ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ಮಕ್ಕಳ ಆಹಾರ: ಕೆಟ್ಟದ್ದನ್ನು ತಿನ್ನಬೇಡಿ ಎನ್ನುವುದಕಿಂತ ಒಳ್ಳೆಯದನ್ನು ತಿನ್ನಿ ಎಂದು ಹೇಳುವುದು ಉಚಿತ

ನಿಮ್ಮ ಮಕ್ಕಳಲ್ಲಿ ಒಳ್ಳೆಯ ಆಹಾರ ಪದ್ಧತಿ ಮೂಡಿಸಬೇಕೆಂದಿದ್ದರೆ, ಅವರಿಗೆ ಇಂತಹ ಆಹಾರವನ್ನು ಸೇವಿಸಬಾರದು ಎನ್ನುವುದಕ್ಕಿಂತ...

ನ್ಯೂಯಾರ್ಕ್: ನಿಮ್ಮ ಮಕ್ಕಳಲ್ಲಿ ಒಳ್ಳೆಯ ಆಹಾರ ಪದ್ಧತಿ ಮೂಡಿಸಬೇಕೆಂದಿದ್ದರೆ, ಅವರಿಗೆ ಇಂತಹ ಆಹಾರವನ್ನು ಸೇವಿಸಬಾರದು ಎನ್ನುವುದಕ್ಕಿಂತ ಯಾವುದನ್ನು ತಿಂದರೆ ಒಳ್ಳೆಯದು ಎಂದು ಹೇಳಿ ಎಂದು ಹೊಸ ಅಧ್ಯಯನ ಸಲಹೆ ನೀಡಿದೆ.

"ನಿಮ್ಮ ಮಕ್ಕಳಿಗೆ ಕುಕ್ಕಿಗಳನ್ನು ತಿನ್ನಬೇಡಿ ಏಕೆಂದರೆ ದಪ್ಪಗಾಗುತ್ತೀರಿ ಎನ್ನುವುದಕಿಂತ ಸೇಬು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿ. 'ನಿಷೇಧದ' ಸಂದೇಶಗಳು ನಮ್ಮಲ್ಲಿ ಬಹುತೇಕರಿಗೆ ಒಳ್ಳೆಯ ಪರಿಣಾಮ ಉಂಟು ಮಾಡುವುದಿಲ್ಲ" ಎಂದು ಕಾರ್ನೆಲ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.

ಯಾವುದನ್ನು ತಿನ್ನಬಾರದು ಎಂಬುವುದಕ್ಕಿಂತ ಯಾವುದನ್ನು ತಿನ್ನಬೇಕು ಎಂಬುದರ ಮೇಲೆ ಗಮನ ಕೇಂದ್ರೀಕರಿಸುವುದು ಒಳಿತು ಎಂಬುದು ಈ ಅಧ್ಯಯನದ ತಿರುಳು. ಅಂದರೆ ಅನಾರೋಗ್ಯಕರ ತಿಂಡಿಗಳನ್ನು ಸೇವಿಸುವುದರಿಂದಾಗುವ ತೊಂದರೆಗಳನ್ನು ಪಟ್ಟಿ ಮಾಡುವುದಕ್ಕಿಂತ ಆರೋಗ್ಯಕರ ಆಹಾರ ಸೇವಿಸುವುದರ ಮಹತ್ವವನ್ನು ತಿಳಿಸುವುದು ಹೆಚ್ಚು ಪರಿಣಾಮಕಾರಿ ಎಂದಿದೆ.

"ನೀವು ಪೋಷಕರಾಗಿದ್ದರೆ ಹ್ಯಾಂಬರ್ಗರ್ ಗಳಿಂದಾಗುವ ಅನಾಹುತಗಳಿಗಿಂತ ಬ್ರಾಕ್ಕೊಲಿಯಿಂದಾಗುವು ಒಳ್ಳೆಯ ಪರಿಣಾಮಗಳ ಮೇಲೆ ಗಮನ ಹರಿಸುವುದೊಳಿತು" ಎಂದು ಕಾರ್ನೆಲ್ ಆಹಾರ ಮತ್ತು ಬ್ರಾಂಡ್ ಲ್ಯಾಬ್ ನ ನಿರ್ದೇಶಕ ಹಾಗೂ ಈ ಅಧ್ಯನದ ಪ್ರಧಾನ ಲೇಖಕ ತಿಳಿಸಿದ್ದಾರೆ.

ಋಣಾತ್ಮಕ ಮತ್ತು ಧನಾತ್ಮಕ ಪೌಷ್ಟಿಕ ಆಹಾರ ಸಂದೇಶಗಳನ್ನೊಳಗೊಂಡ ೪೩ ಪ್ರಕಟನಾ ಅಂತರಾಷ್ಟ್ರೀಯ ಅಧ್ಯಯನಗಳನ್ನು ಪರಿಶೀಲಿಸಿರುವ ಈ ಸಂಶೋಧಕರು ಮೇಲಿನ ಸಲಹೆ ನೀಡಿದ್ದಾರೆ.

ಋಣಾತ್ಮಕ ಸಂದೇಶಗಳು ಪ್ರಾವಿಣ್ಯತೆ ಹೊಂದಿರುವವರ ಜೊತೆ ಕೆಲಸ ಮಾಡುತ್ತದೆ. ಉದಾಹರಣಗೆ ವೈದ್ಯರು. ಬಹಳಷ್ಟು ಜನಕ್ಕೆ ಪೌಷ್ಟಿಕತೆಯ ಬಗ್ಗೆ ತಿಳಿದಿರುವುದಿಲ್ಲವಾದ್ದರಿಂದ ಧನಾತ್ಮಕ ಸಂದೇಶಗಳು ಉಳಿದವರಿಗೆ ಕೆಲಸ ಮಾಡುತ್ತವೆ ಎಂದಿದ್ದಾರೆ.

ಸಾರ್ವಜನಿಕ ಆರೋಗ್ಯ ಸಂದೇಶಗಳನ್ನು ಬಿತ್ತರಿಸುವಾಗ ಪೌಷ್ಟಿಕತೆಯ ಸಂದೇಶಗಳನ್ನೊಳಗೊಂಡ ಧನಾತ್ಮಕ ಅಂಶಗಳನ್ನು ಜನರಿಗೆ ತೋರಿಸಬೇಕು ಎಂದಿದ್ದಾರೆ ಸಂಶೋಧಕರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT