ಸಾಂದರ್ಭಿಕ ಚಿತ್ರ 
ಆರೋಗ್ಯ

ಕೋವಿಡ್-19ನಿಂದ ಗುಣಮುಖರಾದ ರೋಗಿಗಳಲ್ಲಿ ಬೊಜ್ಜುತನ! ಕಾರಣ, ವೈದ್ಯರ ಸಲಹೆಗಳು ಇಲ್ಲಿದೆ

ಕೋವಿಡ್-19 ನಿಂದ ಗುಣಮುಖರಾದ ರೋಗಿಗಳಲ್ಲಿ ಬೊಜ್ಜುತನ ಕಂಡುಬರುತ್ತಿರುವುದನ್ನು ವೈದ್ಯರು ಗಮನಿಸಿದ್ದಾರೆ. ಇಲ್ಲಿಯವರೆಗೆ ಅನೇಕರು ಹೃದಯದ ತೊಂದರೆಗಳು, ದೀರ್ಘಕಾಲದ ಉಸಿರಾಟದ ಕಾಯಿಲೆಗಳು, ಆಯಾಸ ಇತ್ಯಾದಿ ಸಮಸ್ಯೆಗಳನ್ನು ಗುಣಮುಖರಾದ ನಂತರ ಎದುರಿಸುತ್ತಿದ್ದಾರೆ.

ಬೆಂಗಳೂರು: ಕೋವಿಡ್-19 ನಿಂದ ಗುಣಮುಖರಾದ ರೋಗಿಗಳಲ್ಲಿ ಬೊಜ್ಜುತನ ಕಂಡುಬರುತ್ತಿರುವುದನ್ನು ವೈದ್ಯರು ಗಮನಿಸಿದ್ದಾರೆ. ಇಲ್ಲಿಯವರೆಗೆ ಅನೇಕರು ಹೃದಯದ ತೊಂದರೆಗಳು, ದೀರ್ಘಕಾಲದ ಉಸಿರಾಟದ ಕಾಯಿಲೆಗಳು, ಆಯಾಸ ಇತ್ಯಾದಿ ಸಮಸ್ಯೆಗಳನ್ನು ಗುಣಮುಖರಾದ ನಂತರ ಎದುರಿಸುತ್ತಿದ್ದಾರೆ.

ಕೋವಿಡ್-19 ನಿಂದ ಚೇತರಿಸಿಕೊಂಡ ನಂತರ ಅನೇಕ ರೋಗಿಗಳು ಹೆಚ್ಚು ಆಹಾರವನ್ನು ತಿನ್ನುತ್ತಾರೆ. ಮುಖ್ಯವಾಗಿ ಜಂಕ್ ಪುಡ್ ನಂತಹ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರೆ. ಅಲ್ಲದೇ, ಕಡಿಮೆ ಅಥವಾ ಯಾವುದೇ ದೈಹಿಕ ಚಟುವಟಿಕೆಯಿಲ್ಲದೆ ಸುಮಾರು 10 ಕೆಜಿ ತೂಕ ದಪ್ಪಾಗುತ್ತಾರೆ. ಮತ್ತೆ ತೂಕ ಇಳಿಸಿಕೊಳ್ಳಲು ಪೌಷ್ಟಿಕತಜ್ಞರು ಅಥವಾ ಆಹಾರ ತಜ್ಞರ ಸಹಾಯವನ್ನು ಪಡೆಯುತ್ತಿದ್ದಾರೆ ಎಂದು ಡಾಕ್ಟರ್ ಗಳು ಹೇಳುತ್ತಿದ್ದಾರೆ.

ಕೋವಿಡ್- ನಿಂದ ಗುಣಮುಖರಾಗಿ ಬೊಜ್ಜುತನ ಬಂದಿರುವಂತಹ ಎರಡು ಪ್ರಕರಣಗಳನ್ನು ಪ್ರತಿದಿನ ನೋಡುತ್ತಿರುವುದಾಗಿ ಅಸ್ಟರ್ ಸಿಎಂಐ ಆಸ್ಪತ್ರೆಯ ಹಿರಿಯ ಸಮಾಲೋಚಕ ವೈದ್ಯ ಡಾ.ಮಹೇಶ್ ಚಿಕ್ಕಚನ್ನಪ್ಪ ಹೇಳುತ್ತಾರೆ.

ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಮಾಡಿಕೊಳ್ಳುವ ಸಲುವಾಗಿ ಎಣ್ಣೆ- ಕೊಬ್ಬು ಮಿಶ್ರಿತ ಆಹಾರವನ್ನು ಹೆಚ್ಚಾಗಿ ತಿಂದು ದಪ್ಪಾಗುತ್ತಿದ್ದಾರೆ. ಒಂದು ತಿಂಗಳಲ್ಲಿ 8 ರಿಂದ 10 ಕೆಜಿಯಷ್ಟು ದಪ್ಪಾಗುತ್ತಿದ್ದಾರೆ.ಅವರು ಆರೋಗ್ಯಯುಕ್ತ ಆಹಾರ ಪದಾರ್ಥ ಮತ್ತು ಒಳಾಂಗಣ ವ್ಯಾಯಾಮ ಚಟುವಟಿಕೆಗಳನ್ನು ಆರಂಭಿಸುವಂತೆ ಅವರು ಸಲಹೆ ನೀಡಿದ್ದಾರೆ.

ಕೋವಿಡ್-19 ನಿಂದ ಗುಣಮುಖರಾದ ಬಳಿಕವೂ 14 ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕು ಎಂದು ಶೇಷಾದ್ರಿಪುರಂ ಅಪೊಲೋ ಆಸ್ಪತ್ರೆ ಹಿರಿಯ ಫಿಜಿಶಿಯನ್ ಡಾ. ದಿನೇಶ್ ವಿ. ಕಾಮತ್ ತಿಳಿಸಿದ್ದಾರೆ.

ತೂಕ ಹೆಚ್ಚಾದವರಲ್ಲಿ ಮದುಮೇಹ, ಕೊಬ್ಬಿನಾಂಶ ಹೆಚ್ಚಾಗುತ್ತಿರುವುದನ್ನು ನೋಡುತ್ತಿರುವುದಾಗಿ ಅವರು ಹೇಳಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಇನ್ನೂ ಆರು ತಿಂಗಳ ಕಾಲ ಗಂಭೀರವಾದ ವೈದ್ಯಕೀಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಪೂರಕ ಆಹಾರ ಪದಾರ್ಥಗಳ ಸೇವನೆ ಉತ್ತಮವೆಂದು ಕೊಲಂಬಿಯಾ ಏಷ್ಯಾ ರೆಫೆರಲ್ ಆಸ್ಪತ್ರೆಯ ಮುಖ್ಯ ಆಹಾರ ತಜ್ಞೆ ಪವಿತ್ರಾ ಎನ್ ರಾಜು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT