ಹುಲಿಕಲ್ ನಟರಾಜ್ 
ರಾಜ್ಯ

ಐವರು ಮಹಿಳೆಯರಿಗೆ ಹಿಡಿದಿದ್ದ ದೆವ್ವ ಬಿಡಿಸಿದ ಹುಲಿಕಲ್ ನಟರಾಜ್!

ಕಳೆದ ಹಲವು ತಿಂಗಳಿಂದ ವಿಚಿತ್ರವಾಗಿ ವರ್ತಿಸುತ್ತಿದ್ದ ಆವರು ಮಹಿಳೆಯರಿಗೆ ಮಾಂತ್ರಿಕನೊಬ್ಬ ಚಿಕಿತ್ಸೆ ನೀಡಿದ ಮೇಲೆ ಆ ಮಹಿಳೆಯರು ಈಗ ಸಹಜವಾಗಿ

ದಾವಣೆಗೆರೆ: ಕಳೆದ ಹಲವು ತಿಂಗಳಿಂದ ವಿಚಿತ್ರವಾಗಿ ವರ್ತಿಸುತ್ತಿದ್ದ ಆವರು ಮಹಿಳೆಯರಿಗೆ ಮಾಂತ್ರಿಕನೊಬ್ಬ ಚಿಕಿತ್ಸೆ ನೀಡಿದ ಮೇಲೆ ಆ ಮಹಿಳೆಯರು ಈಗ ಸಹಜ ಸ್ಥಿತಿಗೆ ಮರಳಿರುವ ಘಟನೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಹುಲಿಕಟ್ಟೆ ಗ್ರಾಮದಲ್ಲಿ ನಡೆದಿದೆ.

ಇಬ್ಬರು ಗೃಹಿಣಿಯರು ಹಾಗೂ ಮೂವರು ವಿದ್ಯಾರ್ಥಿನಿಯರು, ಕಳೆದ ಹಲವು ದಿನಗಳಿಂದ ಏರು ಧ್ವನಿಯಲ್ಲಿ ಕಿರುಚುತ್ತಿದ್ದರು. ಜೊತೆಗೆ ತಾವು ಸಾಯುವುದಾಗಿ ಹೇಳುತ್ತಿದ್ದರು. ಇಬ್ಬರು ಗೃಹಿಣಿಯರು ಜ್ವರದಿಂದ ಬಳಲುತಿದ್ದರು. ಈ ಐವರ ವರ್ತನೆಯಿಂದ  ಆಶ್ಚರ್ಯಗೊಂಡಿದ್ದ ಗ್ರಾಮಸ್ಥರು ಇವರಿಗೆ ದೆವ್ವ ಹಿಡಿದಿದೆ ಎಂದು ಭಾವಿಸಿದ್ದರು.

ಇದನ್ನು ಮನಗಂಡ ಶಾಸಕ ರವೀಂದ್ರ ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ ಅವರ ಸಹಾಯ ಪಡೆದು, ಅವರ ಜೊತೆ ಮಹಿಳೆಯರ ಭೇಟಿ ಏರ್ಪಡಿಸಿದ್ದರು.
ಈ ಐವರು ಮಹಿಳೆಯರನ್ನು  ದೊಡ್ಡಬಳ್ಳಾಪುರದಲ್ಲಿರುವ ಮಾನಸ ಸುರಕ್ಷಾ ಮೆಂಟಲ್ ಕೇರ್ ಹೋಮ್ ಗೆ ದಾಖಲಿಸಲಾಯಿತು.  ನಂತರ ಅವರಿಗೆ ಅಲ್ಲಿ ಮಾನಸಿಕ ರೋಗ ಚಿಕಿತ್ಸೆ ಮತ್ತು ಕೌನ್ಸೆಲಿಂಗ್ ನಡೆಸಲಾಯಿತು. ಮತ್ತೆ ಈ ಐವರಿಗೂ, ಯೋಗ, ಧ್ಯಾನ ಮಾಡಿಸುವುದು ಸೇರಿದಂತೆ ಹಲವು ಧಾರ್ಮಿಕ ಕೇಂದ್ರಗಳಿಗೂ ಕರೆದೊಯ್ಯಲಾಯಿತು.

ನಂತರ ಐವರನ್ನು ವಾಪಸ್ ಹುಲಿಕಟ್ಟೆ ಗ್ರಾಮಕ್ಕೆ ಕರೆತರಲಾಗಿದೆ, ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ, ಸಂಕಟದಿಂದ ಬಳಲುತ್ತಿದ್ದೆ, ಈಗ ಎಲ್ಲವು ಗುಣಮುಖವಾಗಿ ಆರೋಗ್ಯದಿಂದ ಇರುವುದಾಗಿ ಚಿಕಿತ್ಸೆ ಪಡೆದ ಪಿಯು ವಿದ್ಯಾರ್ಥಿನಿ ತಿಳಿಸಿದ್ದಾಳೆ.

ಯಾವುದೇ ಭೂತ, ದೆವ್ವ ಇಲ್ಲ, ಮಾನಸಿಕವಾಗಿ ದುರ್ಬಲವಾಗಿರುವವರು ಈ ರೀತಿ ಅಪರಿಚಿತವಾಗಿ ವರ್ತಿಸುತ್ತಾರೆ. ದೆವ್ವ ಮಾನವ ದೇಹವನ್ನು ಸೇರುತ್ತದೆ ಎಂಬುದೆಲ್ಲಾ ಸುಳ್ಳು ಎಂದು ಹುಲಿಕಲ್ ನಟರಾಜ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT