ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು : ಪ್ರತಿದಿನ ಸರಿಸುಮಾರು 60 ಡ್ರೈವಿಂಗ್ ಲೈಸೆನ್ಸ್ ಅಮಾನತು

ವರ್ಷದಿಂದ ವರ್ಷಕ್ಕೆ ಡ್ರೈವಿಂಗ್ ಲೈಸೆನ್ಸ್ ಅಮಾನತು ಪ್ರಮಾಣ ಹೆಚ್ಚುತ್ತಿದ್ದು, ಸಾವಿರಾರು ಚಾಲಕರು ತಮ್ಮ ಚಾಲನ ಪರವಾನಗಿ ಕಳೆದು ಕೊಳ್ಳುತ್ತಿದ್ದಾರೆ. 2012 ರಲ್ಲಿ 5,587 ಇದ್ದದ್ದು ...

ಬೆಂಗಳೂರು: ಮುಂದಿನ ಬಾರಿ ನಿವೇನಾದ್ರೂ ಸಂಚಾರ ನಿಯಮ ಉಲ್ಲಂಘನೆ, ವೇಗದ ಚಾಲನೆ, ಅಥವಾ ಕುಡಿದು ವಾಹನ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕರೇ ನೀವು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ, ಕ್ಷಮೆಯಂತೂ ಸಿಗೋದೆ ಇಲ್ಲ. ಜಾಮೀನಿಗಾಗಿ ತೆರಳಬೇಕಾದೀತು.

ವರ್ಷದಿಂದ ವರ್ಷಕ್ಕೆ ಡ್ರೈವಿಂಗ್ ಲೈಸೆನ್ಸ್ ಅಮಾನತು ಪ್ರಮಾಣ ಹೆಚ್ಚುತ್ತಿದ್ದು, ಸಾವಿರಾರು ಚಾಲಕರು ತಮ್ಮ ಚಾಲನ ಪರವಾನಗಿ ಕಳೆದು ಕೊಳ್ಳುತ್ತಿದ್ದಾರೆ. 2012 ರಲ್ಲಿ 5,587 ಇದ್ದದ್ದು 2015ರಲ್ಲಿ 21,758 ರಷ್ಟು ಏರಿಕೆಯಾಗಿದೆ, ಅಂದರೆ ಪ್ರತಿದಿನ ಸುಮಾರು 60 ಚಾಲಕರ ಪರವಾನಗಿ ರದ್ದಾಗುತ್ತಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಡ್ರೈವಿಂಗ್ ಲೈಸೆನ್ಸ್ ಅಮಾನತು ಗೊಳ್ಳುವವರ ಪೈಕಿ ಕುಡಿದು ವಾಹನ ಚಾಲನೆ ಮಾಡಿ ಸಿಕ್ಕಿ ಹಾಕಿಕೊಂಡವರೇ ಹೆಚ್ಚು, ಪದೇ ಪದೇ ಕುಡಿದು ಚಾಲನೆ ಮಾಡುವ ಡ್ರೈವರ್ ಗಳ ಲೈಸೆನ್ಸ್ ರದ್ದು ಪಡಿಸಲಾಗುತ್ತಿದೆ ಎಂದು ಹೆಚ್ಚುವರಿ ಸಂಚಾರಿ ಪೊಲೀಸ್ ಆಯುಕ್ತ ಆರ್ ಹಿತೇಂದ್ರ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಇದೇ ವೇಳೆ ಬೆಂಗಳೂರಿನಲ್ಲಿ ಅಪಘಾತದ ಪ್ರಮಾಣ ಕೂಡ ಗಣನೀಯವಾಗಿ ಕಡಿಮೆಯಾಗಿರುವುದು ತಿಳಿದು ಬಂದಿದೆ.

ಚಾಲನಾ ಪರವಾನಗಿ ಅಮಾನತು ಆಗುತ್ತದೆ ಹಾಗೂ ಹಲವು ಕಾನೂನು ಕ್ರಮ ಎದುರಿಸಬೇಕು ಎಂಬ ಭಯದಲ್ಲಿ ಚಾಲಕರು ಕುಡಿದು ವಾಹನ ಚಾಲನೆ ಮಾಡುವುದನ್ನು ತಪ್ಪಿಸಿದ್ದಾರೆ  ಹೀಗಾಗಿ ಅಪಘಾತಗಳ ಸಂಖ್ಯೆ ಇಲಿಮುಖವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಡ್ರಂಕ್ ಅಂಡ್ ಡ್ರೈವ್, ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಕೆ, ಸರಕು ಸಾಗಣೆ ಮಾಡುವಾಗ ಹೆಚ್ಚಿನ ಹಣದ ಬೇಡಿಕೆ, ಹಿಟ್ ಅಂಡ್ ರನ್ ಕೇಸ್, ಫುಟ್ ಪಾತ್ ನಲ್ಲಿ ಚಾಲನೆ, ಮತ್ತು ವೇಗವಾಗಿ ಚಾಲನೆ ಕಾರಣಗಳಿಗಾಗಿ ಡೈವಿಂಗ್ ಲೈಸೆನ್ಸ್ ಹೆಚ್ಚಿನ ಪ್ರಮಾಣದಲ್ಲಿ ಅಮಾನತುಗೊಂಡಿದೆ.

ಭಾರತೀಯ ಮೋಟಾರು ವಾಹನ ಕಾಯಿದೆ 19 ಹಾಗೂ 21ರ ನಿಯಮದಂತೆ 6 ತಿಂಗಳುಗಳ ಕಾಲ ವಾಹನ ಪರವಾನಗಿ ರದ್ದು ಪಡಿಸುವಂತೆ ಕೋರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಶಿಫಾರಸ್ಸು ಮಾಡಿರುವುದಾಗಿ ಹಿರಿಯ ಸಂಚಾರಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT