ಬೆಂಗಳೂರು ಕಸದ ಸಮಸ್ಯೆ (ಸಂಗ್ರಹ ಚಿತ್ರ) 
ರಾಜ್ಯ

ಬೆಂಗಳೂರು ಕಸದ ಸಮಸ್ಯೆ ನಿವಾರಣೆಗೆ ಮೈಸೂರು ಮಾದರಿ ಯೋಜನೆ

ಕಸದ ಸಮಸ್ಯೆಯಿಂದಾಗಿ ಗಾರ್ಬೇಜ್ ಸಿಟಿ ಎಂದು ಕುಖ್ಯಾತಿ ಪಡೆದಿರುವ ಬೆಂಗಳೂರಿನ ಕಸದ ಸಮಸ್ಯೆ ಶಾಶ್ವತ ನಿವಾರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ದೇಶದ ನಂಬರ್ 1 ಕ್ಲೀನ್ ಸಿಟಿ ಮೈಸೂರು ಮಾದರಿ ಯೋಜನೆ ರೂಪಿಸ ಹೊರಟಿದೆ.

ಬೆಂಗಳೂರು: ಕಸದ ಸಮಸ್ಯೆಯಿಂದಾಗಿ ಗಾರ್ಬೇಜ್ ಸಿಟಿ ಎಂದು ಕುಖ್ಯಾತಿ ಪಡೆದಿರುವ ಬೆಂಗಳೂರಿನ ಕಸದ ಸಮಸ್ಯೆ ಶಾಶ್ವತ ನಿವಾರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ದೇಶದ ನಂಬರ್ 1  ಕ್ಲೀನ್ ಸಿಟಿ ಮೈಸೂರು ಮಾದರಿ ಯೋಜನೆ ರೂಪಿಸ ಹೊರಟಿದೆ.

ಈ ಬಗ್ಗೆ ಮಂಗಳವಾರ ವಿಧಾನಸೌಧದಲ್ಲಿ ಕರೆಯಲಾಗಿದ್ದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ರಾಜೀವ್ ಗಾಬಾ ಮತ್ತು ಸರ್ಕಾರದ ಮುಖ್ಯ  ಕಾರ್ಯದರ್ಶಿ ಅರವಿಂದ್ ಜಾದವ್ ಅವರು ಸೇರಿದಂತೆ ಸರ್ಕಾರದ ಹಲವು ಅಧಿಕಾರಿಗಳು ಪಾಲ್ಗೊಂಡು ಈ ಬಗ್ಗೆ ಚರ್ಚಿಸಿದರು. ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅರವಿಂದ್  ಜಾದವ್ ಅವರು, ಮೈಸೂರು ಏಕೆ ಸತತವಾಗಿ ಸ್ವಚ್ಛ ನಗರಗಳ ಪಟ್ಟಿಯಲ್ಲಿ ನಂಬರ್ ಸ್ಥಾನಕ್ಕೇರುತ್ತಿದೆ ಎಂದು ನಾವು ಗಮನಸಿದಾಗ ಅಲ್ಲಿ ಸಾಕಷ್ಟು ಅಂಶಗಳು ನಮಗೆ ಗೋಚರಿಸಿತು.  ನಗರದಲ್ಲಿ ಶೇ.98ರಷ್ಟು ಒಳಚರಂಡಿ ವ್ಯವಸ್ಥೆ ಇದ್ದು, ನಗರದಲ್ಲಿ ಶೇಖರಣೆಯಾಗುವ ಶೇ.80 ರಷ್ಟು ಕಸವನ್ನು ಇಲ್ಲೇ ಸಂಸ್ಕರಣೆ ಮಾಡಲಾಗುತ್ತದೆ. ಇನ್ನು ಶೇ.95ರಷ್ಚ ಪ್ರಮಾಣದಲ್ಲಿ ಪಾಲಿಕೆ  ಸಿಬ್ಬಂದಿ ಮನೆ-ಮನೆಗೆ ತೆರಳಿ ಕಸ ಸಂಗ್ರಹ ಮಾಡುತ್ತಾರೆ. ಇದೇ ಕಾರಣಕ್ಕಾಗಿ ಮೈಸೂರು ಇಂದಿಗೂ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಮತ್ತೊಂದಷ್ಟು ವರ್ಷಗಳ ಕಾಲ  ಮೈಸೂರೇ ಅಗ್ರ ಸ್ಥಾನದಲ್ಲಿ ಮುಂದುವರೆಯುತ್ತದೆ ಎಂದು ಹೇಳಿದರು.

ತಮ್ಮ ಮಾತನ್ನು ಮುಂದುವರೆಸಿದ ಜಾದವ್, ಮೈಸೂರಿನಲ್ಲಿ ವಾರ್ಡ್ ಮಟ್ಟದಲ್ಲಿ ಕಸ ಸಂಸ್ಕರಣೆ ನಡೆಯುತ್ತದೆ. ಆದರೆ ಬೆಂಗಳೂರಿನಲ್ಲಿ ಈ ವ್ಯವಸ್ಥೆ ಇಲ್ಲ. ಬೆಂಗಳೂರಿನಲ್ಲಿ ಕಸ ನಿರ್ವಹಣಾ  ಘಟಕಗಳ ಕೊರತೆ ಹೆಚ್ಚಿದ್ದು, ಬಿಬಿಎಂಪಿ ಹೆಚ್ಚೆಚ್ಚು ಕಸ ಸಂಗ್ರಹ ವಾಹನಗಳನ್ನು ಖರೀದಿಸುವಂತೆ ಅಥವಾ ವಾಹನಗಳನ್ನು ಲೀಸ್ ಗೆ ಪಡೆಯಲು ಅನುವು ಮಾಡಿಕೊಡುತ್ತೇವೆ. ಈ ಯೋಜನೆ  ಒಂದು ವೇಳೆ ಕಾರ್ಯರೂಪಕ್ಕೆ ಬಂದರೆ ಬಹುತೇಕ ಬೆಂಗಳೂರಿನ ಕಸದ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಜಾದವ್ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT