವ ಉಷ್ಣ ಗುಳ್ಳೆ

ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಕಾಡುವಂತಹ ಚರ್ಮ ರೋಗವೆಂದರೆ ಉಷ್ಣ ಗುಳ್ಳೆ. ಉಷ್ಣ ಗುಳ್ಳೆ ಎಂದರೆ ಚರ್ಮದ ಮೇಲೆ ದೊಡ್ಡದಾಗಿ...

ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಕಾಡುವಂತಹ ಚರ್ಮ ರೋಗವೆಂದರೆ ಉಷ್ಣ ಗುಳ್ಳೆ. ಉಷ್ಣ ಗುಳ್ಳೆ ಎಂದರೆ ಚರ್ಮದ ಮೇಲೆ ದೊಡ್ಡದಾಗಿ ಹರುಡುವಂತಹ ಕೀವು ತುಂಬಿರುವ ಗುಳ್ಳೆಯಾಗಿದೆ. ಮೊದಲು ಸಣ್ಣ ಗುಳ್ಳೆಯಂತೆ ಬಂದು ದಿನ ದಿನಾ ಹೋದಂತೆ ಕೀವು ತುಂಬಿ ದೊಡ್ಡದಾಗುತ್ತದೆ. ಇದು ಸೋಂಕಿನಿಂದ ಹರಡುವಂತಹ ರೋಗವಾಗಿದೆ.

ಈ ಗುಳ್ಳೆ ಬಂತೆಂದರೆ ವಿಪರೀತ ನೋವು ಕಾಡುತ್ತದೆ. ಒಂದು ಉಷ್ಣ ಗುಳ್ಳೆ ಬಂತೆಂದರೆ ಸಾಕು, ಮೈಯೆಲ್ಲಾ ಹರಡಲು ಪ್ರಾರಂಭಿಸುತ್ತದೆ. ಉಷ್ಣಾಂಶ ಹೆಚ್ಚಾದಾಗ ಬಿಳಿ ರಕ್ತ ಕಣಗಳು, ಪ್ರೋಟೀನ್, ಮತ್ತು ಬ್ಯಾಕ್ಟೀರಿಯಾಗಳು ಗುಳ್ಳೆಯ ಮಧ್ಯಭಾಗದಲ್ಲಿ ಕೀವಿನ ಹಾಗೆ ರೂಪಗೊಳ್ಳುತ್ತವೆ. ಅದನ್ನು ಮುಟ್ಟಿದರೆ ಸಾಕು ವಿಪರೀತ ನೋವುನ್ನುಂಟ ಮಾಡುತ್ತದೆ. ಈ ಉಷ್ಣ ಗುಳ್ಳೆ ದೇಹದ ಹಲವು ಭಾಗಗಳಲ್ಲಿ ಬರುತ್ತವೆ. ಸ್ತನ, ನೆತ್ತಿ, ಬೆನ್ನು, ತಲೆ, ಮುಖ, ತೊಡೆ, ಸೊಂಟ ಮತ್ತು ಪೃಷ್ಠದ ಮೇಲೆ ಬರುತ್ತದೆ.
ಉಷ್ಣ ಗುಳ್ಳೆ ಬರುವ ಸೂಚನೆಗಳು
ಮೊದಲಿಗೆ ಕೆಂಪು ಗುಳ್ಳೆಯಾಗಿ ಕಾಣಿಸಿಕೊಳ್ಳುತ್ತದೆ
ಸ್ತನ, ನೆತ್ತಿ, ಬೆನ್ನು, ತಲೆ, ಮುಖ, ತೊಡೆ, ಸೊಂಟ ಮತ್ತು ಪೃಷ್ಠದ ಬರುತ್ತದೆ
ದಿನೇ ದಿನೇ ದೊಡ್ಡದಾಗಿ ಹೋಗುತ್ತದೆ
ನಂತರ ಕೀವು ತುಂಬಿಕೊಳ್ಳುತ್ತದೆ. ಗುಳ್ಳೆಯ ಮಧ್ಯಭಾಗವು ಬಿಳಿಯಾಗಿ ಕಾಣುತ್ತದೆ.
ಗುಳ್ಳೆಯ ಸುತ್ತಾ ಮುತ್ತಾ ಚರ್ಮ ಗಟ್ಟಿಯಾಗುತ್ತದೆ ಹಾಗೂ ತುಂಬಾ ನೋವನ್ನುಂಟು ಮಾಡುತ್ತದೆ
ಕೆಲವೊಮ್ಮೆ ತುರಿಕೆಯಾಗುತ್ತದೆ
ಇದು ಒಂದು ಅಥವಾ ಅದಕ್ಕಿಂತ ಹೆಚ್ಚು ಅಂದರೆ ಐದಾರು ಬರುವ ಸಾಧ್ಯತೆಗಳಿವೆ
ಈ ಗುಳ್ಳೆ ದೊಡ್ಡದಾಗುತ್ತಿದ್ದಂತೆ ಹೊಡೆದು ಕೀವು ಆಚೆ ಬರುತ್ತದೆ.
ಲಕ್ಷಣಗಳು
ಜ್ವರ
ಕೆಂಪು ಗುಳ್ಳೆ
ಒಂದು ಜಾಗದಲ್ಲಿ ತುಂಬಾ ನೋವಾಗುವುದು
ಮಧುಮೇಹ ಅಥವಾ ಹೃದಯ ಸಂಬಂಧಿಸಿದಂತೆ ಕಾಯಿಲೆಗಳು
ಊತ
ಹಸಿವು
ಕಾರಣಗಳು
ಈ ಉಷ್ಣ ಗುಳ್ಳೆ ಸ್ಟ್ಯಾಫಿಲೋಕೊಕಸ್ ಔರೆಸ್ ಎಂದು ಏಕಾಣುಜೀವಿಗಳಿಂದ ಉತ್ಪತ್ತಿಯಾಗುತ್ತದೆ. ಈ ಏಕಾಣುಜೀವಿ ಕೂದಲಿನಿಂದ ಅಥವಾ ಚರ್ಮದ ಮೇಲೆ ಆಗಿರುವಂತಹ ಸಣ್ಣ ಗಾಯಗಳಿಂದ ಮುಖಾಂತರ ದೇಹದೊಳಗೆ ಸೇರುತ್ತದೆ. ಬೆವರಿನ ಗ್ರಂಥಿಗಳ ಹರಿಯುವಿಕೆಗೆ ತಡೆಯಾದಾಗ, ಈ ಗುಳ್ಳೆ ಬರುತ್ತದೆ.
ಸೋಂಕಿಗೆ ಕಾರಣಗಳು
ಸ್ವಚ್ಛತೆ ಕಡಿಮೆಯಾದಾಗ
ಸೋಂಕು ನಿರೋಧಕ ಶಕ್ತಿ ಕಡಿಮೆಯಾದಾಗ
ಮದ್ಯ ಸೇವನೆ
ಬಿಗಿಯಾದ ಉಡುಪು ಧರಿಸುವುದರಿಂದ
ಮಧುಮೇಹ
ಪೌಷ್ಠಿಕಾಂಶ ಕಡಿಮೆಯಾದಾಗ
ಕೀಮೋಥೆರಪಿ
ಹೆಚ್ಚು ರಾಸಾಯನಿಕಗಳ ಬಳಕೆ

ಮನೆ ಮದ್ದು


ಶಾಖ ನೀಡುವುದು
ಈ ಗುಳ್ಳೆಯ ಮೇಲೆ ಹಾಗೂ ಸುತ್ತಾ ಮುತ್ತಾ ಬಿಸಿ ನೀರಿನ ಶಾಖ ನೀಡಿದರೆ, ಗಟ್ಟಿಯಾದ ಚರ್ಮ ಮೃದುಗೊಳ್ಳುತ್ತದೆ. ಇದರಿಂದ ಕೀವು ಆಚೆ ಬಂದು ಚರ್ಮ ಒಣಗುತ್ತದೆ. ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಬೆರಸಿ ಶಾಖ ನೀಡಬಹುದು, ಅಥವಾ ಸ್ವಚ್ಛ ಬಟ್ಟೆಯೊಂದನ್ನು ತೆಗೆದುಕೊಂಡು ಉಪ್ಪು ಬೆರೆಸಿದ ಬಿಸಿನೀರಿನಲ್ಲಿ ನೆನಸಿ ನಂತರ ಅದನ್ನು ಗುಳ್ಳೆಯ ಮೇಲೆ ಇಡುತ್ತಾ ಬರಬೇಕು. ದಿನಕ್ಕೆ ಆರು ಬಾರಿ ಈ ರೀತಿ ಮಾಡುತ್ತಾ ಬಂದರೆ ಗುಳ್ಳೆ ಕರಗುತ್ತದೆ.

ಹಾಲಿನೊಂದಿಗೆ ಹರಿಶಿನ ಸೇವಿಸಿ
ರಕ್ತ ಶುದ್ಧಗೊಳಿಸುವಂತಹ ಶಕ್ತಿ ಹರಿಶಿನಕ್ಕಿದೆ. ಒಂದು ಲೋಟ ಬೆಚ್ಚಗಿನ ಹಾಲಿಗೆ ಒಂದು ಚಮಚ ಹರಿಶಿನ ಬೆರಸಿ ದಿನಕ್ಕೆ ಮೂರು ಬಾರಿ ಸೇವಿಸಿರಿ.
ಹರಿಶಿನ ಮತ್ತು ಶುಂಠಿ ಪೇಸ್ ತಯಾರಿಸಿಕೊಂಡು, ನೇರವಾಗಿ ಗುಳ್ಳೆಯ ಮೇಲೆ ಹಚ್ಚುಬಹುದು.

ಹರಳೆಣ್ಣೆ
ನಂಜು ನಿರೋಧಕ ಶಕ್ತಿ ಹರಳೆಣ್ಣೆಗೆ ಇದೆ. ಹತ್ತಿಯನ್ನು ಹರಳೆಣ್ಣೆಯಲ್ಲಿ ನೆನಸಿ ಅದನ್ನು ಗುಳ್ಳೆಯ ಮೇಲೆ ಇಡುತ್ತಾ ಬರಬೇಕು. ಇದು ನಂಜನ್ನು ಕಡಿಮೆಗೊಳಿಸುತ್ತಾ ಬರುತ್ತದೆ.

ಹಾಲು
ಪ್ರಾಚೀನ ಕಾಲದಿಂದಲೂ ಹಾಲನ್ನು ಚಿಕಿತ್ಸೆಗಾಗಿ ಬಳಸಿಕೊಂಡು ಬರಲಾಗುತ್ತಿದೆ. ಒಂದು ಕಪ್ ಬಿಸಿ ಹಾಲಿಗೆ ಮೂರು ಚಮಚ ಉಪ್ಪು ಹಾಕಿ ಮಿಶ್ರಣ ಮಾಡಿ. ಸ್ವಲ್ಪ ಗಟ್ಟಿಮಾಡಿಕೊಳ್ಳಲು ಬ್ರೆಡ್ ಪೌಡರ್ ಹಾಕಿ. ಇದನ್ನು ನೇರವಾಗಿ ಗುಳ್ಳೆಯ ಮೇಲೆ ಹಚ್ಚಿ. ದಿನಕ್ಕೆ 7-8 ಬಾರಿ ಇದೇ ರೀತಿ ಮಾಡುತ್ತಾ ಬರಬೇಕು.

ಈರುಳ್ಳಿ
ಈರುಳ್ಳಿಯಲ್ಲಿ ಸೂಕ್ಷ್ಮಜೀವಿಗಳಿದ್ದು ಇದು ಗುಳ್ಳೆಗಳನ್ನು ಬೇಗ ಮಾಯಮಾಡುತ್ತದೆ. ಈರುಳ್ಳಿಯ ತುಂಡನ್ನು ತೆಗೆದು ಅದನ್ನು ಉಷ್ಣಬೊಕ್ಕೆಯ ಮೇಲೆ ಇಟ್ಟು, ಒಂದು ಬಟ್ಟೆಯಿಂದ ಬಿಗಿಯಾಗಿ ಕಟ್ಟಬೇಕು. ಇದೇ ರೀತಿ ದಿನಕ್ಕೆ 4 ರಿಂದ 5 ಬಾರಿ ಮಾಡುತ್ತಾ ಬಂದರೆ, ಉಷ್ಣ ಬೊಕ್ಕೆ ಒಣಗುತ್ತಾ ಬರುತ್ತದೆ.

ಮೊಟ್ಟೆ
ಬೇಯಿಸಿದ ಮೊಟ್ಟೆಯ ಬಿಳಿ ಭಾಗವನ್ನು ನೆನಸಿ ಅದನ್ನು ಗುಳ್ಳೆಯ ಮೇಲೆ ಇಟ್ಟು ಬಟ್ಟೆಯಿಂದ ಕಟ್ಟಿ.

ಬೇಕನ್
ಬೇಕನ್ ಅಂದರೆ ಉಪ್ಪುಹಚ್ಚಿದ ಹಂದಿಯ ಮಾಂಸ. ಈ ಮಾಂಸವನ್ನು ತೆಗೆದು ಬಟ್ಟೆಯಲ್ಲಿಟ್ಟು ಗುಳ್ಳೆಯ ಸುತ್ತಾ ಕಟ್ಟಬೇಕು. ಇದು ಕೂಡ ಗುಳ್ಳೆಯನ್ನು ಒಣಗುವಂತೆ ಮಾಡುತ್ತದೆ.

ಜೋಳದ ಹಿಟ್ಟು
ಕುದಿಯುವ ಬಿಸಿನೀರಿಗೆ ಜೋಳದ ಹಿಟ್ಟು ಹಾಕಿ ಪೇಸ್ಟ್ ಸಿದ್ಧಪಡಿಸಿಕೊಂಡು ಅದನ್ನು ಗುಳ್ಳೆಯ ಮೇಲೆ ಹಾಕಿ ಬಟ್ಟೆಯಿಂದ ಕಟ್ಟಬೇಕು. ಗುಳ್ಳೆ ಒಣಗುವವರೆಗೆ ಈ ರೀತಿ ಮಾಡುತ್ತಾ ಬರಬೇಕು.

ಜೀರಿಗೆ
ಜೀರಿಗೆಯನ್ನು ಪುಡಿ ಮಾಡಿದ ನಂತರ ನೀರು ಬೆರೆಸಿ ಪೇಸ್ಟ್ ಮಾಡಿಕೊಂಡು ಬೊಕ್ಕೆಯ ಮೇಲೆ ಹಚ್ಚುತ್ತಾ ಬರಬೇಕು.

ಪಾರ್ಸ್ಲಿ ಎಲೆಗಳು
ನೀರಿನಲ್ಲಿ ಪಾರ್ಸ್ಲಿ ಎಲೆಗಳು ಕುದಿಸಬೇಕು. ತೆಳ್ಳಗಿನ ಬಟ್ಟೆಯಲ್ಲಿ ಅದನ್ನು ಸುತ್ತಬೇಕು. ಬ್ಯಾಂಡೇಜ್ ಮಾದರಿ ಮಾಡಿಕೊಂಡು ಅದನ್ನು ಗುಳ್ಳೆಗೆ ಕಟ್ಟಬೇಕು. ಇದು ಯಾವುದೇ ರೀತಿಯ ಸೋಂಕು ಹರಡಲು ಬಿಡದೇ, ಕೀವು ಆಚೆ ಬಂದು, ಬೇಗ ಒಣಗಲು ಸಹಕಾರಿಯಾಗತ್ತದೆ.

ಕಪ್ಪು ಬೀಜ
ಕಪ್ಪು ಬೀಜ ಚರ್ಮ ರೋಗ ನಿವಾರಣೆಗೆ ಸಹಕಾರಿಯಾಗುತ್ತದೆ. ಈ ಕಪ್ಪು ಬೀಜವನ್ನು ಪುಡಿಮಾಡಿಕೊಂಡು ಪೇಸ್ಟ್ ತಯಾರಿಸಿ ಚರ್ಮದ ಮೇಲೆ ಹಚ್ಚುತ್ತಾ ಬಂದರೆ ಗುಳ್ಳೆಗಳು ಮಾಯವಾಗುತ್ತವೆ.

ಬೇವು
ಬೇವಿನ ಎಲೆಗಳ ಪೇಸ್ಟ್ ತಯಾರಿಸಿ ಗುಳ್ಳೆಯ ಮೇಲೆ ಹಚ್ಚುತ್ತಾ ಬಂದರೆ ಗುಳ್ಳೆ ಶಮನವಾಗಲು ಸಹಕಾರಿಯಾಗುತ್ತದೆ.

ಬೆಳ್ಳುಳ್ಳಿ
ಬೆಳ್ಳುಳ್ಳಿ ಪೇಸ್ಟ್ ತಯಾರಿಸಿ ಗುಳ್ಳೆಯ ಮೇಲೆ ಹಚ್ಚಬೇಕು. 10-15 ನಿಮಿಷ ಬಿಟ್ಟು ತೆಗೆಯಬೇಕು. ಇದೇ ರೀತಿ ಪೇಸ್ಟ್ ನ್ನು ದಿನಕ್ಕೆ ಹಲವಾರು ಬಾರಿ ಮಾಡಿದರೆ, ಗುಳ್ಳೆ ಶಮನವಾಗುತ್ತದೆ.

ಕಲ್ಲು ಉಪ್ಪು
ಸ್ನಾನ ಮಾಡುವ ಮುನ್ನ ಬಿಸಿ ನೀರಿಗೆ ಕಲ್ಲು ಉಪ್ಪು ಬೆರೆಸಿ ಸ್ನಾನ ಮಾಡಿ. ಇದು ಚರ್ಮದ ಸೋಂಕನ್ನು ಹೋಗಲಾಡಿಸಲು ಸಹಕಾರಿಯಾಗುತ್ತದೆ. ಹಾಗೇ, ಗುಳ್ಳೆಗಳನ್ನು ಕಡಿಮೆ ಮಾಡುತ್ತದೆ.

ತುಳಸಿ ಎಲೆ
ತುಳಸಿ ರಸ ಮತ್ತು ಶುಂಠಿಯನ್ನು ಬೆರೆಸಿ ಪೇಸ್ಟ್ ಮಾಡಿಕೊಳ್ಳಬೇಕು. ಇದಕ್ಕೆ ಇಂಗು ಬೆರೆಸಿ. ಈ ಮಿಶ್ರಣವನ್ನು ಗುಳ್ಳೆಗಳ ಮೇಲೆ ಹಚ್ಚುತ್ತಾ ಬನ್ನಿ. ಇದು ಆ್ಯಂಟಿಬಯೋಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ.

ಮುಂಜಾಗ್ರತೆ ಕ್ರಮಗಳು
ಕೈಯನ್ನು ಹಾಗಾಗ ನೀರಿನಲ್ಲಿ ತೊಳೆದು ಸ್ವಚ್ಛವಾಗಿಟ್ಟುಕೊಂಡಿರಬೇಕು
ಸ್ನಾನ ಮಾಡುವಾಗ ಆ್ಯಂಟಿ ಬಯೋಟಿಕ್ ಸೋಪ್ ಬಳಕೆ ಮಾಡಿ
ಬಳಕೆ ಮಾಡುವ ಟವಲ್, ಬಟ್ಟೆ ಸ್ವಚ್ಛವಾಗಿರಬೇಕು
ಬೊಕ್ಕೆಯನ್ನು ಕೈಯಿಂದ ಹಿಸುಕಬಾರದು. ಕೈಯಿಂದ ಅದನ್ನು ಹಿಸುಕಿ ಕೀವು ತೆಗೆದರೆ, ಅದು ಮತ್ತಷ್ಟು ಹರಡುವ ಸಾಧ್ಯತೆ ಇದೆ.
ಸಿಹಿ ತಿನಿಸು ಸೇವನೆ ಕಡಿಮೆ ಮಾಡಬೇಕು
ಕಾಫಿ ಸೇವನೆ ಬೇಡ
ವಿಟಮಿನ್ A,C ಮತ್ತು E ಒಳಗೊಂಡ ಆಹಾರ ಸೇವಿಸಬೇಕು.

-ಮೈನಾಶ್ರೀ.ಸಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT