ನಗರದಲ್ಲಿ ತಮ್ಮ ತಂಡದವರ ಜತೆ ಕಸ ಎತ್ತುವುದರಲ್ಲಿ ತೊಡಗಿರುವ ಸುಫಿಯನ್(ಬಲ ಕಡೆಯಲ್ಲಿರುವವರು) 
ರಾಜ್ಯ

ಕಸ ಮುಕ್ತ ಬೆಂಗಳೂರಿಗಾಗಿ ಶ್ರಮಿಸುತ್ತಿರುವ ಸುಫಿಯಾನ್

ಕಳೆದ ಕೆಲ ವರ್ಷಗಳಿಂದ ನಗರಕ್ಕೆ ಸಿಕ್ಕಿರುವ 'ಕಸದ ನಗರ' ಎಂಬ ಕೆಟ್ಟ ಬಿರುದನ್ನು ತೆಗೆದು ಹಾಕಲು 45 ವರ್ಷದ ಉದ್ಯಮಿ...

ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ನಗರಕ್ಕೆ ಸಿಕ್ಕಿರುವ 'ಕಸದ ನಗರ' ಎಂಬ ಕೆಟ್ಟ ಬಿರುದನ್ನು ತೆಗೆದು ಹಾಕಲು 45 ವರ್ಷದ ಉದ್ಯಮಿ ಎಂ.ಎಸ್. ಸುಫಿಯಾನ್ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ.

ಅವರೊಂದು ವಾಟ್ಸಾಪ್ ಗುಂಪನ್ನು ರಚಿಸಿಕೊಂಡಿದ್ದಾರೆ. ಆ ಮೂಲಕ ಕಾರ್ಯಾಗಾರಗಳನ್ನು ಆಯೋಜಿಸುತ್ತಾರೆ. ತಾವು ವಾಸಿಸುವ ಯೂನಿಯನ್ ಸ್ಟ್ರೀಟ್ ನ ಸುತ್ತಮುತ್ತ ಮನೆ ಮನೆಗೆ ಹೋಗಿ ನಿವಾಸಿಗಳನ್ನು, ಪೌರ ಕಾರ್ಮಿಕರನ್ನು ಮತ್ತು ನಗರ ಪಾಲಿಕೆ ಅಧಿಕಾರಿಗಳನ್ನು ಒಟ್ಟು ಸೇರಿಸಿ ತಮ್ಮ ಕೆಲಸಕ್ಕೆ ಕೈ ಜೋಡಿಸುವಂತೆ ಕೋರುತ್ತಾರೆ.

ಸುಫಿಯಾನ್ ಅವರ ದಿನಚರಿ ಆರಂಭವಾಗುವುದು ಬೆಳಗ್ಗೆ 6.30ಕ್ಕೆ. ಪ್ರತಿನಿತ್ಯ ಬೆಳಗ್ಗೆ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ನಗರದ ರಸ್ತೆಗಳಲ್ಲಿ ಹೋಗುತ್ತಾರೆ. ಎಲ್ಲೆಲ್ಲ ಕಸದ ರಾಶಿ ಕಾಣುತ್ತದೆಯೋ ಅಲ್ಲೆಲ್ಲ ಅವುಗಳನ್ನು ಒಂದೋ ಸುಡುತ್ತಾರೆ ಇಲ್ಲವೇ ಒಂದೆಡೆ ರಾಶಿ ಹಾಕಿ ಫೋಟೋ ಕ್ಲಿಕ್ಕಿಸಿ ವಾಟ್ಸಾಪ್ ಗುಂಪಿನಲ್ಲಿ ಹಾಕುತ್ತಾರೆ.

ಇವರು ಸಕ್ರಿಯ ನಿವಾಸಿಗಳ ಅಭಿವೃದ್ಧಿ ಸಂಸ್ಥೆಯ ಸದಸ್ಯರಾಗಿದ್ದು, ಅದು ನಗರದ ಜನರ ಸಮಸ್ಯೆಗಳನ್ನು ಬಗೆಹರಿಸುವುದಾಗಿದೆ. ಇದಕ್ಕಾಗಿ ಪೌರ ಕಾರ್ಮಿಕರನ್ನು ಸೇರಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT