ಯದುವೀರ್ ಒಡೆಯರ್ - ರಾಜಕುಮಾರಿ ತ್ರಿಷಿಕಾ 
ರಾಜ್ಯ

ಸರಳ ವಿವಾಹಕ್ಕೆ ಯದುವೀರ್ ಒಡೆಯರ ಒಲವು: ನಿರ್ಧಾರ ರಾಜಮಾತೆಗೆ ಬಿಟ್ಟದ್ದು

ಸರಳ ವಿವಾಹವಾಗುವುದು ನನಗಿಷ್ಟ, ಅದಕ್ಕೆ ನಾನು ಆದ್ಯತೆ ನೀಡುತ್ತೇನೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ...

ಮೈಸೂರು: ಸರಳ ವಿವಾಹವಾಗುವುದು ನನಗಿಷ್ಟ, ಅದಕ್ಕೆ ನಾನು ಆದ್ಯತೆ ನೀಡುತ್ತೇನೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ರಾಜ್ಯದ ಜನತೆ ಹಲವು ದಿನಗಳಿಂದ ಕುತೂಹಲದಿಂದ ನಿರೀಕ್ಷಿಸುತ್ತಿರುವ ಮೈಸೂರು ರಾಜ ಮನೆತನದ ಅರಸ ಯದುವೀರ್ ಚಾಮರಾಜ ಒಡೆಯರ್ ಅವರ ವಿವಾಹ ಮಹೋತ್ಸವ ಜೂನ್ 27 ಮತ್ತು 28 ಕ್ಕೆ ನಿಗದಿಯಾಗಿದೆ. 
ತಮ್ಮ ವಿವಾಹ ಸಮಾರಂಭದ ಕುರಿತು ಮಾತನಾಡಿರುವ ಯದುವೀರ ಒಡೆಯರ್ ಅವರು, ಸರಳ ವಿವಾಹಕ್ಕೆ ನಾನು ಆದ್ಯತೆ ನೀಡುತ್ತೇನೆ. ಆದರೆ ವಿವಾಹ ಹೇಗೆ ನಡೆಯಬೇಕು ಎಂಬುದನ್ನು ತಾಯಿ ಪ್ರಮೋದಾದೇವಿ ಒಡೆಯರ್ ಮತ್ತು ಧರ್ಮಾಧಿಕಾರಿಗಳು ನಿರ್ಧರಿಸುತ್ತಾರೆ ಎಂದ ಅವರು, ಆರತಕ್ಷತೆ ಮತ್ತು ವಿವಾಹ ಮೈಸೂರಿನಲ್ಲೇ ನಡೆಯಲಿದೆ ಎಂದು ತಿಳಿಸಿದ್ದಾರೆ. 
ಇನ್ನು ರಾಜಸ್ತಾನದ ದುಂಗಾರ್ಪುರ ರಾಜಮನೆತನದ ರಾಜಕುಮಾರಿ ತ್ರಿಷಿಕಾ ಮತ್ತು ಯದುವೀರ್ ವಿವಾಹಕ್ಕೆ ಮೈಸೂರಿನ ಅಂಬಾ ವಿಲಾಸ ಅರಮನೆ ಸಕಲ ರೀತಿಯಲ್ಲೂ ಸಿದ್ಧಗೊಳ್ಳುತ್ತಿದೆ.
ಸಂಪ್ರದಾಯಬದ್ಧ ವಿವಾಹಕ್ಕೆ ಮೈಸೂರು ಅರಮನೆ ಸಾಕ್ಷಿಯಾಗಲಿದೆ. ಈ ಅದ್ಧೂರಿ ವಿವಾಹಕ್ಕೆ ರಾಜ ಮನೆತನದ ಸದಸ್ಯರು ಮತ್ತು ಗಣ್ಯರು ಹಾಗೂ ಅತೀ ಗಣ್ಯರು ಪಾಲ್ಗೋಳ್ಳಲಿದ್ದಾರೆ.
ಇನ್ನೂ ಅರಮನೆಯ ಒಳಭಾಗದಲ್ಲಿರುವ ಗಣೇಶ ದೇವಾಲಯದಲ್ಲಿ ಚಾಮುಂಡೇಶ್ವರಿ ದೇವಿಯ ಪೂಜಾ ಕೈಂಕರ್ಯ ನಡೆಸಲಾಗುತ್ತದೆ. ಅರಮನೆ ಪೂಜಾರಿಗಳೇ ವಿವಾಹದ ಎಲ್ಲಾ ವಿಧಿವಿಧಾನಗಳನ್ನ ನೇರವೇರಿಸಲಿದ್ದಾರೆ. ತ್ರಿಷಿಕಾ ಪೋಷಕರು ಕೂಡ ಈ ಪೂಜೆಯಲ್ಲಿ ಭಾಗವಹಿಸಲಿದ್ದಾರೆ.  40 ವರ್ಷಗಳ ನಂತರ ಅರಮನೆಯಲ್ಲಿ ನಡೆಯುತ್ತಿರುವ ವಿವಾಹ ಇದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT