ಆರೋಗ್ಯ

ಖಿನ್ನತೆ ದೂರ ಮಾಡಲು ಔಷಧಗಳಿಗಿಂತ ಸಂಸ್ಕಾರಗಳು ಪರಿಣಾಮಕಾರಿ: ಜೆಎನ್ ಯು ಅಧ್ಯಯನ ವರದಿ

Srinivas Rao BV
ನವದೆಹಲಿ: ಖಿನ್ನತೆಯನ್ನು ದೂರ ಮಾಡಲು ಔಷಧಗಳಿಗಿಂತ ಸಂಸ್ಕಾರಗಳು, ನೈತಿಕ ಮೌಲ್ಯಗಳು ಮೈಗೂಡುವಂತೆ ಮಾಡುವುದು ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದು ಜವಹಾರ್ ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಅಧ್ಯಯನ ವರದಿ ಹೇಳಿದೆ. 
ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರ ಪರಿಸ್ಥಿತಿಯನ್ನು ಔಷಧಗಳು ಹಾಗೂ ಮನೋವೈದ್ಯಶಾಸ್ತ್ರ ಮತ್ತಷ್ಟು ಕುಗ್ಗಿಸುತ್ತಿವೆ. ಆದರೆ ಭಜನೆಗಳನ್ನು, ಸಂಗೀತ, ಕೀರ್ತನೆಗಳನ್ನು ಕೇಳುವುದರಿಂದ ಮಾನಸಿಕ ಸಮಸ್ಯೆ, ಖಿನ್ನತೆ ದೂರವಾಗುತ್ತದೆ ಎಂದು ಜೆಎನ್ ಯು ನಲ್ಲಿರುವ ಸಂಸ್ಕೃತ ಕೇಂದ್ರದ ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ. 
ಜೆಎನ್ ಯು ಸಂಸ್ಕೃತ ಕೇಂದ್ರದಿಂದ ಇದೇ ಮೊದಲ ಬಾರಿಗೆ ಇಂತಹ ಸಂಶೋಧನೆ ನಡೆದಿದೆ ಎಂದು ಜೆಎನ್ ಯು ನಲ್ಲಿರುವ ವೈದಿಕ ಸಾಹಿತ್ಯದ ಪ್ರೊಫೇಸರ್ ಸುಧೀರ್ ಕುಮಾರ್ ಆರ್ಯ ಹೇಳಿದ್ದಾರೆ. ಭಾರತದ ಹಲವು ಪುರಾಣಗಳನ್ನು ಆಧಾರವಾಗಿಟ್ಟುಕೊಂಡು ಸಂಶೋಧನೆ ನಡೆಸಲಾಗಿದ್ದು, ಸಣ್ಣ ವಯಸ್ಸಿನಿಂದಲೇ ನೈತಿಕ ಮೌಲ್ಯಗಳನ್ನು ಕಲಿತವರು ಆತಂಕ, ಒತ್ತಡ, ಖಿನ್ನತೆಗೀಡಾಗುವುದಿಲ್ಲ ಎಂದು ವರದಿ ಹೇಳಿದೆ. 
SCROLL FOR NEXT