ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ಖಾಲಿ ಹೊಟ್ಟೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ!

ಹೊಟ್ಟೆ ತುಂಬಿದಾಗಲೇ ಪ್ರಮುಖ ನಿರ್ದಾರಗಳನ್ನು ತೆಗೆದುಕೊಳ್ಳುವುದು ಸೂಕ್ತ. ಏಕೆಂದರೆ ಊಟಕ್ಕೂ ಮುಂಚಿತವಾಗಿ ಬಿಡುಗಡೆಯಾಗುವ ಘ್ರೆಲಿನ್ ಎಂಬ ಹಾರ್ಮೋನು ಹಸಿವೆಯನ್ನು ಹೆಚ್ಚಿಸುವುದಷ್ಟೇ

ಲಂಡನ್: ಹೊಟ್ಟೆ ತುಂಬಿದಾಗಲೇ ಪ್ರಮುಖ ನಿರ್ದಾರಗಳನ್ನು ತೆಗೆದುಕೊಳ್ಳುವುದು ಸೂಕ್ತ. ಏಕೆಂದರೆ ಊಟಕ್ಕೂ ಮುಂಚಿತವಾಗಿ ಬಿಡುಗಡೆಯಾಗುವ ಘ್ರೆಲಿನ್ ಎಂಬ ಹಾರ್ಮೋನು ಹಸಿವೆಯನ್ನು ಹೆಚ್ಚಿಸುವುದಷ್ಟೇ ಅಲ್ಲ ನಿರ್ಧಾರ ತೆಗೆದುಕೊಳ್ಳುವುದರ ಮತ್ತು ಉದ್ವೇಗ ನಿಯಂತ್ರಣಕ್ಕೂ ಇದು ಪ್ರಭಾವ ಬೀರುತ್ತದೆ ಎಂದಿದ್ದಾರೆ ಸಂಶೋಧಕರು.

"ಮೊದಲ ಬಾರಿಗೆ, ಊಟಕ್ಕೆ ಮುಂಚಿತವಾಗಿ ಅಥವಾ ಉಪವಾಸ ಇರುವಾಗ ಘ್ರೆಲಿನ್ ಹಾರ್ಮೋನು ಹೆಚ್ಚಾದಂತೆಲ್ಲಾ ಉದ್ವೇಗದಿಂದ ನಡೆದುಕೊಳ್ಳುವುದಕ್ಕೆ ಮತ್ತು ಸರಿಯಾದ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಕುಂದಿಸುವುದಕ್ಕೆ ಕಾರಣವಾಗುತ್ತದೆ ಎಂದು ಸಾಬೀತುಪಡಿಸಿದ್ದೇವೆ" ಎಂದು ಸ್ವೀಡನ್ ನ ಗೋಥೆನ್ ಬರ್ಗ್ ವಿಶ್ವವಿದ್ಯಾಲಯದ ಸಂಶೋಧಕ ರೋಲಿನಾ ಸ್ಕಿಬಿಕಾ ತಿಳಿಸಿದ್ದಾರೆ.

ಹಸಿವಿನ ಸಮಯಲ್ಲಿ ಘ್ರೆಲಿನ್ ಎಂಬ ಹಾರ್ಮೋನು ಹೊಟ್ಟೆಯೊಳಗೆ ವ್ಯುತ್ಪತ್ತಿಯಾಗುತ್ತದೆ. ಇಲಿಗಳ ಮೇಲೆ ನಡೆಸಿರುವ ಈ ಹೊಸ ಅಧ್ಯಯನದಲ್ಲಿ ಈ ಹಾರ್ಮೋನು ಉದ್ವೇಗ ನಿಯಂತ್ರಣ ಮತ್ತು ನಿರ್ಧಾರ ತೆಗೆದುಕೊಳ್ಳುವುದಕ್ಕೆ ಋಣಾತ್ಮಕವಾಗಿ ಸ್ಪಂದಿಸುತ್ತದೆ ಎಂದು ತಿಳಿದುಬಂದಿದೆ.

'ಗೋ' ಎಂಬ ಸನ್ನೆ ಮಾಡಿದಾಗ ಸ್ವಿಚ್ ಅನ್ನು ಒತ್ತುವಂತೆ ಮತ್ತು 'ನೋ-ಗೋ' ಎಂಬ ಸನ್ನೆ ಮಾಡಿದಾಗ ಸ್ವಿಚ್ ಅನ್ನು ಒತ್ತುವುದರಿಂದ ತಡೆಯುವಂತೆ ಇಲಿಗಳಿಗೆ ತರಬೇತಿ ನೀಡಬಹುದಾಗಿದೆ. ಹಾಗೆ ಮಾಡಿದಾಗ ಅವುಗಳಿಗೆ ಸಕ್ಕರೆ ಉಂಡೆ ನೀಡಿ ಪುರಸ್ಕರಿಸಿ ತರಬೇತಿ ನೀಡಲಾಗುತ್ತದೆ. ಶಬ್ದ ಮಾಡಿಯೋ ಅಥವಾ ಬೆಳಕು ನಿಡೀಯೋ ಈ ಸನ್ನೆಗಳನ್ನು ಮಾಡಲಾಗುತ್ತದೆ.

'ನೋ-ಗೋ' ಸನ್ನೆ ಮಾಡಿದಾಗ ಕೂಡ ಸ್ವಿಚ್ ಒತ್ತುವುದು ಇಲಿಗಳಲ್ಲಿ ಉದ್ವೇಗದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ನೇರವಾಗಿ ಇಲಿಗಳ ಮೆದುಳಿಗೆ ಘ್ರೆಲಿನ್ ನೀಡಿ, 'ನೋ-ಗೋ' ಸನ್ನೆ ಮಾಡಿದಾಗ ಕೂಡ ಬಹಳಷ್ಟು ಬಾರಿ ಸ್ವಿಚ್ ಒತ್ತಿರುವುದು ತಿಳಿದುಬಂದಿದೆ. ಇದು ಸಕ್ಕರೆ ಉಂಡೆಯನ್ನು ಕಳೆದುಕೊಂಡ ನಂತರವೂ ಈ ತಪ್ಪನ್ನು ಇಲಿಗಳು ಎಸಗಿವೆ.

ಹೆಚ್ಚೆಚ್ಚು ಘ್ರೆಲಿನ್ ನೀಡಿದಂತೆ, ಪುರಸ್ಕಾರದ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದೆ ಇಲಿಗಳು ಸ್ವಿಚ್ ಒತ್ತಿವೆ ಎಂದಿರುವ ಈ ಅಧ್ಯಯನವನ್ನು ನ್ಯೂರೋಸೈಕೋಫಾರ್ಮಕಾಲಜಿ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT