ಅಂದು ಸುಂದರ ಉದ್ಯಾನವನ, ಇಂದು ಕಸ ಹಾಕುವ ಡಂಪಿಂಗ್ ಯಾರ್ಡ್! 
ರಾಜ್ಯ

ಅಂದು ಸುಂದರ ಉದ್ಯಾನವನ, ಇಂದು ಕಸ ಹಾಕುವ ಡಂಪಿಂಗ್ ಯಾರ್ಡ್!

ಉದ್ಯಾನ ನಗರಿ ಎಂದೇ ಬೀಗುತ್ತಿದ್ದ ನಗರ ನಂತರ ಮಾಲಿನ್ಯ ನಗರ ಎಂಬ ಪಟ್ಟ ಪಡೆದು ಬೇಸರದಲ್ಲಿರುವ ಬೆನ್ನಲ್ಲೇ ಇದಕ್ಕೆ ಉದಾಹರಣೆಯೆಂಬಂತೆ ನಗರದ ಸುಂದರ ಉದ್ಯಾನವನವೊಂದು...

ಬೆಂಗಳೂರು: ಉದ್ಯಾನ ನಗರಿ ಎಂದೇ ಬೀಗುತ್ತಿದ್ದ ನಗರ ನಂತರ ಮಾಲಿನ್ಯ ನಗರ ಎಂಬ ಪಟ್ಟ ಪಡೆದು ಬೇಸರದಲ್ಲಿರುವ ಬೆನ್ನಲ್ಲೇ ಇದಕ್ಕೆ ಉದಾಹರಣೆಯೆಂಬಂತೆ ನಗರದ ಸುಂದರ ಉದ್ಯಾನವನವೊಂದು ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಯಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಂದು ಸಮಯದಲ್ಲಿ ಸುಂದರ ಉದ್ಯಾನವನ ಎಂದೆನಿಸಿಕೊಂಡಿದ್ದ ಸ್ಯಾಂಕಿ ಟ್ಯಾಂಕ್ ಪಾರ್ಕ್ ಇಂದು ಮಾಲಿನ್ಯದಿಂದ ತನ್ನ ಸೌಂದರ್ಯವನ್ನು ಕಳೆದುಕೊಂಡಿದೆ.

ನಗರ ಸ್ಯಾಂಕಿ ಟ್ಯಾಂಕ್ ಪಾರ್ಕ್ ಮಕ್ಕಳು ಆಟವಾಡುವ ಸುಂದರ ಉದ್ಯಾನವನವಾಗಿತ್ತು. ಇದೀಗ ಉದ್ಯಾನದಲ್ಲಿ ಸೃಷ್ಟಿಯಾಗಿರುವ ಮಾಲಿನ್ಯದಿಂದ ಮಕ್ಕಳ ಆಟಿಕೆ ವಸ್ತುಗಳು ಕಣ್ಣೀರಿಡುವ ಪರಿಸ್ಥಿತಿ ಎದುರಾಗಿದೆ.

ಉದ್ಯಾನವನದ ಈ ಪರಿಸ್ಥಿತಿ ಕುರಿತಂತೆ ಬಿಬಿಎಂಪಿ ಅಧಿಕಾರಿಗಳನ್ನು ಕೇಳಿದರೆ, ಇದು ನಮ್ಮ ಜವಾಬ್ದಾರಿಯಲ್ಲ. ಉದ್ಯಾನವನದ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿದ್ದು, ಖಾಸಗಿ ಸಂಸ್ಥೆ ಇದನ್ನು ಮಾಡಬೇಕಿದೆ ಎಂದು ಹೇಳಿಕೊಂಡಿದ್ದಾರೆ.

ಉದ್ಯಾನದಲ್ಲಿರುವ ಗೋಡೆಗಳು ಮಕ್ಕಳ ಆಟಕ್ಕೆ ತೊಂದರೆಯಾಗುತ್ತಿದೆ. ಇನ್ನು ಉದ್ಯಾನವನದಲ್ಲಿ ಸ್ವಚ್ಛತೆಯನ್ನೂ ಯಾರೂ ನೋಡಿಕೊಳ್ಳುತ್ತಿಲ್ಲ. ಓಡಾಡಲು ಸೂಕ್ತ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿಲ್ಲ. ಓಡಾಡಲು ಬಹಳ ಕಷ್ಟವಾಗುತ್ತಿದೆ ಎಂದು ಸ್ಥಳೀಯ ಮಂಜುನಾಥ್ ಅವರು ಹೇಳಿಕೊಂಡಿದ್ದಾರೆ.

ಅಧಿಕಾರಿಗಳು ಉದ್ಯಾನವನದಲ್ಲೇ ಒಣಗಿದ ಎಲೆಗಳನ್ನು ಹಾಗೂ ಕಸಕ್ಕೆ ಬೆಂಕಿ ಹಚ್ಚುತ್ತಾರೆ. ಇದು ಸಾಕಷ್ಟು ತೊಂದರೆಯನ್ನುಂಟು ಮಾಡುತ್ತಿದೆ. ಇನ್ನು ಉದ್ಯಾನವನದಲ್ಲಿರುವ ಈಜುಕೊಳ ಜನರನ್ನು ಆಕರ್ಷಿಸುತ್ತದೆ. ಆದರೆ, ಈಜುಕೊಳಕ್ಕೆ ಬರುವವರು ತಮ್ಮ ವಾಹನಗಳನ್ನು ಉದ್ಯಾನವನದಲ್ಲೇ ನಿಲ್ಲಿಸಿ ಹೋಗುತ್ತಾರೆ. ಇದು ಉದ್ಯಾನವನಕ್ಕೆ ಓಡಾಡಲು ಬರುವವರಿಗೆ ಸಮಸ್ಯೆಯೊಡ್ಡಿದೆ ಎಂದು ಮತ್ತೊಬ್ಬ ಸ್ಥಳೀಯ ಸುಫಿಯಾನ್ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಈಜು ಕೊಳದ ಮುಖ್ಯ ತರಬೇತುದಾರ ಹಾಗೂ ಜಂಟಿ ಕಾರ್ಯದರ್ಶಿ ಅಶೋಕ್ ಕುಮಾರ್ ಅವರು, ಉದ್ಯಾನವನವನ್ನು ಸ್ವಚ್ಛವಾಗಿಡುವುದು ಬಿಬಿಎಂಪಿ ಕೆಲಸ. ಸಾಕಷ್ಟು ಜನರು ನಮ್ಮ ಕೇಂದ್ರಕ್ಕೆ ಬಂದು ಸಮಸ್ಯೆ ಹೇಳುತ್ತಾರೆ. ಆದರೆ, ಉದ್ಯಾನವನ್ನು ನಿರ್ವಹಣೆ ಮಾಡುವುದು ನಮ್ಮ ಕೆಲಸವಲ್ಲ ಎಂದು ಹೇಳಿದ್ದಾರೆ.

ಪೂರ್ವ ವಲಯ ತೋಟಗಾರಿಕಾ ವ್ಯವಸ್ಥಾಪಕ ಶಿವಪ್ರಸಾದ್ ರೆಡ್ಡಿ ಮಾತನಾಡಿ, ಪಾರ್ಕ್ ನ ನಿರ್ವಹಣೆಯನ್ನು ಬಿಬಿಎಂಪಿ ನಮ್ಮ ಬೆಂಗಳೂರು ನನ್ನ ಕೊಡುಗೆ ಯೋಜನೆಯಡಿಯಲ್ಲಿ ಟೋಟಲ್ ಎನ್ವಿರಾನ್ಮೆಂಟ್ ಎಂಬ ಖಾಸಗಿ ಸಂಸ್ಥೆಗೆ ನೀಡಿದೆ. ಹೀಗಾಗಿ ಪಾರ್ಕ್ ನ ನಿರ್ವಹಣೆ ಜವಾಬ್ದಾರಿ ಖಾಸಗಿ ಸಂಸ್ಥೆಯದ್ದೇ ಆಗಿದೆ. ಇನ್ನು ಪ್ರಕರಣವನ್ನು ನಮ್ಮ ಗಮನಕ್ಕೆ ತಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟೋಟಲ್ ಎನ್ವಿರಾನ್ಮೆಂಟ್ ಕಡೆಯಿಂದ ಪ್ರತಿಕ್ರಿಯೆ ಪಡೆಯಲು ಯತ್ನ ನಡೆಸಲಾಗಿದೆಯಾದರೂ, ಯಾರೊಬ್ಬರೂ ಈ ವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT