ಆರೋಗ್ಯ

ಸೂರ್ಯಕಾಂತಿ ಬೀಜಗಳಿಂದ ಲಿವರ್ ಕ್ಯಾನ್ಸರ್ ಅಪಾಯ ಹೆಚ್ಚು: ಸಂಶೋಧನಾ ವರದಿ

ಕೆಲವೊಂದು ಪ್ರಕಾರದ ಜೀವಿಗಳಿಂದ ಕಲುಶಿತಗೊಳ್ಳುವ ಸೂರ್ಯಕಾಂತಿ ಬೀಜ ಪ್ರಬಲ ಲಿವರ್ ಕ್ಯಾನ್ಸರ್ ಆಪಾಯಕ್ಕೆ ಕಾರಣವಾಗಲಿದೆ ಎಂದು ಹೊಸ ಅಧ್ಯಯನ ವರದಿಯೊಂದು ತಿಳಿಸಿದೆ.

ವಾಷಿಂಗ್ ಟನ್: ಕೆಲವೊಂದು ಪ್ರಕಾರದ ಜೀವಿಗಳಿಂದ ಕಲುಶಿತಗೊಳ್ಳುವ ಸೂರ್ಯಕಾಂತಿ ಬೀಜ ಪ್ರಬಲ ಲಿವರ್ ಕ್ಯಾನ್ಸರ್ ಆಪಾಯಕ್ಕೆ ಕಾರಣವಾಗಲಿದೆ ಎಂದು ಹೊಸ ಅಧ್ಯಯನ  ವರದಿಯೊಂದು ತಿಳಿಸಿದೆ. 
ಮಿಚಿಗನ್ ಸ್ಟೇಟ್ ವಿಶ್ವವಿದ್ಯಾನಿಲಯ ಈ ಬಗ್ಗೆ ಸಂಶೋಧನೆ ನಡೆಸಿದ್ದು, ಆಸ್ಪರ್ಜಿಲ್ಲಸ್ ಮೋಲ್ಡ್ ಗಳಿಂದ ಉಂಟಾಗುವ ಎಫ್ಲಾಟಾಕ್ಸಿನ್ ಎಂಬ ಅಂಶದಿಂದ ಸಾಮಾನ್ಯವಾಗಿ ಜೋಳ, ನೆಲಗಡಲೆ, ಪಿಸ್ತಾ ಮತ್ತು ಬಾದಾಮಿಗಳಲ್ಲಿ ಸೋಂಕು ಉಂಟಾಗುತ್ತದೆ. ಅದೇ ಮಾದರಿಯಲ್ಲಿ ಸೂರ್ಯಕಾಂತಿ ಬೀಜ ಹಾಗೂ ಅದರ ಉತ್ಪನ್ನಗಳಲ್ಲಿಯೂ ಸಹ ಸೋಂಕು ಉಂಟಾಗಿ ಆ ಉತ್ಪನ್ನಗಳನ್ನು ಬಳಕೆ ಮಾಡುವುದು ಲಿವರ್ ಕ್ಯಾನ್ಸರ್ ನ್ನು ತಂದೊಡ್ಡುವ ಅಪಾಯ ಹೆಚ್ಚಾಗಿರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 
ತಾಂಜೇನಿಯಾದಲ್ಲಿ 2014-15 ರಲ್ಲಿ ಎಫ್ಲಾಟಾಕ್ಸಿನ್ ಮಟ್ಟಗಳನ್ನು ಪರೀಕ್ಷೆಗೊಳಪಡಿಸಿ ವಿಶ್ಲೇಷಿಸಿರುವ ವಿಜ್ಞಾನಿಗಳಿಗೆ ಶೇ.60 ರಷ್ಟು ಬೀಜ ಹಾಗೂ ಶೇ.80 ರಷ್ಟು ಕೇಕ್ ಮಾದರಿಗಳು ಎಫ್ಲಾಟಾಕ್ಸಿನ್ ನಿಂದ ಕಲುಶಿತಗೊಂಡಿರುವುದು ಕಂಡುಬಂದಿದೆ. ಪ್ರತಿ ಶತಕೋಟಿಗೆ 20 ಭಾಗಗಳಲ್ಲಿ ಶೇ.14 ರಷ್ಟು ಬೀಜಗಳು ಹಾಗೂ 17 ರಷ್ಟು ಕೇಕ್ ಗಳು ಕಲುಶಿತಗೊಂಡಿದ್ದು, ಇನ್ನೂ ಕೆಲವು ಮಾದರಿಗಳಲ್ಲಿ ಶತಕೋಟಿಗೆ ನೂರಾರು ಭಾಗಗಳು ಎಫ್ಲಾಟಾಕ್ಸಿನ್ ನಿಂದ ಕಲುಶಿತಗೊಂಡಿರುವುದು ಪತ್ತೆಯಾಗಿದೆ. 
ತಾಂಜೇನಿಯಾದಲ್ಲಿ ಸಂಶೋಧನೆ, ಅಧ್ಯಯನ ನಡೆಸಲಾಗಿದೆಯಾದರೂ, ಸಮಸ್ಯೆ ಕೇವಲ ತಾಂಜೇನಿಯಾಗೆ ಮಾತ್ರ ಸೀಮಿತವಾಗಿಲ್ಲ. ಎಫ್ಲಾಟಾಕ್ಸಿನ್ ನಿಂದ ವಿಶ್ವಾದ್ಯಂತ ವಾರ್ಷಿಕವಾಗಿ 25,000-155,000 ಸಾವು ಸಂಭವಿಸುತ್ತಿದ್ದು ಲಿವರ್ (ಯಕೃತ್)  ಗೆ ಪ್ರಮುಖ ಕಾರಣವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಬಗೆಗಿನ ಅಧ್ಯಯನ ವರದಿ ಪಿಎಲ್ಒಎಸ್ ಒನ್ ಜರ್ನಲ್ ನಲ್ಲಿ ಪ್ರಕಟವಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT