ಹೊರನಾಡು ಕನ್ನಡಿಗ

ಕರ್ನಾಟಕದ ಹೊರಗಿದ್ದವರಿಗೆ ಕನ್ನಡದ ಅಸ್ಮಿತೆ ಹೆಚ್ಚು

ಮುಂಬಯಿ: ಮುಂಬಯಿ ಕನ್ನಡಿಗರಿಗೆ ಮಹಾರಾಷ್ಟ್ರ 'ಭೂಗೋಳ'ವಾದರೆ ಕರ್ನಾಟಕ 'ಚರಿತ್ರೆ'. ಕರ್ನಾಟಕದ ಹೊರಗಿದ್ದವರಿಗೆ ಕನ್ನಡದ ಅಸ್ಮಿತೆ ಜಾಸ್ತಿ. ಇದು ದೇಹದ ಒಳಗಿನ ಆತ್ಮ ಇದ್ದಂತೆ. ಆಕಾರ ಇಲ್ಲದಿದ್ದರೂ ಇದಕ್ಕೆ ಶಕ್ತಿ ಇದೆ. ನಮಗೆ ಭೂಗೋಳ ಪ್ರಜ್ಞೆಗಿಂತ ಚರಿತ್ರೆ ಪ್ರಜ್ಞೆ ಮುಖ್ಯವಾಗಬೇಕು ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು. ಇತ್ತೀಚೆ ಮುಂಬಯಿ ಕರ್ನಾಟಕ ಸಂಘದ 80ರ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು, ಈ ಕಟ್ಟಡದ ಒಳಗೆ ಕನ್ನಡ ಸಂವೇದನೆಯನ್ನು ಇಷ್ಟು ಕಾಲ ಉಳಿಸಿಕೊಂಡು ಚರಿತ್ರೆ ಪ್ರಜ್ಞೆಗೆ ಆದ್ಯತೆ ನೀಡಿದ್ದೀರಿ. ಸಮಾಜದಲ್ಲಿಯ ತಾಯ್ತನ ಸಂವೇದನೆ ಕಣ್ಮರೆಯಾಗುತ್ತ ಇದೆ. ಈ ತಾಯ್ತನವು ಸಾಂಸ್ಕೃತಿಕ ಸಂವೇದನೆಯಿಂದ ಬರುತ್ತದೆ. ಇಂತಹ ಸಂವೇದನೆಯನ್ನು ಕರ್ನಾಟಕ ಸಂಘ ಮುಂಬಯಿ ಬೆಳೆಸುತ್ತಿರುವುದು ಅಭಿಮಾನ ಪಡುವ ಸಂಗತಿ ಎಂದು ಅವರು ಹೇಳಿದರು.
ಗೌರವ ಅತಿಥಿ ಬಂಟರ ಸಂಘದ ಅಧ್ಯಕ್ಷ (ಮುಂಬಯಿ) ಸಿ.ಎ.ಶಂಕರ ಶೆಟ್ಟಿ ಸಂಘದ ಕಾರ್ಯವನ್ನು ಶ್ಲಾಘಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರಕಾಶ್ ಜಿ. ಬುರ್ಡೆ ವಹಿಸಿದ್ದರು. ಗೌ.ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಶ್ರೀನಿವಾಸ ಜೋಕಟ್ಟೆ ಪರಿಚಯಿಸಿದರು. ಡಾ.ಭರತ್ ಕುಮಾರ್ ಪೊಲಿಪು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT