ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು : ಪ್ರತಿದಿನ ಸರಿಸುಮಾರು 60 ಡ್ರೈವಿಂಗ್ ಲೈಸೆನ್ಸ್ ಅಮಾನತು

ವರ್ಷದಿಂದ ವರ್ಷಕ್ಕೆ ಡ್ರೈವಿಂಗ್ ಲೈಸೆನ್ಸ್ ಅಮಾನತು ಪ್ರಮಾಣ ಹೆಚ್ಚುತ್ತಿದ್ದು, ಸಾವಿರಾರು ಚಾಲಕರು ತಮ್ಮ ಚಾಲನ ಪರವಾನಗಿ ಕಳೆದು ಕೊಳ್ಳುತ್ತಿದ್ದಾರೆ. 2012 ರಲ್ಲಿ 5,587 ಇದ್ದದ್ದು ...

ಬೆಂಗಳೂರು: ಮುಂದಿನ ಬಾರಿ ನಿವೇನಾದ್ರೂ ಸಂಚಾರ ನಿಯಮ ಉಲ್ಲಂಘನೆ, ವೇಗದ ಚಾಲನೆ, ಅಥವಾ ಕುಡಿದು ವಾಹನ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕರೇ ನೀವು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ, ಕ್ಷಮೆಯಂತೂ ಸಿಗೋದೆ ಇಲ್ಲ. ಜಾಮೀನಿಗಾಗಿ ತೆರಳಬೇಕಾದೀತು.

ವರ್ಷದಿಂದ ವರ್ಷಕ್ಕೆ ಡ್ರೈವಿಂಗ್ ಲೈಸೆನ್ಸ್ ಅಮಾನತು ಪ್ರಮಾಣ ಹೆಚ್ಚುತ್ತಿದ್ದು, ಸಾವಿರಾರು ಚಾಲಕರು ತಮ್ಮ ಚಾಲನ ಪರವಾನಗಿ ಕಳೆದು ಕೊಳ್ಳುತ್ತಿದ್ದಾರೆ. 2012 ರಲ್ಲಿ 5,587 ಇದ್ದದ್ದು 2015ರಲ್ಲಿ 21,758 ರಷ್ಟು ಏರಿಕೆಯಾಗಿದೆ, ಅಂದರೆ ಪ್ರತಿದಿನ ಸುಮಾರು 60 ಚಾಲಕರ ಪರವಾನಗಿ ರದ್ದಾಗುತ್ತಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಡ್ರೈವಿಂಗ್ ಲೈಸೆನ್ಸ್ ಅಮಾನತು ಗೊಳ್ಳುವವರ ಪೈಕಿ ಕುಡಿದು ವಾಹನ ಚಾಲನೆ ಮಾಡಿ ಸಿಕ್ಕಿ ಹಾಕಿಕೊಂಡವರೇ ಹೆಚ್ಚು, ಪದೇ ಪದೇ ಕುಡಿದು ಚಾಲನೆ ಮಾಡುವ ಡ್ರೈವರ್ ಗಳ ಲೈಸೆನ್ಸ್ ರದ್ದು ಪಡಿಸಲಾಗುತ್ತಿದೆ ಎಂದು ಹೆಚ್ಚುವರಿ ಸಂಚಾರಿ ಪೊಲೀಸ್ ಆಯುಕ್ತ ಆರ್ ಹಿತೇಂದ್ರ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಇದೇ ವೇಳೆ ಬೆಂಗಳೂರಿನಲ್ಲಿ ಅಪಘಾತದ ಪ್ರಮಾಣ ಕೂಡ ಗಣನೀಯವಾಗಿ ಕಡಿಮೆಯಾಗಿರುವುದು ತಿಳಿದು ಬಂದಿದೆ.

ಚಾಲನಾ ಪರವಾನಗಿ ಅಮಾನತು ಆಗುತ್ತದೆ ಹಾಗೂ ಹಲವು ಕಾನೂನು ಕ್ರಮ ಎದುರಿಸಬೇಕು ಎಂಬ ಭಯದಲ್ಲಿ ಚಾಲಕರು ಕುಡಿದು ವಾಹನ ಚಾಲನೆ ಮಾಡುವುದನ್ನು ತಪ್ಪಿಸಿದ್ದಾರೆ  ಹೀಗಾಗಿ ಅಪಘಾತಗಳ ಸಂಖ್ಯೆ ಇಲಿಮುಖವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಡ್ರಂಕ್ ಅಂಡ್ ಡ್ರೈವ್, ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಕೆ, ಸರಕು ಸಾಗಣೆ ಮಾಡುವಾಗ ಹೆಚ್ಚಿನ ಹಣದ ಬೇಡಿಕೆ, ಹಿಟ್ ಅಂಡ್ ರನ್ ಕೇಸ್, ಫುಟ್ ಪಾತ್ ನಲ್ಲಿ ಚಾಲನೆ, ಮತ್ತು ವೇಗವಾಗಿ ಚಾಲನೆ ಕಾರಣಗಳಿಗಾಗಿ ಡೈವಿಂಗ್ ಲೈಸೆನ್ಸ್ ಹೆಚ್ಚಿನ ಪ್ರಮಾಣದಲ್ಲಿ ಅಮಾನತುಗೊಂಡಿದೆ.

ಭಾರತೀಯ ಮೋಟಾರು ವಾಹನ ಕಾಯಿದೆ 19 ಹಾಗೂ 21ರ ನಿಯಮದಂತೆ 6 ತಿಂಗಳುಗಳ ಕಾಲ ವಾಹನ ಪರವಾನಗಿ ರದ್ದು ಪಡಿಸುವಂತೆ ಕೋರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಶಿಫಾರಸ್ಸು ಮಾಡಿರುವುದಾಗಿ ಹಿರಿಯ ಸಂಚಾರಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

SCROLL FOR NEXT