ಲಂಡನ್: ಹೃದಯಾಘಾತವಾಗುವ ಸಂದರ್ಭ ಚಳಿಗಾಲದಲ್ಲಿ ಅಧಿಕ ಮತ್ತು ಬೇಸಿಗೆ ಕಾಲದಲ್ಲಿ ಕಡಿಮೆಯಾಗಿರುತ್ತದೆ. ಯಾಕೆಂದರೆ ಜೀವ ಹಾನಿಯುಂಟುಮಾಡುವ ರೋಗಗಳ ಮೇಲೆ ವಾತಾವರಣದಲ್ಲಿರುವ ಉಷ್ಣಾಂಶ ಪ್ರಮುಖವಾಗಿ ಕಾರಣವಾಗುತ್ತದೆ ಎಂದು ವಿಶ್ಲೇಷಣೆ ಹೇಳುತ್ತದೆ.
ಹೃದಯಾಘಾತವಾಗುವ ಪ್ರಮಾಣ ಸರಾಸರಿ ಶೀತದ ಉಷ್ಣತೆ ಇರುವ ಸಮಯದಲ್ಲಿ ಹೆಚ್ಚಾಗಿರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ದಿನನಿತ್ಯದ ಉಷ್ಣತೆ ಶೂನ್ಯ ಡಿಗ್ರಿಗಿಂತ ಕಡಿಮೆ ಮಟ್ಟಕ್ಕೆ ಕುಸಿದರೆ ದಿನಕ್ಕೆ ಸರಾಸರಿ ಹೃದಯಾಘಾತಕ್ಕೀಡಾಗುವವರ ಸಂಖ್ಯೆ ನಾಲ್ಕು ಆಗಿರುತ್ತದೆ. ಅಲ್ಲದೆ, ಹೆಚ್ಚಿನ ಗಾಳಿ ಬೀಸುತ್ತಿದ್ದರೆ ಹಗಲು ಹೊತ್ತಿನಲ್ಲಿ ಸೂರ್ಯನ ಬೆಳಕು ಕಡಿಮೆಯಿದ್ದರೆ
ಹೃದಯಾಘಾತಕ್ಕೀಡಾಗುವವರ ಸಂಖ್ಯೆ ಜಾಸ್ತಿಯಾಗಿರುತ್ತದೆ. ಋತುಮಾನಕ್ಕೆ ತಕ್ಕಂತೆ ಹೃದಯಾಘಾತಕ್ಕೀಡಾಗುವವರ ಪ್ರಮಾಣ ಬದಲಾಗುತ್ತಿರುತ್ತದೆ ಎಂದು ಸ್ವೀಡನ್ ನ ಲೂಂಡ್ ವಿಶ್ವವಿದ್ಯಾಲಯದ ಪ್ರಮುಖ ಲೇಖಕ ಮೊಮನ್ ಎ.ಮೊಹಮ್ಮದ್ ತಿಳಿಸುತ್ತಾರೆ.
ಹೊರಗೆ ಶೀತದ ವಾತಾವರಣವಿದ್ದಾಗ ಮಾನವನ ದೇಹದ ರಕ್ತ ನಾಳಗಳು ಕುಗ್ಗುತ್ತವೆ. ಚರ್ಮಕ್ಕೆ ಉಷ್ಣ ವಾಹನವನ್ನು ಕಡಿಮೆ ಮಾಡುತ್ತದೆ. ತರುವಾಯ ಅಪಧಮನಿಯ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇತರ ಪ್ರತಿಕ್ರಿಯೆಗಳು ಹೃದಯ ಬಡಿತವನ್ನು ನಡುಗಿಸುತ್ತದೆ ಮತ್ತು ಹೆಚ್ಚಿಸುತ್ತದೆ, ಇದು ಚಯಾಪಚಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ದೇಹ ತಾಪಮಾನವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಸಂಶೋಧಕರು.
ಇದನ್ನು ಬಾರ್ಸಿಲೊನಾದ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯೊಲಜಿ ಕಾಂಗ್ರೆಸ್ ನಲ್ಲಿ ಪ್ರಸ್ತುತಪಡಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos