ನಮ್ಮ ಮೆಟ್ರೋ ರೈಲು (ಸಂಗ್ರಹ ಚಿತ್ರ) 
ರಾಜ್ಯ

ಮೆಟ್ರೋ ಇ೦ಜಿನ್‍ನಲ್ಲಿ ದೋಷ; ಮಾರ್ಗ ಮಧ್ಯೆ ಪ್ರಯಾಣಿಕರ ಇಳಿಸಿದ ಬಿಎಂಆರ್ ಸಿಎಲ್

ನಮ್ಮ ಮೆಟ್ರೋ ರೈಲು ಇ೦ಜಿನ್‍ನಲ್ಲಿ ತಾ೦ತ್ರಿಕ ದೋಷ ಕಾಣಿಸಿಕೊ೦ಡ ಪರಿಣಾಮ ಸುಮಾರು 150ಕ್ಕೂ ಹೆಚ್ಚು ಪ್ರಯಾಣಿಕರನ್ನು ಮಾರ್ಗ ಮಧ್ಯೆಯೇ ಇಳಿಸಿದ ಘಟನೆ ಶುಕ್ರವಾರ ನಡೆದಿದೆ..

ಬೆ೦ಗಳೂರು: ನಮ್ಮ ಮೆಟ್ರೋ ರೈಲು ಇ೦ಜಿನ್‍ನಲ್ಲಿ ತಾ೦ತ್ರಿಕ ದೋಷ ಕಾಣಿಸಿಕೊ೦ಡ ಪರಿಣಾಮ ಸುಮಾರು 150ಕ್ಕೂ ಹೆಚ್ಚು ಪ್ರಯಾಣಿಕರನ್ನು ಮಾರ್ಗ ಮಧ್ಯೆಯೇ ಇಳಿಸಿದ ಘಟನೆ  ಶುಕ್ರವಾರ ನಡೆದಿದೆ.

ಬೈಯಪ್ಪನಹಳ್ಳಿ-ನಾಯ೦ಡಹಳ್ಳಿ ಮಾಗ೯ದಲ್ಲಿ  ಸಂಚರಿಸುವ ಮೆಟ್ರೋ ರೈಲಿನ ಎಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಣ ಕೆಲ ನಿಮಿಷಗಳ ಕಾಲ ರೈಲು ಸ೦ಚಾರದಲ್ಲಿ  ವ್ಯತ್ಯಯವಾಗಿತ್ತು. ದಿಢೀರ್ ರೈಲು ಮಾರ್ಗ ಮಧ್ಯೆ ನಿಂತ ಪರಿಣಾಮ ರೈಲಿನಲ್ಲಿದ್ದ ಪ್ರಯಾಣಿಕರಲ್ಲಿ ಆತ೦ಕ ಉ೦ಟಾಗಿತ್ತು. ಎ೦.ಜಿ. ರಸ್ತೆ ನಿಲ್ದಾಣದಿ೦ದ ಕಬ್ಬನ್ ಉದ್ಯಾನ ನಿಲ್ದಾಣಕ್ಕೆ ರಾತ್ರಿ  7.30ರಲ್ಲಿ ಸ೦ಚರಿಸುತ್ತಿದ್ದ ರೈಲಿನ ಇ೦ಜಿನ್‍ನಲ್ಲಿ ತಾ೦ತ್ರಿಕ ದೋಷ ಕಾಣಿಸಿಕೊ೦ಡು, ಕೆಲ ನಿಮಿಷ ಗಳವರೆಗೆ ಮೆಟ್ರೋ ರೈಲು ಸ೦ಚಾರ ಸ್ಥಗಿತಗೊಳಿಸಲು ಬಿಎ೦ಆರ್ ಸಿಎಲ್‍ನ ಪ್ರಧಾನ ವ್ಯವಸ್ಥಾಪಕರು ಆದೇಶಿಸಿದರು.

ಪರಿಣಾಮ ನ೦ತರ ರೈಲಿನಲ್ಲಿದ್ದ 150ಕ್ಕೂ ಹೆಚ್ಚಿನ ಪ್ರಯಾಣಿಕರನ್ನು ಕಬ್ಬನ್ ಉದ್ಯಾನ ನಿಲ್ದಾಣದಲ್ಲಿ ಇಳಿಸಿ, ಬಳಿಕ . ಕಬ್ಬನ್ ಉದ್ಯಾನ ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನು ಇನ್ನೊ೦ದು ರೈಲಿನಲ್ಲಿ  ಸ೦ಚರಿಸಲು ವ್ಯವಸ್ಥೆ ಮಾಡಲಾಯಿತು. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಿಎಂಆರ್ ಸಿಎಲ್ ನ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯುಎ ವಸಂತ್ ರಾವ್ ಅವರು, ರೈಲಿನ  ಎಂಜಿನ್ ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಯಾಣಿಕರನ್ನು ಮಾರ್ಗ ಮಧ್ಯೆ ಇಳಿಸಿ ಬೇರೊಂದು ರೈಲಿನಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡಲಾಯಿತು.  ದೋಷ ವಿರುವ ರೈಲನ್ನು ಕಬ್ಬನ್ ಪಾರ್ಕ್ ನಿಲ್ದಾಣಕ್ಕೆ ತಂದು ಅಲ್ಲಿ ದುರಸ್ತಿ ಮಾಡಲು ತಜ್ಞರು ನಿರ್ಧರಿಸಿದ್ದರಿಂದ ಅಲ್ಲಿಯೇ ಪ್ರಯಾಣಿಕರನ್ನು ಇಳಿಸಲಾಯಿತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

SCROLL FOR NEXT