ಸಿದ್ದರಾಮಯ್ಯ 
ರಾಜ್ಯ

ಸಿಎಂ ಸಿದ್ದರಾಮಯ್ಯಗೆ ಕೊಳ್ಳೇಗಾಲ ವ್ಯಕ್ತಿ ಶಾಪ

ಸಿದ್ದರಾಮಣ್ಣ ದೇವ್ರು ನಿಂಗೆ ಒಳ್ಳೇದು ಮಾಡಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರಿನಲ್ಲಿ ಶಾಪ ಹಾಕಿದ ಘಟನೆ ...

ಮೈಸೂರು: ಮೂಢನಂಬಿಕೆ ವಿರೋಧಿ ಮಸೂದೆ ಜಾರಿಗೆ ತರುವುದಾಗಿ ಹೇಳಿರುವ ಸಿಎಂ ಸಿದ್ದರಾಮಯ್ಯ ಪದೇಪದೇ ಅದೇ ಮೂಡನಂಬಿಕೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಮೊನ್ನೆಯಷ್ಟೇ ತಮ್ಮ ಕಾರಿನ ಮೇಲೆ ಕಾಗೆ ಕೂತಿದ್ದರಿಂದ ಕಾರು ಬದಲಾವಣೆ ಮಾಡಿದ ಸಿದ್ದರಾಮಯ್ಯ ವ್ಯಕ್ತಿಯೊಬ್ಬರು ತಂದ ಶಾಲನ್ನು ಸ್ವೀಕರಿಸಿದೆ ನಿರಾಕರಿಸಿದ್ದಾರೆ.

ಮೈಸೂರಿನ ನಿವಾಸದಿಂದ ಬೆಂಗಳೂರಿಗೆ ಹೊರಡುವ ವೇಳೆ, ಶಾರದ ನಿವಾಸದ ಬಳಿ ಬಂದ ವ್ಯಕ್ತಿಯೊಬ್ಬ ನಾನು ಕೊಳ್ಳೇಗಾಲದವನು, ದೇವರ ಪೂಜೆ ಮಾಡಿ ವಸ್ತ್ರ ತಂದಿದ್ದೇನೆ ತೆಗೆದುಕೊಳ್ಳಿ ಎನ್ನುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಆತನಿಂದ ದೂರ ಸರಿದರು ಎನ್ನಲಾಗಿದೆ. ಕೊಳ್ಳೇಗಾಲದ ವ್ಯಕ್ತಿ ದೇವರಿಗೆ ಕಳಸ ಪೂಜೆ ಮಾಡಿ ತಂದಿದ್ದ ಶಾಲನ್ನು ಕೊಡಲು ಮುಂದಾಗಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಆದರೆ ಆ ಶಾಲನ್ನು ಸ್ವೀಕರಿಸದ  ಸಿಎಂ ಯಾವುದೇ ಪ್ರತಿಕ್ರಿಯೆ ನೀಡದೇ ಕಾರನ್ನು ಏರಿದ್ದರು. ಆಗ ಕೊಳ್ಳೇಗಾಲದ ವ್ಯಕ್ತಿ ಸಿಎಂ ಕುಳಿತಿದ್ದ ಕಾರಿನ ಬಳಿ ಬಂದು, ಸಿದ್ದರಾಮಣ್ಣ ದೇವ್ರು ನಿಂಗೆ ಒಳ್ಳೇದು ಮಾಡಲ್ಲ ಎಂದು ಶಾಪ ಹಾಕಿದ್ದ!

ತದನಂತರ ಕೊಳ್ಳೇಗಾಲದ ಆ ವ್ಯಕ್ತಿ ಅಪ್ಪ, ಅಮ್ಮನಿಗೆ ಅನಾರೋಗ್ಯವಿದೆ ಚಿಕಿತ್ಸೆಗೆ ಹಣ ಬೇಕೆಂದು ಮನವಿ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT