ಸಾಂದರ್ಭಿಕ ಚಿತ್ರ 
ಆರೋಗ್ಯ

ಗರ್ಭಿಣಿಯರೇ, ಸೌಂದರ್ಯವರ್ಧಕಗಳಿಂದ ದೂರವಿರಿ!

ಗರ್ಭಿಣಿಯರು ತಮ್ಮ ಮೊದಲ ಮೂರು ತಿಂಗಳ ಕಾಲ ಯಾವುದೇ ರೀತಿಯ ಸೌಂದರ್ಯವರ್ಧಕಗಳನ್ನು ಬಳಸಬಾರದು. ಭ್ರೂಣದ ಮೆದುಳಿನ ಬೆಳವಣಿಗೆಯನ್ನು....

ನವದೆಹಲಿ: ಗರ್ಭಿಣಿಯರು ತಮ್ಮ ಮೊದಲ ಮೂರು ತಿಂಗಳ ಕಾಲ  ಯಾವುದೇ ರೀತಿಯ ಸೌಂದರ್ಯವರ್ಧಕಗಳನ್ನು ಬಳಸಬಾರದು. ಭ್ರೂಣದ ಮೆದುಳಿನ ಬೆಳವಣಿಗೆಯನ್ನು ರಾಸಾಯನಿಕಗಳಿಂದ ಅಪಾಯಕರವಾಗಿರುವ ಕಾರಣ ಯಾವುದೇ ರೀತಿಯ ಸೌಂದರ್ಯವರ್ಧಕಗಳಿಂದ ದೂರವಿರುವುದು ಉತ್ತಮ, ಸೌಂದರ್ಯವರ್ಧಕ ಬಳಕೆ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಈ ಕಾರಣಕ್ಕಾಗಿ ಲಿಪ್ ಸ್ಟಿಕ್, ಲಿಪ್ ಬಾಲ್ ಮತ್ತು ಮೊಡವೆ ನಿರೋಧಕ ಕ್ರೀಂ ಗಳಂತಹಾ  ಮೇಕಪ್ ಉತ್ಪನ್ನಗಳಿಂದ ದೂರವಿರಿ ಎಂದು ತಜ್ಞರು ಹೇಳಿದ್ದಾರೆ..
ನರ್ಚರ್ ಐವಿಎಫ್ ಸೆಂಟರ್ ನ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ  ಅರ್ಚನಾ ಧವನ್ ಬಜಾಜ್ ಮತ್ತು ಆಕಾಶ್ ಹೆಲ್ತ್ ಕೇರ್ ನ ಸ್ತ್ರೀರೋಗತಜ್ಞ ಮತ್ತು ಸಲಹೆಗಾರ, ತರುಣ ದುವಾ ಗರ್ಭಿಣಿಯರು ಬಳಸಬಾರದ ಪದಾರ್ಥಗಳ ಪಟ್ಟಿ ತಯಾರಿಸಿದ್ದಾರೆ.
  • ಲಿಪ್ ಸ್ಟಿಕ್, ಲಿಪ್-ಗ್ಲಾಸ್, ಲಿಪ್ ಬಾಲ್ಸ್, ಐಲೈನರ್ಸ್, ಮಸ್ಕರಾಗಳು, ಡಿಯೋಡ್ರಂಟ್ ಗಳು, ಉಗುರಿನ ಬಣ್ಣ, ಬಾಡಿ ಆಯಿಲ್, ತಾಲ್ಕಂ ಪೌದರ್, ಹೇರ್ ರಿಮೂವಲ್ ಉತ್ಪನ್ನಗಳು, ಹೇರ್ ಡೈ ಗಳು ಗರ್ಭಿಣಿಯರಿಗೆ ಅಪಾಯಕಾರಿಯಾಗಿದೆ.
  • ಮೊಡವೆ ನಿರೋಧಕ ಕ್ರೀಂ ಮತ್ತು ಜೆಲ್ ಗಳು ಎಲ್ಲಕ್ಕಿಂತಲೂ ಹೆಚ್ಚು ಅಪಾಯಕಾರಿಗಳಾಗುತ್ತವೆ.
  • ಟ್ರೈಕ್ಲೋಸನ್ ಮತ್ತು ಟ್ರೈಕ್ಲೊಕಾರ್ಬನ್ ಗಳನ್ನು ವೈಯುಕ್ತಿಕ ಆರೈಕೆಗಾಗಿ ಬಳಸಿಕೊಳ್ಳುತ್ತಾರೆ. ಇದು ಆಂಟಿಮೈಕ್ರೊಬಿಯಲ್ ಏಜೆಂಟ್ ನಂತೆ ಕೆಲಸ ಮಾಡುತ್ತದೆ.
  • ಪ್ಯಾರಾಬೆನ್ಸ್ ಗಳು ಒಂದು ವಿಧದ ಸಂರಕ್ಷಕವಾಗಿದ್ದು, ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಗಟ್ಟಲು ಬಳಸಲಾಗುವ ಸಾಬೂನುಗಳು, ಶ್ಯಾಂಪೂಗಳು ಮತ್ತು ಕಂಡೀಷನರ್ ಗಳಲ್ಲಿ ಇರುತ್ತವೆ. ಆದರೆ ಅವುಗಳಲ್ಲಿ ಹೆಚ್ಚಿನವು ಫಲವತ್ತತೆಗೆ ಮೇಲೆ ದುಷ್ಪರಿನಾಮ ಉಂಟು ಮಾಡುತ್ತವೆ.
  • ಉಗುರಿನ  ಬಣ್ಣದಲ್ಲಿನ ಪದಾರ್ಥಗಳಾದ ಫಾರ್ಮಾಲ್ಡಿಹೈಡ್, ಮತ್ತು  ಇತರ ಸಾವಯವ ಸಂಯುಕ್ತಗಳು ಭ್ರುನದ ಬೆಳವಣಿಗೆಗೆ ಅಡ್ಡಿ ಮಾಡುತ್ತವೆ. 
  • ಉಗುರುಗಳ ಮೇಲೆ ಹೊಳಪು ಕಾಣಿಸಲು ಸಾಮಾನ್ಯವಾಗಿ ಬಳಸುವ ದ್ರಾವಕ ಟೋಲುಯೆನ್, ಇದು ಕೇಂದ್ರ ನರಮಂಡಲದ ಮೇಲೆ ಪ್ರಭಾವ ಬೀರುತ್ತದೆ ಮತ್ತು ಸಂತಾನೋತ್ಪತ್ತಿ ಶಕ್ತಿಯನ್ನು ಕುಂದಿಸುತ್ತದೆ.
  • ಬಹುತೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ರಾಸಾಯನಿಕವೆಂದರೆ ಥಾಲೇಟ್ಗಳು. ಇದು ಹಾರ್ಮೋನ್ ಮಟ್ಟವನ್ನು ಕುಗ್ಗಿಸಿ ಎದೆ ಹಾಲಿನ ಉತ್ಪಾದನೆಗೆ ಧಕ್ಕೆ ತರುತ್ತದೆ.
  • ಆಕ್ಟಿನೊಕ್ಸೇಟ್, ಮತ್ತು ಹೋಮೋಸಾಲೇಟ್ ಗಳು ಅನೇಕ ಸನ್ ಸ್ಕ್ರೀನ್ ಗಳು, , ಲಿಪ್ ಬಾಲ್ ಗಳು ಮತ್ತು ಎಸ್ ಪಿಎಫ್ ನ ಇತರ ಉತ್ಪನ್ನಗಳಲ್ಲಿ ಕಾನಸಿಗುತ್ತದೆ.  ಇವುಗಳು ಎಂಡೋಮೆಟ್ರೋಸಿಸ್ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗಳಿಗೆ ಅಪಾಯವನ್ನು ಉಂಟುಮಾಡುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT