ಆರೋಗ್ಯ-ಜೀವನಶೈಲಿ

ಬೀಟ್ರೋಟ್ ಜ್ಯೂಸ್ ಸೇವೆನೆ ಹೆಚ್ಚಿಸಲಿದೆ ಸಿಒಪಿಡಿ ರೋಗಿಗಳ ದೈಹಿಕ ಸಾಮರ್ಥ್ಯ

ಕೊಬ್ಬು ಕೊಲ್ಲುವಂತಹ ಶಕ್ತಿ ಬೀಟ್ರೋಟ್ ಜ್ಯೂಸ್‌ಗೆ ಇದೆ ಎಂದು ಹೇಳಲಾಗುತ್ತದೆ. ಆದರೆ, ಇದು ಸಿಒಪಿಡಿ(ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗ) ರೋಗದಿಂದ...

ಕೊಬ್ಬು ಕೊಲ್ಲುವಂತಹ ಶಕ್ತಿ ಬೀಟ್ರೋಟ್ ಜ್ಯೂಸ್‌ಗೆ ಇದೆ ಎಂದು ಹೇಳಲಾಗುತ್ತದೆ. ಆದರೆ, ಇದು ಸಿಒಪಿಡಿ(ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗ) ರೋಗದಿಂದ ಬಳಲುತ್ತಿರುವವರಿಗೂ ಸಹಕಾರಿಯಾಗಲಿದೆಯಂತೆ.

ಬೀಟ್ರೋಟ್ ಜ್ಯೂಸ್ ಸೇವೆನೆಯಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗ(ಸಿಒಪಿಡಿ)ದಿಂದ ನರಳುತ್ತಿರುವವರ ವ್ಯಾಯಾಮದ ಸಾಮರ್ಥ್ಯ ಹೆಚ್ಚಿಸಲಿದೆ ಎಂದು ನೂತನ ಅಧ್ಯಯನ ಹೇಳುತ್ತದೆ.

ವೇಕ್ ಫಾರೆಸ್ಟ್ ವಿಶ್ವವಿದ್ಯಾಲಯ ಸಿಒಪಿಡಿ ರೋಗಕ್ಕೆ ಸಂಬಂಧಿಸಿದಂತೆ ನಡೆಸಿದ ಸಂಶೋಧನೆಯ ಪ್ರಕಾರ ಸಿಒಪಿಡಿ ರೋಗಿಗಳು ಬೀಟ್ರೋಟ್ ಜ್ಯೂಸ್ ಕುಡಿಯುವುದರಿಂದ ಅವರ ವ್ಯಾಯಾಮ ಮಾಡುವ ಸಾಮರ್ಥ್ಯ ಹೆಚ್ಚಿಸಲಿದೆ ಎಂದು ತಿಳಿದು ಬಂದಿದೆ.

ಬೀಟ್‌ರೋಟ್ ವಿಟಮಿನ್ ಎ ಮತ್ತು ವಿಟಮಿನ್ ಸಿಯನ್ನು ಒಳಗೊಂಡಿದೆ, ಇವು ದೈಹಿಕ ವ್ಯಾಯಾಮವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಬೀಟ್ರೋಟ್ ಜ್ಯೂಸ್ ಸೇವನೆಯಿಂದ ನೇಟ್ರೇಟ್ ಹೆಚ್ಚಾಗಲಿದ್ದು, ವ್ಯಾಯಾಮ ಮಾಡುವ ಶಕ್ತಿಯನ್ನು ವೃದ್ಧಿಸುತ್ತದೆ. ಸಿಒಪಿಡಿ ರೋಗದಿಂದ ನರಳುತ್ತಿರುವವರನ್ನು ಸಂಶೋಧನೆಗೆ ಒಳಪಡಿಸಿದಾಗ ಈ ಸತ್ಯ ತಿಳಿದಿದೆ ಎಂದು ಸಂಶೋಧನೆಯ ಮುಖ್ಯಸ್ಥ ಮಿಚೆಲ್ ಬೆರ್ರಿ ಹೇಳಿದ್ದಾರೆ.

ಸಿಒಪಿಡಿ ಒಬ್ಬರಿಂದ ಒಬ್ಬರಿಗೆ ಹರಡದ ಕಾಯಿಲೆಯಾಗಿದ್ದು, ತೊಂದರೆಗೆ ಒಳಗಾದವರು ಉಸಿರಾಡಲು ಕಷ್ಟಪಡಬೇಕಾಗುತ್ತದೆ. ಹೆಚ್ಚು ಕಾಲ ಉಳಿದುಕೊಳ್ಳುವ ಕೆಮ್ಮು, ಕಫ ತುಂಬುವುದು, ನಡೆಯುವಾಗ ಮತ್ತು ಮೆಟ್ಟಿಲು ಹತ್ತುವಂತಹ ದೈಹಿಕ ಶ್ರಮದ ಸಂದರ್ಭಧಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು ಈ ರೋಗದ ಮುಖ್ಯ ಲಕ್ಷಣವಾಗಿದೆ.

ಬೀಟ್ರೋಟ್ ಜ್ಯೂಸ್ ಕುಡಿಯುವುದರಿಂದ ದೈಹಿಕ ಶ್ರಮದ ಸಂದರ್ಭದಲ್ಲಿ ಉಂಟಾಗುವ ಉಸಿರಾಟದ ತೊಂದರೆ ಕಡಿಮೆಯಾಗುವುದಲ್ಲದೆ, ರಕ್ತದೊತ್ತಡ ನಿವಾರಣೆಯಾಗಲಿದೆ.

17 ಸಿಒಪಿಡಿ ರೋಗಿಗಳನ್ನು ಸಂಶೋಧನೆಗೆ ಒಳಪಡಿಸಲಾಗಿದೆ. ಅವರಿಗೆ ಬ್ರೀಟ್ರೋಟ್ ಜ್ಯೂಸ್ ನೀಡುವುದರ ಜೊತೆಗೆ ಪ್ರತಿನಿತ್ಯ ಅವರ ಆರೋಗ್ಯದಲ್ಲಿ ಉಂಟಾಗುವ ಬದಾಲವಣೆಯನ್ನು ಗಮನಿಸಲಾಯಿತು. ಈ ಮುಖಾಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ವ್ಯಾಯಾಮದ ಸಾಮರ್ಥ್ಯ ಹೆಚ್ಚಿಸಿದೆ ಎಂದು ವರದಿ ಹೇಳುತ್ತದೆ.

-ಮೈನಾಶ್ರೀ.ಸಿ


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT