ಸಂಗ್ರಹ ಚಿತ್ರ 
ಆರೋಗ್ಯ

ರೋಗ ನಿರೋಧಕ ಶಕ್ತಿ ಹೆಚ್ಚಿಸಲಿದೆ ಆಯುಷ್ ನೀಡುತ್ತಿರುವ ಈ ಉಚಿತ ಕಷಾಯ!

ದೇಶಕ್ಕೆ ಕೊರೋನಾ ಎಂಬ ಮಹಾಮಾರಿ ವಕ್ಕಲಿಸಿದ್ದು, ಈ ವರೆಗೂ ಈ ಹೆಮ್ಮಾರಿಗೆ ಯಾವುದೇ ಲಸಿಕೆಗಳು ಲಭ್ಯವಾಗಿಲ್ಲ. ಆದರೆ, ಇದನ್ನು ನಿಯಂತ್ರಿಸಲು ಸಾಮಾಜಿಕ ಅಂತರ ಪ್ರಮುಖವಾಗಿದೆ. ಅಲ್ಲದೆ, ರೋಗವನ್ನು ಎದುರಿಸಲು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಅಗತ್ಯವೂ ಇದೆ. 

ಬೆಂಗಳೂರು: ದೇಶಕ್ಕೆ ಕೊರೋನಾ ಎಂಬ ಮಹಾಮಾರಿ ವಕ್ಕಲಿಸಿದ್ದು, ಈ ವರೆಗೂ ಈ ಹೆಮ್ಮಾರಿಗೆ ಯಾವುದೇ ಲಸಿಕೆಗಳು ಲಭ್ಯವಾಗಿಲ್ಲ. ಆದರೆ, ಇದನ್ನು ನಿಯಂತ್ರಿಸಲು ಸಾಮಾಜಿಕ ಅಂತರ ಪ್ರಮುಖವಾಗಿದೆ. ಅಲ್ಲದೆ, ರೋಗವನ್ನು ಎದುರಿಸಲು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಅಗತ್ಯವೂ ಇದೆ. 

ಈ ನಡುವೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ರಾಜ್ಯ ಆಯುಷ್ ಇಲಾಖೆ, ಕಷಾಯವನ್ನು ಉಚಿತವಾಗಿ ಪ್ರತೀಯೊಬ್ಬರಿಗೂ ನೀಡಲು ಆರಂಭಿಸಿದೆ. 

ಕೇಂದ್ರ ಮಾರ್ಗಸೂಚಿ ಅನುಸಾರ ಈ ಕಷಾಯವನ್ನು ಸಿದ್ಧಪಡಿಸಲಾಗಿದ್ದು, ಉಚಿತವಾಗಿ ನೀಡಲಾಗುತ್ತದೆ. ಕ್ವಾರಂಟಾನ್ ನಲ್ಲಿರುವವರಿಗೆ ಹಾಗೂ ಕಂಟೈನ್ಮೆಂಟ್ ಝೋನ್ ನಲ್ಲಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ರಾಜ್ಯದ ಆಯುಷ್ ಇಲಾಖೆ ನಿರ್ದೇಶಕಿ ಮೀನಾಕ್ಷಿ ನೇಗಿಯವರು ಹೇಳಿದ್ದಾರೆ. 

ಜೋಶಾಂದ ಎಂಬ ಹೆಸರಿನ ಈ ಕಷಾಯವನ್ನು ಉಚಿತವಾಗಿ ನೀಡಲಾಗುತ್ತಿದೆ. ಕಷಾಯದ ಜೊತೆಗೆ ಇಲಾಖೆ ಅಕ್ರ್ ಎ ಅಜೀಬ್ ಎಂಬ ಪದಾರ್ಥವನ್ನೂ ಸಿದ್ಧಪಡಿಸಿದ್ದು, ಈ ದ್ರಾವಣವನ್ನು ಟಿಶ್ಯೂ ಪೇಪರ್ ಅಥವಾ ಕರವಸ್ತ್ರದ ಮೇಲೆ ಹಾಕಿಕೊಂಡು ಸುವಾಸನೆ ತೆಗೆದುಕೊಳ್ಳಬೇಕು. ಅಲ್ಲದೆ, ಈ ದ್ರಾವಣವನ್ನು ಬಿಸಿನೀರಿಗೆ ಹಾಕಿ ಅದರ ಹಭೆಯನ್ನು ತೆಗೆದುಕೊಂಡರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. 

ಇನ್ನು ಕಷಾಯವನ್ನು ಸಿದ್ಧಪಡಿಸುವ ವಿಧಾನವೆಂದರೆ...
ನಾಲ್ಕು ಭಾಗದಷ್ಟು ಒಣಗಿದ ತುಳಸಿ ಎಲೆ, 2 ಭಾಗ ದಾಲ್ಚಿನ್ನಿ (ಚಕ್ಕೆ), 2 ಭಾಗದಷ್ಟು ಒಣಗಿದ ಶುಂಠಿ ಹಾಗೂ 1 ಭಾಗದಷ್ಟು ಕಾಳುಮೆಣಸು ತೆಗೆದುಕೊಂಡು ಪುಡಿ ಮಾಡಿ ಗಾಜಿನ ಬಾಟಲಿಯಲ್ಲಿ ಶೇಖರಿಸಿಟ್ಟುಕೊಳ್ಳಬೇಕು. 

1/4 ಚಮಚದಷ್ಟು ಈ ಕಷಾಯದ ಪುಡಿಯನ್ನು 150 ಮಿಲಿ ನೀರಿನಲ್ಲಿ 5 ರಿಂದ 10 ನಿಮಿ| ಕುದಿಸಿ ಸೋಸಿ ದಿನಕ್ಕೆ 1 ಬಾರಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಗತ್ಯ ಎನಿಸಿದರೆ, ಇದರ ಜೊತೆಗೆ ಬೆಲ್ಲ, ನಿಂಬೆರಸ ಅಥವಾ ಒಣದ್ರಾಕ್ಷಿ ಬೆರೆಸಿಕೊಳ್ಳಬಹುದಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT