ಕೈ ಕಳೆದುಕೊಂಡ ಬಾಲಕ ಸೂರ್ಯಕಾಂತ ಭೀಮಾಶಂಕರ (ಟಿಎನ್ ಐಇ ಚಿತ್ರ) 
ರಾಜ್ಯ

ಕಬ್ಬಿನ ಯಂತ್ರಕ್ಕೆ ಕೈ ಸಿಲುಕಿ 10 ವರ್ಷದ ಬಾಲ ಕಾರ್ಮಿಕನ ಕೈ ಕಟ್!

ಕಬ್ಬಿನ ಯಂತ್ರಕ್ಕೆ ಕೈ ಸಿಲುಕಿ 10 ವರ್ಷದ ಪುಟ್ಟ ಬಾಲಕನೊಬ್ಬನ ಕೈ ಕತ್ತರಿಸಿ ಹೋದ ಘಟನೆ ಕಲಬುರ್ಗಿಯಲ್ಲಿ ಬುಧವಾರ ನಡೆದಿದೆ..

ಕಲಬುರ್ಗಿ: ಕಬ್ಬಿನ ಯಂತ್ರಕ್ಕೆ ಕೈ ಸಿಲುಕಿ 10 ವರ್ಷದ ಪುಟ್ಟ ಬಾಲಕನೊಬ್ಬನ ಕೈ ಕತ್ತರಿಸಿ ಹೋದ ಘಟನೆ ಕಲಬುರ್ಗಿಯಲ್ಲಿ ಬುಧವಾರ ನಡೆದಿದೆ.

ಕಲಬುರ್ಗಿಯ ಸೇಡಂ ಪಟ್ಟಣದ ರೈಲ್ವೇ ನಿಲ್ದಾಣದ ಮುಂಭಾಗದಲ್ಲಿನ ರಸ್ತೆಯಲ್ಲಿ ಬುಧವಾರ ಕಬ್ಬು ಅರೆಯಲು ಹೋಗಿ ಬಾಲಕ ಕಾರ್ಮಿಕನೊಬ್ಬ ಕೈ ಕಳೆದುಕೊಂಡಿದ್ದಾನೆ. ಸಂತ್ರಸ್ಥ ಬಾಲಕನನ್ನು  ಭೀಮಾಶಂಕರ ಸೂರ್ಯಕಾಂತ (10 ವರ್ಷ) ಎಂದು ತಿಳಿದುಬಂದಿದ್ದು, ಇತ್ತೀಚೆಗಷ್ಟೇ ಈತ ಕಬ್ಬಿನ ಹಾಲಿನ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಎಂದು ಹೇಳಲಾಗುತ್ತಿದೆ.

ಬುಧವಾರ ಯಂತ್ರದ ಮೂಲಕ ಕಬ್ಬಿನ ಹಾಲನ್ನು ಉತ್ಪಾದಿಸಿ ಸಿಪ್ಪೆಯನ್ನು ಹೊರ ತೆಗೆಯುವಾಗ ಅವಘಡ ಸಂಭವಿಸಿದ್ದು, ಕೂಡಲೇ ಆತನನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಆದರೆ ಕೈ ಸಂಪೂರ್ಣ ನಜ್ಜುಗುಜ್ಜಾಗಿದ್ಜರಿಂದ ಕೈಯನ್ನು ತೆಗೆಯಲಾಯಿತು ಎಂದು ವೈದ್ಯರು ಹೇಳಿದ್ದಾರೆ. ಪ್ರಸ್ತುತ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ  ಕಲಬುರಗಿಗೆ ಕರೆದುಕೊಂಡು ಹೋಗಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ  ಕಬ್ಬಿನ ಹಾಲಿನ ಅಂಗಡಿಯ ಮಾಲೀಕರು, ಹುಡುಗನ ಮನೆಯಲ್ಲಿ ತೀವ್ರ ಕಷ್ಟವಿದ್ದರಿಂದ ಆತನನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು. ಆತನಿಗೆ ನಿತ್ಯ 150 ರು ಕೂಲಿ  ನೀಡಲಾಗುತ್ತಿತ್ತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT