ಸಂಗ್ರಹ ಚಿತ್ರ 
ಆರೋಗ್ಯ

ಆಹಾರ ಪದ್ಧತಿ ಬದಲಾದಂತೆ ತೂಕ, ಎತ್ತರ ಕೂಡ ಬದಲಾಗುತ್ತದೆ: ಸಂಶೋಧನೆ

ಮನುಷ್ಯನ ಆರೋಗ್ಯಕ್ಕೆ ಆಹಾರ ಪದ್ಧತಿ ಎಂಬುದು ಅತ್ಯಂತ ಮುಖ್ಯವಾದದ್ದು. ಆಹಾರದ ಪದ್ಧತಿ ಬದಲಾದಂತೆ ವ್ಯಕ್ತಿಯ ತೂಕ ಹಾಗೂ ಎತ್ತರ ಕೂಡ ಬದಲಾಗುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ...

ಲಂಡನ್: ಮನುಷ್ಯನ ಆರೋಗ್ಯಕ್ಕೆ ಆಹಾರ ಪದ್ಧತಿ ಎಂಬುದು ಅತ್ಯಂತ ಮುಖ್ಯವಾದದ್ದು. ಆಹಾರದ ಪದ್ಧತಿ ಬದಲಾದಂತೆ ವ್ಯಕ್ತಿಯ ತೂಕ ಹಾಗೂ ಎತ್ತರ ಕೂಡ ಬದಲಾಗುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. 
ಇನ್ನು ಕೆಲವೇ ವರ್ಷಗಳಲ್ಲಿ ವಿಶ್ವದ ಜನಸಂಖ್ಯೆ 9 ಬಿಲಿಯನ್ ದಾಟಲಿದೆ. ಪ್ರಸ್ತುತ 7.6 ಬಿಲಿಯನ್ ರಷ್ಟು ಜನಸಂಖ್ಯೆಯಿದ್ದು, 2050ನೇ ವರ್ಷದಷ್ಟರಲ್ಲಿ 9 ಬಿಲಿಯನ್ ರಷ್ಟು ಜನಸಂಖ್ಯೆಗೆ ಆಹಾರ ಪೂರೈಕೆ ಮಾಡುವುದು ಅತ್ಯಂತ ಕಠಿಣವಾಗಲಿದೆ ಎಂದು ನಾರ್ವೇಜಿಯನ್ ವಿಶ್ವವಿದ್ಯಾಲಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧಕ ಗಿಬ್ರನ್ ವಿಟಾ ಅವರು ಹೇಳಿದ್ದಾರೆ. 
ಸಂಶೋಧನೆಯಲ್ಲಿ 1975 ಮತ್ತು 2014ರಲ್ಲಿ 186 ದೇಶಗಳಲ್ಲಿ ಬದಲಾಗುತ್ತಿರುವ ಸಂಖ್ಯೆಯನ್ನು ಗಮನಿಸಲಾಗಿದೆ. ಸಂಶೋಧನೆಯನ್ನು ಆಯಾಮಗಳಲ್ಲಿ ಅಧ್ಯಯನ ನಡೆಸಲಾಗಿದೆ. ಸರಾಸರಿಯಷ್ಟು ಜನರು ಹೆಚ್ಚೆಚ್ಚು ಎತ್ತರ ಹಾಗೂ ತೂಕ ಹೆಚ್ಚಾಗುತ್ತಿರುವುದು ಮತ್ತು ವೃದ್ಧಾಪ್ಯಕ್ಕೆ ಜಾರುತ್ತಿರುವುದನ್ನು ಗಮನಿಸಲಾಗಿದೆ ಎಂದು ತಿಳಿಸಿದ್ದಾರೆ. 
2014ರಲ್ಲಿ ವಯಸ್ಕ ಜನರಲ್ಲಿ ಶೇ.14 ರಷ್ಟು ತೂಕ ಹೆಚ್ಚಾಗಿದೆ. ಶೇ.1.3 ರಷ್ಟು ಎತ್ತರ ಹೆಚ್ಚಾಗಿದೆ. 6.2ರಷ್ಟು ಜನರು ವೃದ್ಧಾಪ್ಯಕ್ಕೆ ಜಾರಿದ್ದಾರೆ. 1975ಕ್ಕೆ ಹೋಲಿಕೆ ಮಾಡಿದರೆ, ಪ್ರಸ್ತುತ ಜನರಿಗೆ ಶೇ.6.1ರಷ್ಟು ಹೆಚ್ಚು ಶಕ್ತಿಯ ಅಗತ್ಯವಿದೆ. ಇದೇ ಟ್ರೆಂಡ್ ಸಾಕಷ್ಟು ದೇಶಗಳಲ್ಲಿಯೂ ಮುಂದುವರೆದಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 
1975ರಲ್ಲಿ ಜನರು ದಿನಕ್ಕೆ 2,465 ಕಿಲೋ ಕ್ಯಾಲರಿಗಳಷ್ಟು ಆಹಾರ ಸೇವಿಸುತ್ತಿದ್ದರು. 2014 ರಲ್ಲಿ ಇದು 2,615 ಕಿಲೋ ಕ್ಯಾಲರಿಗೆ ಬಂದು ನಿಂತಿದೆ. ಸೇ.129ರಷ್ಟು ಆಹಾರ ಸೇವನೆ ಹೆಚ್ಚಾಗಿರುವುದು ಇದರಲ್ಲಿ ಕಂಡು ಬಂದಿದೆ. ಈ ಬೆಳವಣಿಗೆಗೆ ಜನಸಂಖ್ಯೆ ಹೆಚ್ಚಾಗುತ್ತಿರುವುದೇ ಕಾರಣ. ಶೇ.15 ರಷ್ಟು ಎತ್ತರ ಹಾಗೂ ತೂಕಗಳು ಹೆಚ್ಚಾಗುತ್ತಿವೆ ಎಂದು ಸಂಶೋಧನಾ ವರದಿ ತಿಳಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT