ಶ್ವಾನ 
ರಾಜ್ಯ

ಬೆಂಗಳೂರು: ಮನೆ ಶೋಧಕ್ಕೆ ಬಂದ ಐಟಿ ಅಧಿಕಾರಿಗಳ ಮೇಲೆ ನಾಯಿ ಛೂ ಬಿಟ್ಟ ವೃದ್ಧೆ

ಕಾಳಧನಿಕರ ವಿರುದ್ಧ ಸಮರ ಸಾರಿರುವ ಆದಾಯ ತೆರಿಗೆ ಅಧಿಕಾರಿಗಳಿಗೆ ಹೊಸದೊಂದು ಸವಾಲು ಎದುರಾಗಿತ್ತು...

ಬೆಂಗಳೂರು: ಕಾಳಧನಿಕರ ವಿರುದ್ಧ ಸಮರ ಸಾರಿರುವ ಆದಾಯ ತೆರಿಗೆ ಅಧಿಕಾರಿಗಳಿಗೆ ಹೊಸದೊಂದು ಸವಾಲು ಎದುರಾಗಿತ್ತು.
ಭ್ರಷ್ಟರು ತಮ್ಮ ಹಣವನ್ನು ಪತ್ತೆಯಾಗದಂತೆ ಮುಚ್ಚಿಸುವುದು ಸಾಮಾನ್ಯ ಆದರೆ ಇಲ್ಲೊಬ್ಬ ಮಹಿಳೆ ಕಪ್ಪುಹಣಕ್ಕೆ ನಾಯಿಗಳನ್ನು ಕಾವಲಿಟ್ಟಿರುವುದನ್ನು ಕಂಡ ಆದಾಯ ತೆರಿಗೆ ಅಧಿಕಾರಿಗಳು ಕಂಗಾಲಾಗಿದ್ದರು. ಅಂತೂ ಇಂತೂ ಪೊಲೀಸರು ಹಾಗೂ ಸ್ಥಳೀಯರ ಸಹಾಯದೊಂದಿಗೆ ಮನೆಯನ್ನು ಜಪ್ತಿ ಮಾಡಿ ಕೋಟ್ಯಾಂತರ ಮೊತ್ತವನ್ನು ಹಣವನ್ನು ವಶಪಡಿಸಿಕೊಂಡಿದ್ದಾರೆ. 
ಬೆಂಗಳೂರಿನ ಯಶವಂತಪುರದ ತುಮಕೂರು ಮುಖ್ಯರಸ್ತೆಯಲ್ಲಿರುವ ಆರ್ಎನ್ಎಸ್ ಶಾಂತಿನಿವಾಸ ಅಪಾರ್ಟ್ ಮೆಂಟ್ ಮೇಲೆ ಡಿ.13ರಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ 2.89 ಕೋಟಿ ರುಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ 2.25 ಕೋಟಿ ರುಪಾಯಿ 2000 ಮುಖಬೆಲೆಯ ನೋಟುಗಳಾಗಿವೆ. 
ಅಪಾರ್ಟ್ ಮೆಂಟ್ ನ ಎ ಬ್ಲಾಕ್ ನ 5ನೇ ಅಂತಸ್ತಿನಲ್ಲಿರುವ ಫ್ಲಾಟ್ ಸಂಖ್ಯೆ 508ರಲ್ಲಿ ಲೆಕ್ಕವಿಡದ ಹಣ ಇದೆ ಎಂಬ ಮಾಹಿತಿ ಆಧರಿಸಿ ಫ್ಲಾಟ್ ಗೆ ಹೋದಾಗ ಡಾ. ಶಕೀಲಾ ಶೆಟ್ಟಿ ಎಂಬ ವೃದ್ಧೆ ಎರಡು ನಾಯಿಗಳೊಂದಿಗೆ ಮನೆಯಲ್ಲಿರುತ್ತಾರೆ. ಮೊದಲಿಗೆ ಮನೆಗೆ ಕಾವಲಿದ್ದ ನಾಯಿಗಳನ್ನು ಕಟ್ಟಿಹಾಕಲು ಒಪ್ಪದಿದ್ದ ವೃದ್ಧೆ ನಂತರ ಪೊಲೀಸರು ಬಂದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಮನೆ ಒಳಗೆ ಬಿಟ್ಟುಕೊಂಡರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT