ಮೊಬೈಲ್ 
ರಾಜ್ಯ

ಸ್ಮಾರ್ಟ್ ಫೋನ್ ಆಸೆಗಾಗಿ ಫ್ಲಿಪ್‌ಕಾರ್ಟ್ ಡೆಲಿವೆರಿ ಬಾಯ್ ಕೊಂದ ಆರೋಪಿ ಸೆರೆ

ಸ್ಮಾರ್ಟ್ ಫೋನ್ ಆಸೆಗಾಗಿ ಯುವಕನೊಬ್ಬ ಫ್ಲಿಪ್‌ಕಾರ್ಟ್ ಸಂಸ್ಥೆಯಲ್ಲಿ ಡೆಲಿವೆರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ನಂಜುಂಡಸ್ವಾಮಿ ಅನ್ನುವರನ್ನು ಕೊಲೆ ಮಾಡಿ...

ಬೆಂಗಳೂರು: ಸ್ಮಾರ್ಟ್ ಫೋನ್ ಆಸೆಗಾಗಿ ಯುವಕನೊಬ್ಬ ಫ್ಲಿಪ್‌ಕಾರ್ಟ್ ಸಂಸ್ಥೆಯಲ್ಲಿ ಡೆಲಿವೆರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ನಂಜುಂಡಸ್ವಾಮಿ ಅನ್ನುವರನ್ನು ಕೊಲೆ ಮಾಡಿ ಇದೀಗ ಜೈಲು ಕಂಬಿ ಎಣಿಸುತ್ತಿದ್ದಾರೆ. 
ವಿಜಯನಗರ ಅಲಹಬಾದ್ ಬ್ಯಾಂಕ್ ಕಟ್ಟಡದಲ್ಲಿರುವ ಆಕ್ಷಿ ಜಿಮ್ ನ ಉಸ್ತುವಾರಿ ಕೆಲಸ ಮಾಡಿಕೊಂಡಿದ್ದ ಮೂಡಲಪಾಳ್ಯದ ವರುಣ್ ಕುಮಾರ್(22) ಕಳೆದ ಡಿಸೆಂಬರ್ 9ರಂದು ನಂಜುಂಡಸ್ವಾಮಿಯನ್ನು ಕೊಲೆ ಮಾಡಿ ಆತನ ಬಳಿಯಿದ್ದ ಮೊಬೈಲ್ ಮತ್ತು 10 ಸಾವಿರ ನಗದು ದೋಚಿ ಪರಾರಿಯಾಗಿದ್ದ. 
ವರುಣ್ ಕುಮಾರ್ ಪ್ಲಿಪ್ ಕಾರ್ಟ್ ನಲ್ಲಿ ರೆಡ್ ಮಿ ಮೊಬೈಲ್ ಬುಕ್ ಮಾಡಿದ್ದು ಅದನ್ನು ಡೆಲಿವೆರಿ ನೀಡಲು ಬಂದಿದ್ದಾಗ ನಂಜುಂಡಸ್ವಾಮಿಯನ್ನು ಉಸಿರು ಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ.
ಪ್ರಕರಣದ ತನಿಖೆ ಕೈಗೊಂಡಿದ್ದ ವಿಜಯನಗರ ಪೊಲೀಸರು ಆರೋಪಿ ವರುಣ್ ಕುಮಾರ್ ನನ್ನ ಬಂಧಿಸಿ ಆತನ ಬಳಿಯಿದ್ದ 10 ಸಾವಿರ ನಗದು ರೆಡ್ ಮೀ ಮೊಬೈಲ್ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಡಿಸಿಪಿ ಎಂಎನ್ ಅನುಚೇತ್ ತಿಳಿಸಿದ್ದರೆ. 
ಡಿಸೆಂಬರ್ 9ರ ರಾತ್ರಿ ನಂಜುಂಡಸ್ವಾಮಿ ಮನೆಗೆ ಬಾರದ ಹಿನ್ನೆಲೆ ಡಿ.10ರಂದು ಬ್ಯಾಟರಾಯನಪುರ ಠಾಣೆಗೆ ನಂಜುಂಡಸ್ವಾಮಿ ಪತ್ನಿ ದೂರು ನೀಡಿದ್ದರು. ಈ ದೂರಿನನ್ವಯ ಪೊಲೀಸರು ಡಿಸೆಂಬರ್ 11 ರಂದು ಸರಸ್ವತಿನಗರದ ಜಿಮ್ ಗೆ ತೆರಳಿದ್ದು ಅಂದು ರಜೆ ಇದ್ದಿದ್ದರಿಂದ ಜಿಮ್ ಮುಚ್ಚಲಾಗಿತ್ತು. ಈ ವೇಳೆ ಕಟ್ಟಡವನ್ನು ಪರಿಶೀಲನೆ ನಡೆಸುವಾಗ ಸೆಲ್ಲಾರ್ ನಲ್ಲಿ ನಂಜುಂಡಸ್ವಾಮಿ ಮೃತದೇಹ ಪತ್ತೆಯಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT