ಬೆಳಗಾವಿಯ ವಡಗಾಂವ್ ಗ್ರಾಮದಲ್ಲಿರುವ ಬಾವಿಯಿಂದ ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಮಾತ್ರ ನೀರು ಸೇದಲು ಅವಕಾಶ. 
ರಾಜ್ಯ

ಬೆಳಗಾವಿಯ ಈ ಗ್ರಾಮಸ್ಥರಿಗೆ ಸಿಗುವುದು ದಿನಕ್ಕೆ ಒಂದು ಬಿಂದಿಗೆ ನೀರು

ದಿನಕ್ಕೆ ಒಂದು ಬಿಂದಿಗೆ ನೀರು. ಇದು ಬೆಳಗಾವಿಯ ಖಾನಾಪುರ ತಾಲ್ಲೂಕಿನ ವಡಗಾಂವ್ ಗ್ರಾಮಸ್ಥರಿಗೆ ಅಲ್ಲಿನ ಬಾವಿಯಿಂದ ...

ಬೆಳಗಾವಿ: ದಿನಕ್ಕೆ ಒಂದು ಬಿಂದಿಗೆ ನೀರು. ಇದು ಬೆಳಗಾವಿಯ ಖಾನಾಪುರ ತಾಲ್ಲೂಕಿನ ವಡಗಾಂವ್ ಗ್ರಾಮಸ್ಥರಿಗೆ ಅಲ್ಲಿನ ಬಾವಿಯಿಂದ ಸಿಗುವ ನೀರು. ಒಂದು ವೇಳೆ ಯಾರಾದರೂ ಹೆಚ್ಚು ನೀರು ಸೇದಿಕೊಂಡರೆ 500 ರೂಪಾಯಿ ದಂಡ ಕಟ್ಟಬೇಕು.

ಈ ನಿಯಮ ಯಾಕೆಂದರೆ ಈ ವರ್ಷದ ಬರಗಾಲ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನತೆ ಬರಗಾಲದಿಂದ ಕಂಗೆಟ್ಟು ಹೋಗಿದ್ದು, ವಡಗಾಂವ್ ಗ್ರಾಮಸ್ಥರು ಇದುವರೆಗೆ ಕಂಡು ಕೇಳಿರದಷ್ಟು ನೀರಿನ ಕೊರತೆಯಿಂದ ಬಳಲುತ್ತಿದ್ದಾರೆ, ಹೀಗಾಗಿ ಅಲ್ಲಿನ ಗ್ರಾಮ ಪಂಚಾಯತ್ ಈ ನಿಯಮ ಜಾರಿಗೆ ತಂದಿದೆ.

ಈ ಗ್ರಾಮದಲ್ಲಿ ಎರಡು ಬಾವಿಗಳಿದ್ದರೂ, ಒಂದರಲ್ಲಿ ನೀರು ಸೇದಿದರೆ ಇನ್ನೊಂದು ಬಾವಿಯ ನೀರು ಆಳಕ್ಕೆ ಹೋಗುತ್ತದೆ. ಹಾಗಾಗಿ ಒಂದೇ ಬಾವಿಯಿಂದ ನೀರು ಸೇದಬೇಕೆಂದು ಪಂಚಾಯತ್ ನಿಯಮ ತಂದಿದೆ.

ಟ್ಯಾಂಕರ್ ನೀರು ದುಬಾರಿ: ಬೇಸಿಗೆಯ ಆರಂಭದಲ್ಲಿ ನೀರಿನ ಟ್ಯಾಂಕರ್ ನವರು ವಡಗಾಂವ್ ಗ್ರಾಮಕ್ಕೆ ಬರುತ್ತಿದ್ದರು. ಆದರೆ ಅವರು ಬಿಂದಿಗೆಯೊಂದಕ್ಕೆ 10 ರೂಪಾಯಿ, ಟ್ಯಾಂಕರ್ ವೊಂದಕ್ಕೆ 800 ರೂಪಾಯಿ ಕೇಳುತ್ತಾರೆ. ಸರ್ಕಾರ ಪ್ರತಿ ಟ್ಯಾಂಕರ್ ಮಾಲಿಕರಿಗೆ 348 ರೂಪಾಯಿ ಕೊಡುತ್ತದೆ. ಆದರೆ ಈ ಹಣ ಕಡಿಮೆಯಾಗುತ್ತದೆ ಎಂದು ಟ್ಯಾಂಕರ್ ನವರು ಈಗ ಬರುತ್ತಿಲ್ಲ. ಖಾಸಗಿಯಾಗಿ ನೀರು ಖರೀದಿಸಿದರೆ ತುಂಬಾ ವೆಚ್ಚವಾಗುತ್ತದೆ ಎಂದು ಗ್ರಾಮಸ್ಥರು ಕೊಂಡುಕೊಳ್ಳುವುದನ್ನು ನಿಲ್ಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!