ತಂಪು ಪಾನೀಯ 
ಆರೋಗ್ಯ-ಜೀವನಶೈಲಿ

ಮನೆಯಲ್ಲೇ ತಯಾರಿಸಿ ತಂಪು ಪಾನೀಯ

ಪಾನೀಯಗಳನ್ನು ಮನೆಯಲ್ಲೇ ತಯಾರಿಸುವ ಮೂಲಕ ನೀರಿನಿಂದ ಹರಡುವ ರೋಗಗಳನ್ನೂ ತಡೆಗಟ್ಟಬಹುದು, ಹಣ ಕೂಡಾ ಉಳಿಸಬಹುದು...

ಹೊರಗೆ ಉರಿ ಬಿಸಿಲು, ಗಂಟಲು ಒಣಗುತ್ತಿದೆ. ನಾವು ಹೊರಗಡೆ ಕುಡಿಯುವ ನೀರು ಶುದ್ಧವಾಗಿದೆ ಎಂದು ಹೇಳುವಂತೆಯೂ ಇಲ್ಲ. ಹಾಗಂತ ನೀರು ಕುಡಿಯದೇ ಇರಲು ಆಗುತ್ತಾ? ಬಾಯಾರಿಕೆಯಾದಾಗ ಬರೀ ನೀರು ಕುಡಿಯುವ ಬದಲು ಹಣ್ಣಿನ ರಸವನ್ನೂ ಕುಡಿದರೆ ಒಳ್ಳೆಯದು. ಹಣ್ಣಿನ ರಸ ಕುಡಿಯುವ ಬದಲು ಮನಸ್ಸು ತಂಪು ಪಾನೀಯಗಳನ್ನು ಕುಡಿಯಲು ಹಂಬಲಿಸುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ತಂಪು ಪಾನೀಯಗಳು ಕುಡಿಯಲು ರುಚಿ ಎಂದೆನಿಸಿದರೂ ಅವುಗಳು ದೇಹಕ್ಕೆ ಹಾನಿಕರ. ಹೀಗಿರುವಾಗ ಕೆಲವೊಂದು ತಂಪು ಪಾನೀಯಗಳನ್ನು ಮನೆಯಲ್ಲೇ ತಯಾರಿಸಬಹುದು. ಪಾನೀಯಗಳನ್ನು ಮನೆಯಲ್ಲೇ ತಯಾರಿಸುವ ಮೂಲಕ ನೀರಿನಿಂದ ಹರಡುವ ರೋಗಗಳನ್ನೂ ತಡೆಗಟ್ಟಬಹುದು, ಹಣ ಕೂಡಾ ಉಳಿಸಬಹುದು.

ಕಲ್ಲಂಗಡಿ ಹಣ್ಣು: ಬೇಸಿಗೆ ಕಾಲದಲ್ಲಿ ಸುಲಭವಾಗಿ ಇದು ಸುಲಭವಾಗಿ ಸಿಗುತ್ತದೆ. ಕಲ್ಲಂಗಡಿ ಹಣ್ಣಿನ ಸೇವನೆ ದೇಹಕ್ಕೆ ತಂಪು. ಕಲ್ಲಂಗಡಿ ಹಣ್ಣಿನಲ್ಲಿ ಕಬ್ಬಿಣದ ಅಂಶ ಯಥೇಚ್ಛವಾಗಿ ಇರುವುದರಿಂದ ಬಿಸಿಲಿನ ಬೇಗೆಗೆ ನಷ್ಟವಾದ ದೇಹದಲ್ಲಿನ ನೀರಿನಂಶವನ್ನು ತುಂಬಲು ಇದು ಸಹಕಾರಿ.

ಮಜ್ಜಿಗೆ: ಮನೆಯಲ್ಲಿ ಸುಲಭವಾಗಿ ತಯಾರಿಸಬಲ್ಲ ಪಾನೀಯ ಇದು. ಗಟ್ಟಿ ಮೊಸರು, ತಂಪಾದ ನೀರು, ಹಸಿ ಮೆಣಸು, ಶುಂಠಿ, ಕರಿಬೇವು, ಉಪ್ಪು ಇಷ್ಟಿದ್ದರೆ ಸಾಕು ಮಸಾಲಾ ಮಜ್ಜಿಗೆಯನ್ನು ಮನೆಯಲ್ಲಿಯೇ ತಯಾರಿಸಬಹುದು. ಇದು ಬಾಯಾರಿಕೆಯನ್ನು ನೀಗಿಸುವುದರ ಜತೆಗೆ ದೇಹದ ಸುಸ್ತು ಕೂಡಾ ನಿವಾರಿಸುತ್ತದೆ.

ಎಳನೀರು: ಶುದ್ಧವಾದ ನೀರೆಂದರೆ ಅದು ಎಳನೀರು. ಗ್ಲುಕೋಸ್, ಪ್ರೊಟೀನ್ ಗಳಿಂದ ಕೂಡಿರುವ ಪ್ರಕೃತ್ತಿದತ್ತವಾದ ಈ ಪಾನೀಯ ಸೇವಿಸಿದರೆ ಸುಸ್ತು, ಉದರಬೇನೆ ಎಲ್ಲದಕ್ಕೂ ಪರಿಹಾರ ಸಿಗುತ್ತದೆ.

ಸೌತೆ ಕಾಯಿ/ಮುಳ್ಳುಸೌತೆ : ಸೌತೆ ಕಾಯಿಯನ್ನು ಸೇವಿಸುವ ಮೂಲಕ ದಾಹ ಶಮನ ಮಾಡಬಹುದು. ಕಣ್ಣು ಸುಸ್ತಾಗಿದ್ದರೆ ಸೌತೆ ಕಾಯಿಯನ್ನು ರೌಂಡ್ ಶೇಪ್‌ನಲ್ಲಿ ತೆಳು ತುಂಡು ಮಾಡಿ ಕಣ್ಣಿಗಿಟ್ಟರೆ ಒಳ್ಳೆಯದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?