ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ದೇಹ ಹಾಗೂ ಮನಸ್ಸು ಆರೋಗ್ಯವಾಗಿರಲು ಉತ್ತಮ ನಿದ್ದೆ ಅತ್ಯವಶ್ಯಕ.

ನಮ್ಮ ಜೀವಿತಾವಧಿಯ ಮುಕ್ಕಾಲು ಭಾಗ ಸಮಯವನ್ನು ನಾವು ನಿದ್ದೆ ಮಾಡುವುದರಲ್ಲೇ ಕಳೆಯುತ್ತೇವೆ, ನಿದ್ದೆ ಎಂಬುದು ಮನುಷ್ಯನ ದೇಹ ಹಾಗೂ ಮನಸ್ಸಿಗೆ ಅತ್ಯಂತ ...

ನಮ್ಮ ಜೀವಿತಾವಧಿಯ ಮುಕ್ಕಾಲು ಭಾಗ ಸಮಯವನ್ನು  ನಾವು ನಿದ್ದೆ ಮಾಡುವುದರಲ್ಲೇ ಕಳೆಯುತ್ತೇವೆ, ನಿದ್ದೆ ಎಂಬುದು ಮನುಷ್ಯನ ದೇಹ ಹಾಗೂ ಮನಸ್ಸಿಗೆ ಅತ್ಯಂತ ಅವಶ್ಯಕ. ಉತ್ತಮ ನಿದ್ದೆಯಿಂದ ಹೆಚ್ಚಿನ ಲಾಭ ಸಿಗುತ್ತದೆ ಎಂದು ಹಲವು ಸಂಶೋಧನೆಗಳು ತಿಳಿಸಿವೆ,

ಅವಶ್ಯಕತೆಗಿಂತ ಕಡಿಮೆ ನಿದ್ದೆ ಮಾಡುವುದರಿಂದ ಮನುಷ್ಯನಿಗೆ ಖಿನ್ನತೆ, ಹೃದಯ ಸಮಸ್ಯೆ, ಬೊಜ್ಜು ಸೇರಿದಂತೆ ಹಲವು ಸಮಸ್ಯೆಗಳಿಗೆ ದಾರಿಯಾಗುತ್ತದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ತೀರಾ ಕಡಿಮೆ ನಿದ್ದೆ ಮಾಡುವುದು ಮನುಷ್ಯನನ್ನು ಸಾವಿನ ದವಡೆಗೆ ನೂಕುತ್ತದೆ. ಹೃದಯಾಘಾತ ಸಂಭವಿಸುವ ಸಾಧ್ಯತೆ  ಹೆಚ್ಚಿದೆ ಎಂದು ಅಧ್ಯಯನಗಳು ತಿಳಿಸಿವೆ,


ಕಡಿಮೆ ಸಮಯ ನಿದ್ದೆ ಮಾಡುವುದರಿಂದ ಅನಾರೋಗ್ಯ ಹೇಗೆ ಉಂಟಾಗುತ್ತದೆ ಎಂಬುದು ಇಲ್ಲಿಯವರೆಗೂ ರಹಸ್ಯಾವಾಗಿಯೇ ಉಳಿದಿತ್ತು. ಆದರೆ ವಿಜ್ಞಾನ ತಂತ್ರಜ್ಞಾನ ಮುಂದುವರೆದಂತೆ ಸಂಶೋಧನೆಗಳು ನಿಧಾನವಾಗಿ ಈ ಒಗಟನ್ನು ಬಿಡಿಸುತ್ತಿವೆ.

ನೆನಪುಗಳು ಬಲವರ್ಧನೆಗೊಳ್ಳಲು ಹಾಗೂ ಮತ್ತೆ ಕೆಲವು ನೆನಪುಗಳು ಅಂದರೆ ಗೊಂದಲು ಉಂಟು ಮಾಡುವಂತ ಕೆಲ ನೆನಪುಗಳು ಮೆದುಳಿನಿಂದ ಅಳಿಸಿಹೋಗಲು ನಿದ್ದೆ ಸಹಾಯ ಮಾಡುತ್ತದೆ,

ನಾವು ಎಚ್ಚರವಿರುವ ಸಮಯದಲ್ಲಿ ನಮ್ಮ ಮಿದುಳಿನಲ್ಲಿ ಸಂಗ್ರಹವಾದ ವಿಷಯುಕ್ತ ಪ್ರೊಟಿನ್, ಜೈವಿಕವಾದಂತ ತ್ಯಾಜ್ಯವನ್ನು ಮಿದುಳಿನಿಂದ ಹೊರ ಹಾಕಲು ನಿದ್ದೆ ಸಹಾಯ ಮಾಡುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಈ ವಿಷಯುಕ್ತ ಪ್ರೋಟಿನ್ ಅಂಶ ಮಿದುಳಿನಿಂದ ಹೊರಬರುವುದರಿಂದ ಅಲ್ಜೀಮೀರ್ ನಂತಹ ಖಾಯಿಲೆಗಳಿಂದ ದೂರ ಇರಲು ನೆರವಾಗುತ್ತದೆ.

ಆರೋಗ್ಯವಂತ ದೇಹ ಮತ್ತು ಆರೋಗ್ಯಯುತ ಮನಸ್ಸು ನಿಮ್ಮದಾಗಬೇಕು ಎಂದರೆ ಉತ್ತಮ ನಿದ್ದೆ ಅತ್ಯವಶ್ಯಕ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT