ಎಸ್ಐ ಕೃಷ್ಣಮೂರ್ತಿ 
ರಾಜ್ಯ

ನಿಯಮ ಉಲ್ಲಂಘನೆ: 100 ರು. ದಂಡ ವಿಧಿಸಿದ ಪೊಲೀಸರಿಗೆ ಸೈನಿಕರಿಂದ ಹಲ್ಲೆ

ಸಂಚಾರ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ 100 ರುಪಾಯಿ ದಂಡ ವಿಧಿಸಿದ ಸಂಚಾರಿ ಪೊಲೀಸರಿಗೆ ಸೈನಿಕರು ಹಲ್ಲೆ ಮಾಡಿರುವ ಘಟನೆ ನಡೆದಿದೆ...

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ 100 ರುಪಾಯಿ ದಂಡ ವಿಧಿಸಿದ ಸಂಚಾರಿ ಪೊಲೀಸರಿಗೆ ಸೈನಿಕರು ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಶಿವಾಜಿನಗರ ಎಸ್ಐ ಕೃಷ್ಣಮೂರ್ತಿ ಪೇದಗಳಾದ ಸುಧೀಂದ್ರ ಹಾಗೂ ವೆಂಕಟೇಶ್ ಮೂವರು ಕಬ್ಬನ್ ರಸ್ತೆಯಲ್ಲಿ ಸಂಚಾರ ನಿಯಂತ್ರಣ ಮಾಡುತ್ತಿದ್ದರು. ಈ ವೇಳೆ ಕಾಮರಾಜ ರಸ್ತೆಯಲ್ಲಿನ ಸೇನಾ ತರಬೇತಿ ಕೇಂದ್ರದ ಕ್ಯಾಪ್ಟನ್ ಚಂದ್ರು, ಯೋಧ ಕೆಬಿ ಸಿಂಗ್ ಸಂಜೆ 5.30ರ ಸುಮಾರಿನಲ್ಲಿ ಬೈಕ್ ನಲ್ಲಿ ಕಾಮರಾಜ ರಸ್ತೆಗೆ ತೆರಳುತ್ತಿದ್ದರು.

ಒನ್ ವೇಯಲ್ಲಿ ಬೈಕ್ ಚಲಾಯಿಸುತ್ತಿದ್ದ ಯೋಧನನ್ನು ಸಂಚಾರಿ ಪೊಲೀಸ್ ಸಿಬ್ಬಂದಿಗಳು ತಡೆದು 100 ರುಪಾಯಿ ದಂಡ ಕಟ್ಟಲು ಸೂಚಿಸಿದ್ದಾರೆ. ದಂಡದ ಕಟ್ಟಲು ಒಪ್ಪದ ಯೋಧ ಹಾಗೂ ಪೊಲೀಸರ ನಡುವೆ ಜಗಳ ನಡೆದಿದೆ. ಬಳಿಕ ದಂಡ ಪಾವತಿಸಿ ತೆರಳಿದ ಯೋಧರು ಬಳಿಕ 20 ಸಿಬ್ಬಂದಿ ಜತೆ ಜಂಕ್ಷನ್ ಗೆ ಬಂದು ಕರ್ತವ್ಯ ನಿರತ ಎಸ್ಐ ಮತ್ತು ಇಬ್ಬರು ಪೇದೆಗಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಪೊಲೀಸರು ಹಾಗೂ ಯೋಧರ ನಡುವಿನ ಜಗಳದಿಂದಾಗಿ ಕಾಮರಾಜ ರಸ್ತೆ ಜಂಕ್ಷನ್ ನಲ್ಲಿ 1 ಗಂಟೆ ಕಾಲ ಆಂತಕದ ವಾತಾವರಣ ನಿರ್ಮಾಣವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

SCROLL FOR NEXT