ಬೆಳಗಾವಿಯ ವಡಗಾಂವ್ ಗ್ರಾಮದಲ್ಲಿರುವ ಬಾವಿಯಿಂದ ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಮಾತ್ರ ನೀರು ಸೇದಲು ಅವಕಾಶ. 
ರಾಜ್ಯ

ಬೆಳಗಾವಿಯ ಈ ಗ್ರಾಮಸ್ಥರಿಗೆ ಸಿಗುವುದು ದಿನಕ್ಕೆ ಒಂದು ಬಿಂದಿಗೆ ನೀರು

ದಿನಕ್ಕೆ ಒಂದು ಬಿಂದಿಗೆ ನೀರು. ಇದು ಬೆಳಗಾವಿಯ ಖಾನಾಪುರ ತಾಲ್ಲೂಕಿನ ವಡಗಾಂವ್ ಗ್ರಾಮಸ್ಥರಿಗೆ ಅಲ್ಲಿನ ಬಾವಿಯಿಂದ ...

ಬೆಳಗಾವಿ: ದಿನಕ್ಕೆ ಒಂದು ಬಿಂದಿಗೆ ನೀರು. ಇದು ಬೆಳಗಾವಿಯ ಖಾನಾಪುರ ತಾಲ್ಲೂಕಿನ ವಡಗಾಂವ್ ಗ್ರಾಮಸ್ಥರಿಗೆ ಅಲ್ಲಿನ ಬಾವಿಯಿಂದ ಸಿಗುವ ನೀರು. ಒಂದು ವೇಳೆ ಯಾರಾದರೂ ಹೆಚ್ಚು ನೀರು ಸೇದಿಕೊಂಡರೆ 500 ರೂಪಾಯಿ ದಂಡ ಕಟ್ಟಬೇಕು.

ಈ ನಿಯಮ ಯಾಕೆಂದರೆ ಈ ವರ್ಷದ ಬರಗಾಲ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನತೆ ಬರಗಾಲದಿಂದ ಕಂಗೆಟ್ಟು ಹೋಗಿದ್ದು, ವಡಗಾಂವ್ ಗ್ರಾಮಸ್ಥರು ಇದುವರೆಗೆ ಕಂಡು ಕೇಳಿರದಷ್ಟು ನೀರಿನ ಕೊರತೆಯಿಂದ ಬಳಲುತ್ತಿದ್ದಾರೆ, ಹೀಗಾಗಿ ಅಲ್ಲಿನ ಗ್ರಾಮ ಪಂಚಾಯತ್ ಈ ನಿಯಮ ಜಾರಿಗೆ ತಂದಿದೆ.

ಈ ಗ್ರಾಮದಲ್ಲಿ ಎರಡು ಬಾವಿಗಳಿದ್ದರೂ, ಒಂದರಲ್ಲಿ ನೀರು ಸೇದಿದರೆ ಇನ್ನೊಂದು ಬಾವಿಯ ನೀರು ಆಳಕ್ಕೆ ಹೋಗುತ್ತದೆ. ಹಾಗಾಗಿ ಒಂದೇ ಬಾವಿಯಿಂದ ನೀರು ಸೇದಬೇಕೆಂದು ಪಂಚಾಯತ್ ನಿಯಮ ತಂದಿದೆ.

ಟ್ಯಾಂಕರ್ ನೀರು ದುಬಾರಿ: ಬೇಸಿಗೆಯ ಆರಂಭದಲ್ಲಿ ನೀರಿನ ಟ್ಯಾಂಕರ್ ನವರು ವಡಗಾಂವ್ ಗ್ರಾಮಕ್ಕೆ ಬರುತ್ತಿದ್ದರು. ಆದರೆ ಅವರು ಬಿಂದಿಗೆಯೊಂದಕ್ಕೆ 10 ರೂಪಾಯಿ, ಟ್ಯಾಂಕರ್ ವೊಂದಕ್ಕೆ 800 ರೂಪಾಯಿ ಕೇಳುತ್ತಾರೆ. ಸರ್ಕಾರ ಪ್ರತಿ ಟ್ಯಾಂಕರ್ ಮಾಲಿಕರಿಗೆ 348 ರೂಪಾಯಿ ಕೊಡುತ್ತದೆ. ಆದರೆ ಈ ಹಣ ಕಡಿಮೆಯಾಗುತ್ತದೆ ಎಂದು ಟ್ಯಾಂಕರ್ ನವರು ಈಗ ಬರುತ್ತಿಲ್ಲ. ಖಾಸಗಿಯಾಗಿ ನೀರು ಖರೀದಿಸಿದರೆ ತುಂಬಾ ವೆಚ್ಚವಾಗುತ್ತದೆ ಎಂದು ಗ್ರಾಮಸ್ಥರು ಕೊಂಡುಕೊಳ್ಳುವುದನ್ನು ನಿಲ್ಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT