ಮದುವೆ 
ರಾಜ್ಯ

ಅಪ್ರಾಪ್ತೆ ಎಂದು ಮದುವೆ ನಿಲ್ಲಿಸ ಹೋಗಿ ಬೇಸ್ತು ಬಿದ್ದ ಸಂಘಟನೆ ಕಾರ್ಯಕರ್ತರು

ಪೋಷಕರು ಅಪ್ರಾಪ್ತಾ ಬಾಲಕಿಗೆ ಮದುವೆ ಮಾಡುತ್ತಿದ್ದಾರೆ ಎಂಬ ಶಂಕೆ ಮೇರೆಗೆ ಮದುವೆ ನಿಲ್ಲಿಸಿದ ಸಂಘಟನೆಯ ಕಾರ್ಯಕರ್ತರು ನಂತರ ಮುರ್ಖರಾದ ಘಟನೆ ನಡೆದಿದೆ.

ತುಮಕೂರು: ಪೋಷಕರು ಅಪ್ರಾಪ್ತಾ ಬಾಲಕಿಗೆ ಮದುವೆ ಮಾಡುತ್ತಿದ್ದಾರೆ ಎಂಬ ಶಂಕೆ ಮೇರೆಗೆ ಮದುವೆ ನಿಲ್ಲಿಸಿದ ಸಂಘಟನೆಯ ಕಾರ್ಯಕರ್ತರು ನಂತರ ಮುರ್ಖರಾದ ಘಟನೆ ನಡೆದಿದೆ.

ಮದುವೆ ಮಂಟಪಕ್ಕೆ ನುಗ್ಗಿ ಮದುವೆ ನಿಲ್ಲಿಸಿದ ಕಾರ್ಯಕರ್ತರು ವಧುವನ್ನು ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಹುಡುಗಿ ಮದುವೆ ವಯಸ್ಸಿಗೆ ಬಂದಿದ್ದಾಳೆಂದು ತಿಳಿದು ಪೇಚಿಗೆ ಸಿಲುಕಿದರು. ಮದುವೆ ನಿಲ್ಲಿಸಿ ತಮ್ಮ ತಪ್ಪು ತಿಳಿದ ಕಾರ್ಯಕರ್ತರು ಈ ಸಂಬಂಧ ದೂರು ನೀಡದಂತೆ ವಧುವಿನ ಪೋಷಕರಿಗೆ ಬೇಡಿಕೊಂಡರಲ್ಲದೆ ಮತ್ತೆ ಮದುವೆ ಮಂಟಪಕ್ಕೆ ಬಂದು ವರನ ಮನವೊಲಿಸಿ ಮದುವೆ ಮಾಡಿಸಿದ್ದಾರೆ.

ಕುಣಿಗಲ್ ತಾಲೂಕಿನ ಎಡೆಯೂರು ಸಿದ್ದಲಿಂಗೇಶ್ವರ ದೇವಾಲಯದ ಬಳಿ ಬಾಲಕಿಯೊಬ್ಬಳಿಗೆ ವಿವಾಹ ಮಾಡಲಾಗುತ್ತಿದೆ ಎಂದು ನೆಲಮಂಗಲದ ಕರ್ನಾಟಕ ಜನಸೈನ್ಯ ಸಂಘಟನೆ ಪದಾಧಿಕಾರಿಗಳು ಶನಿವಾರ ಮಹಿಳಾ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಅನ್ವಯ ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿ ವಧುವಿನ ಬಗ್ಗೆ ಮಾಹಿತಿ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಭಾನುವಾರ ಬೆಳಗ್ಗೆ ಪೊಲೀಸರ ಜತೆ ಸಂಘಟನೆ ಪದಾಧಿಕಾರಿಗಳು ಕಲ್ಯಾಣ ಮಂಟಪಕ್ಕೆ ಹೋಗಿ ಮದುಮಗಳೊಬ್ಬಳನ್ನೇ ಅಮೃತೂರು ಠಾಣೆಗೆ ಕರೆತಂದಿದ್ದಾರೆ.   
ನೆಲಮಂಗಲ ತಾಲೂಕಿನ ಎಂಟಗಾನಹಳ್ಳಿಯ ಲಕ್ಷ್ಮೀಗೆ 22 ವರ್ಷವಾಗಿದ್ದು, ತಂದೆ ಮುನಿವೆಂಕಟಪ್ಪ ಮತ್ತು ತಾಯಿ ಗಂಗಮ್ಮ ಮೃತರಾಗಿದ್ದಾರೆ. ಚಿಕ್ಕಪ್ಪ ವೆಂಕಟೇಶ್ ಮತ್ತು ಸಂಬಂಧಿಕರು ಬೆಂಗಳೂರಿನ ಮುತ್ತುರಾಜು ಎಂಬಾತನ ಜತೆ ಮದುವೆ ಮಾಡುತ್ತಿದ್ದರು. ಆದರೆ, ಸತ್ಯ ಸಂಗತಿ ತಿಳಿಯದೆ  ಸಂಘಟನೆ ಪದಾಧಿಕಾರಿಗಳು ಅವಾಂತರ ಸೃಷ್ಟಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT