ಸಾಂದರ್ಭಿಕ ಚಿತ್ರ 
ಆರೋಗ್ಯ

ಹಲಸು: ಏನು ನಿನ್ನ ಆರೋಗ್ಯದ ಸೊಗಸು!

ಹಲಸಿನ ಹಣ್ಣು ಮತ್ತು ಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ, ಬೇಸಿಗೆ ಕಾಲ ಮತ್ತು ಮಳೆಗಾಲ ಆರಂಭದಲ್ಲಿ ಸಿಗುವ ಈ ಪ್ರಾಕೃತಿಕ ಫಲದಿಂದ ಲೆಕ್ಕವಿಲ್ಲದಷ್ಟು ತಿಂಡಿ-ತಿನಿಸುಗಳನ್ನು ಮಾಡಬಹುದು. ಕೇರಳ, ಮಲೆನಾಡು, ಕರವಾಳಿ ಭಾಗಗಳಲ್ಲಂತೂ ಅತಿ ಜನಪ್ರಿಯ. ಇದು ಕೇವಲ ತಿನ್ನಲು ನಾಲಿಗೆಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ ಎಂದು ವೈದ್ಯರೇ ಹೇಳುತ್ತಾರೆ.

ಹಲಸಿನ ಹಣ್ಣು ಮತ್ತು ಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ, ಬೇಸಿಗೆ ಕಾಲ ಮತ್ತು ಮಳೆಗಾಲ ಆರಂಭದಲ್ಲಿ ಸಿಗುವ ಈ ಪ್ರಾಕೃತಿಕ ಫಲದಿಂದ ಲೆಕ್ಕವಿಲ್ಲದಷ್ಟು ತಿಂಡಿ-ತಿನಿಸುಗಳನ್ನು ಮಾಡಬಹುದು. ಕೇರಳ, ಮಲೆನಾಡು, ಕರವಾಳಿ ಭಾಗಗಳಲ್ಲಂತೂ ಅತಿ ಜನಪ್ರಿಯ. ಇದು ಕೇವಲ ತಿನ್ನಲು ನಾಲಿಗೆಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ ಎಂದು ವೈದ್ಯರೇ ಹೇಳುತ್ತಾರೆ.

ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಪ್ರೊಟೀನ್, ವಿಟಮಿನ್ ಎ, ಸಿ ಮತ್ತು ಪೊಟಾಷಿಯಂ ಇದರಲ್ಲಿದ್ದು ಅದರಲ್ಲಿರುವ ಉತ್ಕರ್ಷಣ ನಿರೋಧ ಅಂಶಗಳಿಂದ, ಅಧಿಕ ನಾರಿನಾಂಶ ಇರುವುದರಿಂದ ಡಯಾಬಿಟಿಸ್ ರೋಗಿಗಳಿಗೆ ಉತ್ತಮ ಎನ್ನುತ್ತಾರೆ ವೈದ್ಯರು.

ಅಮೆರಿಕಾದ ಚಿಕಾಗೊದಲ್ಲಿ ನಡೆದ ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ವಾರ್ಷಿಕ ಸಭೆಯಲ್ಲಿ ಹಲಸಿನ ಕಾಯಿ ಮತ್ತು ಹಣ್ಣನ್ನು ನಿಗದಿತ ಪ್ರಮಾಣದಲ್ಲಿ ಸೇವಿಸುವುದರಿಂದ ಟೈಪ್ 2 ಡಯಾಬಿಟಿಸ್ ನವರಿಗೆ ಗ್ಲಿಸಮಿಕ್ ನಿಯಂತ್ರಣವಾಗುತ್ತದೆ ಎಂದು ತಿಳಿದುಬಂದಿದೆ.

ಹಲಸಿನ ಕಾಯಿಯನ್ನು ಅನ್ನದ ಜೊತೆ, ದೋಸೆ, ಇಡ್ಲಿ, ಉಪ್ಮಾಗಳಲ್ಲಿ ಹಿಟ್ಟಿನ ರೂಪದಲ್ಲಿ ಸೇವಿಸುತ್ತಾರೆ. ಈ ಅಧ್ಯಯನವನ್ನು ನಡೆಸಿದವರು ಜೇಮ್ಸ್ ಜೊಸೆಫ್ ಎನ್ನುವವರು. ಅನ್ನ ಮತ್ತು ಗೋಧಿ ಹಿಟ್ಟಿನ ಬದಲಿಗೆ ಹಲಸಿನ ಕಾಯಿಯನ್ನು ಸೇವಿಸಬಹುದು. ಹಲಸಿನ ಕಾಯಿ ತೊಳೆಯನ್ನು ಹಿಟ್ಟಿನ ರೂಪ ಮಾಡಲಾಗುತ್ತದೆ. ಕಾರ್ಬೊಹೈಡ್ರೇಟ್ ಗಳನ್ನು ಕಡಿಮೆ ಮಾಡಬಹುದು.ಕ್ಯಾಲರಿಗಳನ್ನು ಕಡಿಮೆ ಮಾಡಿ ತೂಕ ಇಳಿಸಿಕೊಳ್ಳಲು ಸಹ ನೆರವಾಗುತ್ತದೆ.

ಪೂರ್ವ-ಮಧುಮೇಹ ಅಥವಾ ಮಧುಮೇಹ ರೋಗಿಯು ವೈದ್ಯರ ಚಿಕಿತ್ಸಾಲಯಕ್ಕೆ ಬಂದಾಗ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ವೈದ್ಯಕೀಯ ಪೌಷ್ಠಿಕ ಚಿಕಿತ್ಸೆಯನ್ನು ಅವರಿಗೆ ಸೂಚಿಸಲಾಗುತ್ತದೆ. ಹಲಸು ಸೇವನೆ ಇದಕ್ಕೆ ಸ್ಥಳೀಯ ಪರಿಹಾರವಾಗಿದೆ. ಇದು ನಮ್ಮ ಅಧ್ಯಯನದಲ್ಲಿ ಪ್ರಾಯೋಗಿಕವಾಗಿ ಸಾಬೀತಾಗಿದೆ. ಸ್ಥಳೀಯ ಮಟ್ಟದಲ್ಲಿ ಇದನ್ನು ಪ್ರಚಾರ ಮಾಡಬೇಕಾಗಿದೆ ಎಂದು ಜೇಮ್ಸ್ ಹೇಳುತ್ತಾರೆ.

ಹಲಸಿನಲ್ಲಿರುವ ಹೆಚ್ಚಿನ ಫೈಬರ್ ಅಂಶ ಮತ್ತು ಕಡಿಮೆ ಗ್ಲೈಸೆಮಿಕ್ ಮಧುಮೇಹ ರೋಗಿಗಳಿಗೆ ಮಾತ್ರವಲ್ಲ ಕೊಲೆಸ್ಟ್ರಾಲ್ ಮತ್ತು ಬೊಜ್ಜು ರೋಗಿಗಳಿಗೂ ಸಹ ಉತ್ತಮ ಎಂದು ಕೊಚ್ಚಿಯ ಸಿಲ್ವರ್ ಲೈನ್ ಆಸ್ಪತ್ರೆಯ ಡಾ ಟೊಮ್ ಬಾಬು ಹೇಳುತ್ತಾರೆ.

ಹಲಸಿನ ಕಾಯಿ ಇತ್ತೀಚೆಗೆ ಹೊರದೇಶಗಳಲ್ಲಿ ಜನಪ್ರಿಯವಾಗುತ್ತಿದೆ. ಸೆರ್ಬಿಯಾ ಮೂಲದ ಆಹಾರ ಸಲಹೆಗಾರ ಸಿಮಿ ಮ್ಯಾಥ್ಯು ಹಲಸಿನ ಹಿಟ್ಟಿನಲ್ಲಿರುವ ಆರೋಗ್ಯ ಅಂಶವನ್ನು ಹೇಳುತ್ತಾರೆ. ಹಲವಾರು ವರ್ಷಗಳ ಹಿಂದೆ, ನಾನು ಪ್ರಾದೇಶಿಕ ಚಾನೆಲ್‌ನಲ್ಲಿ ಅಡುಗೆ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದೆ. ಕಾರ್ಯಕ್ರಮದ ಬಾಣಸಿಗರು ಹಲಸಿನ ಪ್ರಯೋಜನಗಳ ಬಗ್ಗೆ ಮಾತನಾಡಿದರು ಮತ್ತು ಹಿಟ್ಟನ್ನು ಬೇಕಿಂಗ್‌ಗೆ ಬಳಸಬಹುದೆಂದು ಪ್ರಸ್ತಾಪಿಸಿದರು. ಆದ್ದರಿಂದ ನನ್ನ ತಾಯಿ ಹಲಸಿನ ಕಾಯಿಯನ್ನು ಒಣಗಿಸಿ ಹಿಟ್ಟು ತಯಾರಿಸುತ್ತಾರೆ. ನಾನು ಈಗ ಅದನ್ನು ಪ್ಯಾನ್‌ಕೇಕ್‌ಗಳು, ಕೇಕ್, ಕುಕೀಗಳಲ್ಲಿ ಮತ್ತು ಪುಟ್ಟು ತಯಾರಿಸಲು ಸಹ ಬಳಸುತ್ತೇನೆ ಎಂದು ಸಿಮಿ ಹೇಳುತ್ತಾರೆ.

ಆದರೆ ಭಾರತದಲ್ಲಿ ಇದನ್ನು ಕಡೆಗಣಿಸುತ್ತಾರೆ ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞೆ ಮತ್ತು ಆಹಾರ ತಂತ್ರಜ್ಞೆ ಜೆಫ್ರಿಯಾ ಜೊಬಿ. ಜೊ ಫಿಟ್ ನೆಸ್ ಸ್ಥಾಪಕರಾಗಿರುವ ಇವರು ಔಷಧಿ ಜೊತೆ ಹೋಲಿಕೆ ಮಾಡಬಹುದಾದ ಹಲಸನ್ನು ಪೌಷ್ಟಿಕಾಂಶವಾಗಿ, ವಿಟಮಿನ್ ಸಿ ಸೇವನೆಗೆ, ದೇಹದಲ್ಲಿ ಶಕ್ತಿ ಬಲವರ್ಧನೆಗೆ, ಕ್ಯಾನ್ಸರ್ ಗುಣಕಾರಿಯಾಗಿಯೂ ಬಳಸಬಹುದು. ಇದರ ಬಳಕೆ ಸರಿಯಾಗಿ ಆಗುತ್ತಿಲ್ಲ ಎನ್ನುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್; Video

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಕೆಲಸದಿಂದ 6 ಪ್ರಾಧ್ಯಾಪಕರ ವಜಾ

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; 'ಆ' ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT