ನಾಚಿಕೆ ಮುಳ್ಳಿನ ಗಿಡ (ಸಂಗ್ರಹ ಚಿತ್ರ) 
ಆರೋಗ್ಯ-ಜೀವನಶೈಲಿ

ನಾಚಿಕೆ ಇರುವ ವೈದ್ಯ

ನಾಚಿಕೆ ಮುಳ್ಳಿನ ಗಿಡ ವಿಫುಲ, ವಿಶಿಷ್ಟ ರಾಸಾಯನಿಕಗಳ ಭಾರದಿಂದ ಬಾಗಿದೆಯೇನೋ ಎಂದೆನೆಸುತ್ತದೆ...

ನಾಚಿಕೆ ಮುಳ್ಳಿನ ಗಿಡ ವಿಫುಲ, ವಿಶಿಷ್ಟ ರಾಸಾಯನಿಕಗಳ ಭಾರದಿಂದ ಬಾಗಿದೆಯೇನೋ ಎಂದೆನೆಸುತ್ತದೆ. ಇದರ ನಸು ಗುಲಾಬಿ ವರ್ಣದ ಹೂಗಳು, ಚಳಿಗಾಲದಲ್ಲಿರುವ ಬೀಜಯುಕ್ತ ಕಾಯಿ. ಸಣ್ಣ ಎಲೆಗಳು ಬೇರುಗಳು, ಬಳ್ಳಿಯಂಥ ಗಿಡಗಳೆಲ್ಲವೂ ವಿವಿಧ ವ್ಯಾಧಿಗಳಿಗೆ ಸಿದ್ಧೌಷಧ ಗೋತ್ತಾ?

ಹಲವೆಡೆ ಕೃಷಿ ಭೂಮಿಗೆ ಕಾಲಿಟ್ಟರೆ ಚುಚ್ಚಿಕೊಳ್ಳುವ ನಾಚಿಕೆಮುಳ್ಳು ದಿವ್ಯ ಔಷಧವಾಗಿ ಪುರಾತನ ಕಾಲದಿಂದಲೂ ವಿವಿಧ ವ್ಯಾಧಿಗಳನ್ನು ನಿವಾರಿಸುತ್ತದೆ. ಚರಕ, ಸುಶ್ರುತರಂಥ ಆಯುರ್ವೇದ ಸಂಶೋಧಕರೂ ಇದರ ಗುಣವಿಶೇಷಗಳನ್ನು ವರ್ಣಿಸಿದ್ದರು.

ಎತ್ತರದಿಂದ ಬಿದ್ದು ಉಳುಕಿದರೆ ಎಲುಬು ಮುರಿದಿದ್ದರೆ ನಾಚಿಕೆ ಮುಳ್ಳಿನ ಆಮೂಲಾಗ್ರ ಭಾಗಗಳನ್ನು ನಿಂಬೆರಸದಲ್ಲಿ ಅರೆದು ಬಿಸಿಮಾಡಿ ಲೇಪಿಸಬೇಕು. ಆಗ ನೋವು ಮಾಯವಾಗಿ ಎಲುಬಿನ ಸಂದುಗೂಡಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಇದೇ ಲೇಪನ ಪೈಲ್ಸ್, ವ್ರಣ, ಗಾಯಗಳನ್ನೂ ಗುಣಪಡಿಸುತ್ತದೆ. ಬೀಜವೂ ಸೇರಿದಂತೆ ಈ ಗಿಡದ ಐದು ಭಾಗಗಳ ರಸ ಸೇವನೆ ರಕ್ತಪಿತ್ಥವನ್ನೂ ಶಮನಗೊಳಿಸುತ್ತದೆ.

ಈ ರಸಕ್ಕೆ ಜೀರಿಗೆ ಹುಡಿ ಬೆರೆಸಿ ಅರ್ಧ ಔನ್ಸ್ ಪ್ರಮಾಣದಲ್ಲಿ ದಿನಕ್ಕೆ ಮೂರು ಸಲ ಸೇವಿಸಿದರೆ ಉರಿ ಮೂತ್ರ, ಮೂತ್ರಬಂಧ ಮೊದಲಾದ ಮೂತ್ರ ದೋಷಗಳನ್ನೂ ನಿವಾರಿಸಬಹುದು. ಜಾನುವಾರುಗಳಿಗೆ ಅಕಾಲದಲ್ಲಿ ಗರ್ಭ ಹೊರಗೆ ಬರುವ ಪ್ರಸಂಗವಿದ್ದಲ್ಲಿ ನಾಚಿಕೆಮುಳ್ಳಿನ ಇಡೀ ಗಿಡವನ್ನು ಸಣ್ಣದಾಗಿ ಕತ್ತರಿಸಿ ತೌಡು ಅಥವಾ ಅಕ್ಕಿಯೊಂದಿಗೆ ಬೇಯಿಸಿ ಆರನೇ ತಿಂಗಳಿಡೀ ನೀಡುತ್ತಿದ್ದರೆ ಸಮಸ್ಯೆ ಪರಿಹಾರ. ಪ್ರಸವ ಕಾಲದ ನಂಜನ್ನು ನಿವಾರಿಸಿ ಅಧಿಕ ಹಾಲು ನೀಡಲೂ ಇದು ಸಹಕಾರಿ. ಆಡುಗಳಿಗೆ ಈ ಗಿಡ ಪ್ರಿಯ ಆಹಾರ.

ಈ ಗಿಡ ಬೇರಿನಲ್ಲಿ ಶೇ.50ರಷ್ಟು ಪೊಟ್ಯಾಷ್ ಮತ್ತು ಟ್ಯಾನಿನ್ ಅಂಶವಿದೆಯಲ್ಲದೆ ಮಿನೋಸಿನ್ ಕ್ಷಾರವಿದೆ. ಕಹಿ ರುಚಿಯ ಬೀಜಕ್ಕೆ ಕಟುವಿಪಾಕ, ಲಘುರೂಕ್ಷ ಗುಣವಿದ್ದು ವಾತ, ಪಿತ್ಥ, ಕಫಗಳೆಂಬ ತ್ರಿದೋಷ ನಾಶಕವಾಗಿದೆ.

ರಕ್ತಶೋಧಕ ಸಾಮರ್ಥ್ಯಮೊರುವ ಈ ಗಿಡ ಮೂಗಿನ ರಕ್ತಸ್ರಾವ ತಡೆದು ಚಿಕ್ಕ ಲೋಮನಾಳಗಳನ್ನು ಸಂಕುಚಿತಗೊಳಿಸುತ್ತದೆ.

ಅತಿಸಾರ, ಎದೆನೋವು, ಮೂಲವ್ಯಾಧಿ, ಸ್ತ್ರೀರೋಗಗಳು, ಮಧುಮೇಹಕ್ಕೂ ಇದು ಒಳ್ಳೆಯದು. ಪುರುಷರ ಶಕ್ತಿಹ್ರಾಸ ತಡೆದು ನವಚೈತನ್ಯ ನೀಡಲು ಸಹಕಾರಿ.

ಬಿದ್ದು ಕೈಕಾಲುಗಳ ಎಲುಬುಗಳಿಗೆ ಘಾಸಿಯಾಗಿದ್ದರೆ ಸಮೂಲಾಗ್ರ ನಾಚಿಕೆ ಗಿಡ ಮತ್ತು ಸಾಸಿವೆ ಸೇರಿಸಿ ತೈಲ ತಯಾರಿಸಿ ಹಚ್ಚುವುದರಿಂದ ಶೀಘ್ರ ಗುಣವಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

SCROLL FOR NEXT