ಮರ್ಯಾದಾ ಹತ್ಯೆ 
ರಾಜ್ಯ

ಮೋನಿಕಾಳದ್ದು ಮರ್ಯಾದಾ ಹತ್ಯೆ: ಮರ್ಯಾದೆಗೆ ಅಂಜಿ ಮಗಳನ್ನೇ ಕೊಂದ ತಂದೆ ಬಂಧನ

ಕಾಣೆಯಾಗಿದ್ದ ತಿಮ್ಮನಹೊಸೂರಿನ ಮೋನಿಕಾಳ ಸಾವಿನ ಪ್ರಕರಣ ರಹಸ್ಯ ಬಯಲಾಗಿದೆ...

ಮಂಡ್ಯ: ಕಾಣೆಯಾಗಿದ್ದ ತಿಮ್ಮನಹೊಸೂರಿನ ಮೋನಿಕಾಳ ಸಾವಿನ ಪ್ರಕರಣ ರಹಸ್ಯ ಬಯಲಾಗಿದೆ.

ಪ್ರೀತಿಸಿದವನ ಜತೆ ಹೋದ ಮೋನಿಕಾಳನ್ನು ಮರ್ಯಾದೆಗೆ ಅಂಜಿ ತಂದೆ ಮೋಹನ್ ಬಾವಮೈದುನರಾದ ಸುರೇಶ್ ಹಾಗೂ ರಾಮಕೃಷ್ಣ ಸೇರಿ ಹತ್ಯೆ ಮಾಡಿ ಸಾಕ್ಷ್ಯ ನಾಶ ಮಾಡುವ ಸಲುವಾಗಿ ಆಕೆಯ ಶವ ಸುಟ್ಟು ಹಾಕಿದ್ದಾರೆ ಈ ಸಂಬಂಧ ತಂದೆ ಮೋಹನ್, ಸುರೇಶ್ ರನ್ನು ಬಂಧಿಸಿದ್ದು, ರಾಮಕೃಷ್ಣ ತಲೆಮರೆಸಿಕೊಂಡಿರುವುದಾಗಿ ಎಸ್ ಪಿ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.

ಅನ್ಯ ಜಾತಿಯ ಯುವಕ ನರೇಂದ್ರ ಬಾಬು ಎಂಬಾತನನ್ನು ಮೋನಿಕಾ ಪ್ರೀತಿಸುತ್ತಿದ್ದಳು. ಈ ಬಗ್ಗೆ ಹಲವು ಬಾರಿ ಮೋನಿಕಾಳಿಗೆ ಕುಟುಂಬದವರು ತಿಳಿ ಹೇಳಿದ್ದರು. ಆದರೂ ಆಕೆ ನರೇಂದ್ರ ಬಾಬು ಜತೆಗಿನ ಪ್ರೀತಿ ಮುಂದುವರಿಸಿದ್ದರಿಂದ ಊರಿನಲ್ಲಿ ಮರ್ಯಾದೆ ಉಳಿಸಿಕೊಳ್ಳಲು ಮಗಳ ಹತ್ಯೆ ನಡೆಸಿರುವುದಾಗಿ ತಂದೆಯೇ ತಪ್ಪೋಪ್ಪಿಕೊಂಡಿದ್ದಾರೆ.

ಮಾರ್ಚ್ 28ರಂದು 19 ವರ್ಷದ ಮೋನಿಕಾ ಕಾಣೆಯಾಗಿದ್ದಳು. ಮಾರ್ಚ್ 31ರಂದು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿ ನರೇಂದ್ರ ಬಾಬು ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಮೋನಿಕಾ ಏ.1ರಂದು ತಂದೆ ಹಾಗೂ ಸೋದರ ಮಾವನ ಜತೆ ಠಾಣೆಗೆ ತೆರಳಿ, ತಾನು ಕೆಮಿಸ್ಟ್ರಿ ಮರುಪರೀಕ್ಷೆಗೆ ಸಿದ್ಧಗೊಳ್ಳಲು ಬೆಂಗಳೂರಿನಲ್ಲಿರುವ ಮಾವ ಗೋಪಾಲಕೃಷ್ಣ ಅವರ ಮನೆಗೆ ಹೋಗಿದ್ದಾಗಿ ಪೊಲೀಸರಿಗೆ ಹೇಳಿಕೆ ನೀಡಿ, ಮನೆಗೆ ಮರಳಿದ್ದಳು.

ಏ.3ರ ಮಧ್ಯರಾತ್ರಿ ಆಕೆ ಮತ್ತೆ ತನ್ನ ಪ್ರಿಯಕರನ ಜತೆ ಹೋಗಲು ಯತ್ನಿಸಿದ್ದನ್ನು ಗಮನಿಸಿದ ತಂದೆ, ತಾಯಿ, ಸೋದರ ಮಾವಂದಿರು ಅರ್ಧ ಗಂಟೆ ಕಾಲ ಮನವೊಲಿಸಲು ಯತ್ನಿಸಿ ವಿಫಲರಾದ ಬಳಿಕ, ನಿನಗೆ ಏನೇ ಕಷ್ಟಬಂದರೂ ನಮ್ಮ ಸಹಾಯ ಸಿಗದು. ಸತ್ತರೂ ನಾವು ಜವಾಬ್ದಾರರಲ್ಲ ಎಂದು ಬರೆದುಕೊಡುವಂತೆ ಪತ್ರ ಬರೆಸಿಕೊಂಡಿದ್ದಾರೆ.

ಆಕೆ ಪತ್ರ ಬರೆದುಕೊಟ್ಟ ನಂತರ ಮತ್ತೆ ಬುದ್ಧಿವಾದ ಹೇಳಲು ಯತ್ನಿಸಿ, ಆಕೆ ಒಪ್ಪದಿದ್ದಾಗ ಹಲ್ಲೆ ಮಾಡಿ ಕುತ್ತಿಗೆಯ ಮೇಲೆ ಕಾಲಿಟ್ಟು ಹತ್ಯೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಮನೆಯ ಮುಂದಿನ ಗಸಗಸೆ ಮರಕ್ಕೆ ನೇಣು ಹಾಕಿ, ತಮ್ಮ ಮಗಳು ಪಿಯು ಪರೀಕ್ಷೆ ಸರಿಯಾಗಿ ಬರೆದಿಲ್ಲ ಎಂದು ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಗೋಳಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT