ಸಾಂದರ್ಭಿಕ ಚಿತ್ರ 
ರಾಜ್ಯ

ಕಾರಿನಲ್ಲೇ ಕೀ ಮರೆತ ಅಜ್ಜ, ಎರಡು ತಾಸು ಕಾರಿನಲ್ಲೇ ಸಿಕ್ಕಿ ಮಗು ಪರದಾಟ

ಗರದ ಕ್ಯಾಂಪ್ ಪ್ರದೇಶದ ಬಸ್ ನಿಲ್ದಾಣ ಬಳಿ ನಿಲ್ಲಿಸಿದ್ದ ಕಾರಿನ ಸೆಂಟ್ರಲ್ ಲಾಕ್ ಆಕಸ್ಮಿಕವಾಗಿ ಬಿದ್ದ ಪರಿಣಾಮ, ಅದರಲ್ಲಿದ್ದ ಎರಡೂವರೆ ವರ್ಷದ ಮಗು ಸುಮಾರು 2 ...

ರಾಯಚೂರು: ನಗರದ ಕ್ಯಾಂಪ್ ಪ್ರದೇಶದ ಬಸ್ ನಿಲ್ದಾಣ ಬಳಿ ನಿಲ್ಲಿಸಿದ್ದ ಕಾರಿನ ಸೆಂಟ್ರಲ್ ಲಾಕ್ ಆಕಸ್ಮಿಕವಾಗಿ ಬಿದ್ದ ಪರಿಣಾಮ, ಅದರಲ್ಲಿದ್ದ ಎರಡೂವರೆ ವರ್ಷದ ಮಗು ಸುಮಾರು 2 ತಾಸುಗಳವರೆಗೆ ಹೊರಬರಲಾಗದೆ ಪರದಾಡಿತು.

ಹಟ್ಟಿಚಿನ್ನದಗಣಿ ಗ್ರಾಮದ ಸಿದ್ಧಾರೂಢಮಠ ಬಳಿಯ ನಿವಾಸಿ, ಎಲೆಕ್ಟ್ರಾನಿಕ್ಸ್ ಅಂಗಡಿಯ ಮಾಲೀಕ ವಿಜನ್ ಅವರ ಮೊಮ್ಮಗ ಸೋನು ಕಾರಿನಲ್ಲಿ ಸಿಲುಕಿಕೊಂಡಿದ್ದ ಬಾಲಕ. ಮನೆಯಿಂದ ಕಾರಿನಲ್ಲಿ ತಮ್ಮ ಮೊಮ್ಮಗನೊಂದಿಗೆ ಬಂದಿದ್ದ ಅಜ್ಜ, ಬಾಲಕನನ್ನು ಕಾರಿನಲ್ಲಿ ಕೂರಿಸಿ, ಜನರಲ್ ಸ್ಟೋರ್‌ನಲ್ಲಿ ಸಾಮಾನು ಖರೀದಿಸಲು ತೆರಳಿದ್ದರು. ಅವಸರದಲ್ಲಿ ಕೀಲಿಯನ್ನು ಕಾರಿನಲ್ಲೇ ಮರೆತಿದ್ದರು. ಈ ಸಂದರ್ಭದಲ್ಲಿ ಕಾರಿನ ಸೆಂಟ್ರಲ್ ಲಾಕ್ ಆಕಸ್ಮಿಕವಾಗಿ ಬಿದ್ದಿದೆ. ಸ್ಟೋರ್‌ನಿಂದ ಮರಳಿಬಂದು, ಲಾಕ್ ತೆಗೆಯಲು ವಿಜನ್ ಅವರು ಹರಸಾಹಸ ಮಾಡಿದರು. ಸುತ್ತಲಿನ ಜನರೂ ಆತಂಕಗೊಂಡರು.

ಕೆಲವರು ಕಾರಿನ ಬಾಗಿಲು ಮುರಿದು, ಮಗುವನ್ನು ಹೊರಗೆ ತರಲು ಮಾಡಿದ ಯತ್ನವೂ ಕೈಗೂಡಲಿಲ್ಲ. ಈ ವೇಳೆ ಮನೆಯಲ್ಲಿ ಮತ್ತೊಂದು ಕೀಲಿ ಇರುವುದು ವಿಜನ್ ಅವರಿಗೆ ನೆನಪಾಯಿತು. ಮನೆಗೆ ಹೋಗಿ ಅವರು ಕೀಲಿ ತರುವಷ್ಟರ ಹೊತ್ತಿಗೆ ಎರಡು ತಾಸು ಕಳೆದಿತ್ತು. ಮತ್ತೊಂದು ಕೀಲಿಯಿಂದ ಕಾರಿನ ಬಾಗಿಲು ತೆರೆದು, ಮಗುವನ್ನು ಹೊರಗೆ ತರಲಾಯಿತು. ಕಾರಿನಲ್ಲಿ ಎಸಿ ಚಾಲೂ ಇದ್ದುದರಿಂದ ಮಗುವಿನ ಉಸಿರಾಟಕ್ಕೆ ಯಾವುದೇ ತೊಂದರೆಯಾಗಿರಲಿಲ್ಲ.

ಕಾರಿನಲ್ಲಿದ್ದ ಮಗು ಗಾಬರಿಯಿಂದ ಚೀರಾಡಿತ್ತು. ಅಳುತ್ತಲೇ 2 ತಾಸು ಕಾರಿನಲ್ಲಿ ಕಳೆದಿತ್ತು. ಹೊರಗೆ ಬಂದಾಗ ತೀವ್ರ ಬಳಲಿದಂತೆ ಕಂಡು ಬಂತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT