ಮಹಾವ್ಯಗಳ ಸಂದೇಶದ ಬಗ್ಗೆ ರಾಷ್ಟ್ರಮಟ್ಟದ ಸಮ್ಮೇಳನ 
ರಾಜ್ಯ

ಜೂ.17 ರಿಂದ ಮಹಾಕಾವ್ಯಗಳ ಸಂದೇಶದ ಬಗ್ಗೆ ರಾಷ್ಟ್ರಮಟ್ಟದ ಸಮ್ಮೇಳನ

ಇಸ್ಕಾನ್ ಹಾಗೂ ಭಾರತೀಯ ವಿದ್ಯಾಭವನ ಸಂಸ್ಥೆಗಳು ಈ ಬಾರಿ ಮಹಾಕಾವ್ಯಗಳ ಸಂದೇಶಗಳ ಬಗ್ಗೆ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ.

ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ವೇದ ಸಂವಾದ, ಉಪನಿಷತ್ ಸಂದೇಶ, ಮಹಾಪುರಾಣಗಳ ಸಂದೇಶಗಳ ರಾಷ್ಟ್ರೀಯ ಸಮ್ಮೇಳನ ನಡೆಸಿದ್ದ ಇಸ್ಕಾನ್ ಹಾಗೂ ಭಾರತೀಯ  ವಿದ್ಯಾಭವನ ಸಂಸ್ಥೆಗಳು ಈ ಬಾರಿ ಮಹಾಕಾವ್ಯಗಳ ಸಂದೇಶಗಳ ಬಗ್ಗೆ ರಾಷ್ಟ್ರೀಯ  ಸಮ್ಮೇಳನವನ್ನು ಆಯೋಜಿಸಿದೆ.

ರಾಮಾಯಣ, ಮಹಾಭಾರತ ಸೇರಿದಂತೆ ಭಾರತೀಯ ಪೌರಾಣಿಕ ಗ್ರಂಥಗಳ ಮೂಲ ಆಶಯವನ್ನು ಚರ್ಚಿಸುವುದು, ಇಂದಿನ ಯುವ ಪೀಳಿಗೆಗೆ ಮಹಾಕಾವ್ಯ ಕುರಿತ ಸಾಮಾನ್ಯ ಗ್ರಹಿಕೆಯನ್ನು ನೀಡುವುದು ಈ ಸಮ್ಮೇಳನದ ಆಶಯ.

ಜೂ.17 ರಿಂದ ಜೂ.20 ವರೆಗೆ (ನಾಲ್ಕು ದಿನ) ನಡೆಯಲಿರುವ ಈ ಸಮ್ಮೇಳನದಲ್ಲಿ  ವಿವಿಧ ರಾಜ್ಯಗಳ 60ಕ್ಕೂ ಹೆಚ್ಚು ವಿದ್ವಾಂಸರು ಮಹಾಕಾವ್ಯಗಳ ಬಗ್ಗೆ ಮಾತನಾಡಲಿದ್ದಾರೆ. ಅಷ್ಟೇ ಅಲ್ಲದೇ ವಿವಿಧ ಧರ್ಮ–ಭಾಷೆಗಳ ಜಾನಪದ ಸಾಹಿತ್ಯದ ಬಗ್ಗೆ ಉಪನ್ಯಾಸ ಸರಣಿ ನಡೆಯಲಿದೆ.

ಭಾರತೀಯ ಭಾಷೆಗಳಾದ ಕನ್ನಡ, ತುಳು, ಕೊಡವ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಗುಜರಾತಿ, ಪಂಜಾಬಿ, ಕಾಶ್ಮೀರಿ, ಉರ್ದು ಜೊತೆಗೆ ಹೊರ ದೇಶದ ಗ್ರೀಕ್, ಲ್ಯಾಟಿನ್ ಭಾಷೆಗಳ ಮಹಾಕಾವ್ಯಗಳ ಬಗ್ಗೆಯೂ ಚರ್ಚೆಯೂ ನಡೆಯಲಿರುವುದು ಈ ಬಾರಿಯ ವಿಶೇಷತೆಯಾಗಿದೆ. ವಿಚಾರ ಗೋಷ್ಠಿಯ ನಡುವೆ ಪ್ರಸ್ತುತಪಡಿಸಲಾಗುವ ಮಹಾಕಾವ್ಯದ ಆಯ್ದ ಭಾಗಗಳ ಗಮಕ, ಗಾಯನ, ನೃತ್ಯರೂಪಕ, ಗಮಕಕ್ಕೆ ಶತಾವಧಾನಿ ಆರ್. ಗಣೇಶ್ ವ್ಯಾಖ್ಯಾನ ಮಾಡಲಿದ್ದಾರೆ. ಮಹಾಕಾವ್ಯ’ ಸಮ್ಮೇಳನದ ಕಾರ್ಯಕ್ರಮ  www.vvblive.org ವೆಬ್ ಸೈಟ್ ನಲ್ಲಿ    ನೇರಪ್ರಸಾರವಾಗಲಿದೆ.

ಸ್ಥಳ: ಇಸ್ಕಾನ್, ಮಲ್ಟಿ ವಿಷನ್ ಥಿಯೇಟರ್, ಹರೇಕೃಷ್ಣ ಹಿಲ್, ಪಶ್ಚಿಮ ಕಾರ್ಡ್‌ ರಸ್ತೆ, ಬೆಳಿಗ್ಗೆ 10.30.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT