ರಾಜ್ಯ

ಬಿಎಸ್ ವೈಗೆ ಲೋಕಾಯುಕ್ತ ಕೋರ್ಟ್ ನಿಂದ ಸಮನ್ಸ್

Mainashree
ಬೆಂಗಳೂರು: ಭಾರತೀಯ ಜನತಾ ಪಕ್ಷದ(ಬಿಜಿಪಿ) ನೂತನ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ, ಶಾಸಕ ಬಿ ವೈ ರಾಘವೇಂದ್ರ ಅವರಿಗೆ ಲೋಕಾಯುಕ್ತ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. 
ಲೋಕಾಯುಕ್ತ ಜಿಲ್ಲಾ ನ್ಯಾಯಾಲಯ ಭದ್ರಾವತಿ ತಾಲ್ಲೂಕು ಹುಣಸೇಕಟ್ಟೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಘವೇಂದ್ರ ಸೇರಿದಂತೆ ಏಳು ಜನರಿಗೆ ಸಮನ್ಸ್ ಜಾರಿಗೊಳಿಸಿದೆ. 
ವಕೀಲ ಬಿ ವಿನೋದ್ ಎಂಬುವವರು ಭದ್ರಾವತಿಯಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆಂದು ಯಡಿಯೂರಪ್ಪ, ರಾಘವೇಂದ್ರ ಸೇರಿದಂತೆ ಏಳು ಜನರ ವಿರುದ್ದ ದೂರು ದಾಖಲಿಸಿದ್ದರು.
SCROLL FOR NEXT