ಸಂಗ್ರಹ ಚಿತ್ರ 
ರಾಜ್ಯ

ನೀರನ್ನರಸಿ ನಾಡಿನತ್ತ ಕಾಡಾನೆಗಳು

ಪ್ರತಿ ವರ್ಷ ಬೇಸಿಗೆ ವೇಳೆ ಕಾಡಾನೆಗಳು ವಲಸೆ ಹೋಗುವುದು ಸಹಜ. ಆದರೆ, ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬರ...

ಸೋಮವಾರಪೇಟೆ: ಪ್ರತಿ ವರ್ಷ ಬೇಸಿಗೆ ವೇಳೆ ಕಾಡಾನೆಗಳು ವಲಸೆ ಹೋಗುವುದು ಸಹಜ. ಆದರೆ, ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬರ ಆವರಿಸಿರುವುದರಿಂದ ಬಹುತೇಕ ಆನೆಗಳು ನಾಡಿನತ್ತೆ ವಲಸೆ ಬರುತ್ತಿವೆ. 
ಕಾಡಿನಲ್ಲಿ ಹಳ್ಳ-ಕೊಳ್ಳ, ನದಿ, ಕೆರೆಗಳಲ್ಲಿ ನೀರು ಬತ್ತಿಹೋಗಿದ್ದು, ದಾಹ ತೀರಿಸುವ ಸಲುವಾಗಿ ಕಾಡು ಪ್ರಾಣಿಗಳು ಕೂಡ ನೀರನ್ನು ಹುಡುಕಿಕೊಂಡು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. 
ಕೊಡುಗು ಜಿಲ್ಲೆಯಲ್ಲಿ ಫೆಬ್ರವರಿ-ಮಾರ್ಚ್ ನಲ್ಲಿ ಮಳೆಯಾಗುತ್ತಿತ್ತು. ಆದರೆ, ಈ ಬಾರಿ ಬೇಸಿಗೆ ಹೆಚ್ಚಾಗಿದ್ದು, ಮಳೆ ಇನ್ನು ಆಗಿಲ್ಲ. ಈ ಹಿನ್ನಲ್ಲೆಯಲ್ಲಿ ಆನೆಗಳು ಜನ ವಸತಿ ಪ್ರದೇಶಗಳಿಗೆ ಬರುತ್ತಿರುವುದಲ್ಲದೇ, ಬೆಳೆಗಳನ್ನು ನಾಶಪಡಿಸುತ್ತಿವೆ. 
ಬಾನವಾರ, ಕಟ್ಟೆಪುರ ಮತ್ತು ಹೆಬ್ಬಾಳೆ ಜನರು ಆನೆಗಳ ದಾಳಿಗಳಿಂದ ಕಂಗಾಲಾಗಿದ್ದಾರೆ. ಈ ಜಿಲ್ಲೆಯ ಅರಣ್ಯದಲ್ಲಿ 100-120ರಷ್ಟು ಆನೆಗಳಿದ್ದು, ದುಬಾರೆ ಮೀಸಲು ಅರಣ್ಯದಲ್ಲಿ 40ರಿಂದ 50 ಆನೆಗಳಿವೆ. ಇವು ಕಾವೇರಿ ನದಿ ತೀರದಲ್ಲಿ ಬೀಡೂರಿವೆ. 
ಯಡವನಾಡು ಅರಣ್ಯ ಕಾಡಾನೆ ಅವಾಸಸ್ಥಾನವಾಗಿದೆ. ಬೇಸಿಗೆ ಕಾಲದಲ್ಲಿ ಆನೆಗಳಿಗೆ ಸುಮಾರು 150ರಿಂದ 200 ಲೀಟರ್ ನೀರು ಬೇಕು. ಆದರೆ, ಕೆರಗಳು ಬತ್ತಿ ಹೋಗಿವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. 
ಅರಣ್ಯದ ಸುತ್ತಾ ಮುತ್ತಾ ಜನರು ವಸತಿಗಳಿವೆ. ಈ ಹಿನ್ನಲೆಯಲ್ಲಿ ನೀರನ್ನರಸಿ ಬರುವ ಆನೆಗಳು ವಸತಿಗಳ ಮೇಲೆ ದಾಳಿ ಮಾಡುವುದಲ್ಲದೇ, ಬೆಳೆ ಹಾನಿ ಮಾಡುತ್ತಿವೆ. ಕಾಡಾನೆ ಕಾಟು ಎದುರಿಸಲು 20 ಕೋಟಿ ಹಣ ಬಿಡುಗಡೆ ಮಾಡುವ ಸಂಬಂಧ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 
ಕಳೆದ ವರ್ಷ ಅರಣ್ಯ ಇಲಾಖೆ ಕಾಡಾನೆಗಳಿಗಾಗಿ 4.5 ಟನ್ ಮೇವು ಬೀಜಗಳನ್ನು ಬಿತ್ತಿತ್ತು. 634 ಹೆಕ್ಟೆರ್ ಗಳಲ್ಲಿ ಬಿದಿರು ಹಾಕಿತ್ತು. ಈ ವರ್ಷ ಕಾಡಾನೆಗಳಿಗೆ 15 ಟನ್ ಮೇವು ಬೀಜ ಬೇಕಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಭಾರತ ಹೆಚ್ಚಿನ ಸುಂಕ ವಿಧಿಸಬೇಕು: ಕೇಜ್ರಿವಾಲ್

SCROLL FOR NEXT